ಶುಕ್ರವಾರ, ಮೇ 10, 2013


ಬೀchi ಯವರ ಕನ್ನಡ ಎಮ್ಮೆ  ಶುಂಟಿ ಚೂರುಗಳು. ಪ್ರ: ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ -೧
ಫೋ: ೨೭೯೧೬೧೬        
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಕನ್ನಡ ಎಮ್ಮೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • ಈಗ ಸ್ಥೂಲ ಅಧ್ಯಕ್ಷರ ಪರಿಚಯ ಅಲ್ಲಲ್ಲ, ಅಧ್ಯಕ್ಷರ ಸ್ಥೂಲ ಪರಿಚಯ ಮಾಡಿಕೊಡುವ ಹೊಣೆ, ಅಥವಾ ಹೊರೆ ಅನ್ನಿ, ಅಥವಾ ಕೆಲಸ, ಕಾರ್ಯ ಏನಾದರೂ ಅನ್ನಿ, ಈ ಸುಡುಗಾಡು ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ. 
  • ಪೊಲೀಸರು ನಮ್ಮಿಬ್ಬರ ಮೇಲೆ ಕೇಸು ಮಾಡಿದರು; ಆಗ ನಾವಿಬ್ಬರೂ ತಲೆ ಮರೆಸಿ, ವೇಷ ಬದಲಾಯಿಸಿಕೊಂಡು ಹೊರಟೆವು. ಈ ಅಧ್ಯಕ್ಷರು ಹೆಣ್ಣಾದರು; ನಾನು ಇವರ ಗಂಡನಾಗಿ ಇಬ್ಬರೂ ಹತ್ತಿಯ ಹೊಲದಲ್ಲಿ ದುಡಿಯಲು ಕೂಲಿ ಹೊದೆವು. ಇಲ್ಲಿ ಒಂದು ಮಾತನ್ನು ಹೇಳದಿದ್ದರೆ ನನ್ನಿಂದ ಕರ್ತವ್ಯಲೋಪ ಅಗುತ್ತದೆ. ಅದೇನೆಂದರೆ ಇದು ಪೋಲೀಸರ ಕಣ್ಣು ತಪ್ಪಿಸಲಿಕ್ಕಾಗಿಯೇ, ಇವರು ಹೆಣ್ಣು ವೇಷ ಮಾಡಿಕೊಂಡರು. ನಿಜ, ಆದರೆ ಇವರ ದುರ್ದೈವದಿಂದ ಇವರು ಹೆಣ್ಣಾದುದಕ್ಕೇ ಪೊಲೀಸರು ಇವರಿಗೆ ಗಂಟುಬಿದ್ದರು. ಆ ಕತೆ ಎಲ್ಲ ಬೇರೆ, ಈಗದು ಬೇಡ. 
  • ನಮ್ಮ ಅಧ್ಯಕ್ಷ ಮಹಾಶಯರಿಗೆ ಮೊದಲಿನಿಂದಲೂ ಕೂಲಿಕಾರರೆಂದರೆ ಬಹಳ ಪ್ರೀತಿ. ಕೂಲಿಕಾರರನ್ನು ಬಿಟ್ಟು ಅರೆಗಳಿಗೆಯೂ ಇರಲಾರರು. ಯಾಕೆಂದರೆ ಇವರು ಕಂಟ್ರಾಕ್ಟರು.  
ಈಗ ನನ್ನ ಮುಕ್ತಕ 
ಬೊಗಳೆ 
"ನನ್ನ ತಾತನ ಶಾಲು ಇಲ್ಲಿಂದ ಡೆಲ್ಲಿಯ 
ವರೆಗೆ ಹಾಸಲು ಸಾಕಾದೀತು"
"ಅಷ್ಟೇನಾ? ಹಾಗಿದ್ದರದು ನನ್ನ ತಾತನ 
ಶಾಲಿನ ತೂತು ಮುಚ್ಚೀತು"!
                                                        * * * * * * * * * * * * 

    ಮಂಗಳವಾರ, ಏಪ್ರಿಲ್ 30, 2013


    ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
    ಫೋ: ೨೩೬೭೬೭೬         Email: sahithyaprakashana@yahoo.co.in
    ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
    • ಊರು ಚಿಕ್ಕದಿದ್ದಷ್ಟೂ ಊರಲ್ಲಿ ದೊಡ್ಡ ಮನುಷ್ಯರು ಹೆಚ್ಚು. 
              ನಾಟಕದಲ್ಲಿ ಹೆಂಣು ಚೆನ್ನಾಗಿದ್ದಷ್ಟೂ ಊರಲ್ಲಿ ಕಲಾಭಿಮಾನಿಗಳೂ ಹೆಚ್ಚು. ಕರೆಯಿಸಿಕೊಂಡು ಬಂದವರು ಕೆಲವರು, ಅವರಿವರಿಂದ ಹೇಳಿಸಿ ಕರೆಯಿಸಿಕೊಂಡು ಬಂದವರು ಹಲವರು, ತಾವೇ ಕೇಳಿಕೊಂಡು ಬಂದ ಕಂಪಲ್ಸರಿ ಕಾಂಪ್ಲಿಮೆಂಟರಿ ವಾಲಂಟರಿ ಕಲಾಭಿಮಾನಿಗಳಂತೂ ಸರೇ  ಸರೆ 
    ಇವರೆಲ್ಲರೂ ಕಲಾಭಿಮಾನಿಗಳೇ. ಬಂಗಾರಿಯ ದುಂಡು ಮುಖವೇ ಕಲೆ!

    ಮುಕ್ತಕ 

    ಸ್ವಕೀಯ-ಪರಕೀಯ 
    ನಿನ್ನವರಾದರು ಖಳರ ಸಂಗವು ಬೇಡ 
    ಸುಜನರು ಪರರಾದರೇನು?
    ನಿನ್ನೊಳೆ ಜನಿಸಿದ ರೋಗವ ಕಳೆಯದೆ 
    ಕಾಡಿನ ಮೂಲಿಕೆ ತಾನು!
                                                **********
    ಮುಂದಿನ ಪುಸ್ತಕ: ಕನ್ನಡ ಎಮ್ಮೆ. 

      ಸೋಮವಾರ, ಏಪ್ರಿಲ್ 22, 2013


      ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
      ಫೋ: ೨೩೬೭೬೭೬         Email: sahithyaprakashana@yahoo.co.in
      ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
      • "ಜಲದ ಮೇಲ್ ತೇಲುವ ನೆಲದ ಬಸಿರಿನ ನೀರು ಥಕಥಕನೆ ಕುದಿದುರಿದು, ಗಿಡಮರ, ಪರ್ವತ ಗಿರಿಂಗಳು ಸರಭರನೆ ಮುರಿದುರುಲಿ, ಧಡಂ ಧಡಂ ಎಂದು ಬಿದ್ದೆದ್ದು ಪುಡಿಪುಡಿಯಾಗಿ, ಹುಡಿಹುಡಿಯಾಗಿ, ಮೀನು ಮತ್ಸ್ಯಂಗಳು      ಉಷ್ಣೋದಕದ ಭೀತಿಯಿಂ ಭಯಪಟ್ಟು ಕಂಗಾಲಾಗಿ ಕಾತರಮಾಗೀ"                                                                       ಒಂದು ಸಲ ಉಸಿರೆಳೆದುಕೊಂಡು, ಹೀರೋ ಮುಂದುವರಿಸಿದ ಅಸಂಪೂರ್ಣವಾಗಿದ್ದ ಆ ಮೊತ್ತಮೊದಲ ವಾಕ್ಯವನ್ನು.                                                                  "ತಿಮಿಂಗಿಲಗಳು ಬಾಯಿಂದ ನೊರೆಯುಗುಳಿ  ದಿಗ್ಭ್ರಾಂತವಾಗಿವಾಗಿ ಮರ, ವೃಕ್ಷಂಗಳಂ ಏರಿ ಕುಳಿತಾಗ, ಕಾಡು ಕಾನನ ಅಟವಿಯೋಳ್ ಗಿರಿ ಗಹ್ವರಗಳೋಳ್ ಪವಡಿಸಿರುವ ಗಂಧಸಿಂಧೂರ, ಪುಲಿ, ಸಿಂಹ, ಸಿಂಹಿಣಿ, ಕೇಸರಿಗಳ ಕನಸಂ ಕೆಟ್ಟು, ಅಡಬರಿಸಿ ಅಂ ಎಂದು ಊರಗಲ ಮಾರಗಲ ಬಾಯ್ತೆರೆ ತೆರೆದು, ಆನೆ, ಗಜಾದಿಂಗಳು ಸೊಂಡಿಲಿ ಗಿಂಡಿ ಲಿಯಂ ಮೇಲೆತ್ತಿ, ಮುಗಿಲಾಕಾಶ, ಗಗನ, ಚಂದ್ರ ಸೂರ್ಯ ನಕ್ಷತ್ರ ಮಂಡಲಕ್ಕೆತ್ತಿ ಕಿರ್ ರ್ ರ್ ಎಂದು ಕಿರಲಿ, ಭರ್ ರ್ ರ್  ಎಂದು ಭೋರ್ಗರೆದು ಭೂ ನೆಲಕ್ಕೆ ಅಪ್ಪಳಿಸೆ ಭೂಮಾತೆ ನೆಲತಾಯಿ ಪೃಥ್ವಿಯೊಡತಿ ಹೊಟ್ಟೆ ಸೀಳಿ ಹೋ  ಎಂದಳುತಳುತ ಕಂಣೀರು ಕಂಬನಿ ಸುರಿಸುರಿಸಿ, ಫಲಕುಸುಮದ ಭಾರದಿಂದ ಬಗ್ಗಿದ ತರುಷಂಡಂಗಳು ತತ್ತರಿಸಿ,ಶುಕ ಪಿಕ ಶಾರಿಕಾದಿ  ವಿಹಂಗಳು ಶೋಕಿಸಿ, ಲತಾ ಬಳ್ಳಿಗಳು ಭಸ್ಮೀಭೂತಮಾಗಿ ಬೂದಿಯಾಗಿ, ಶಿವನ ಮಸ್ತಕದೋಳ್ ರಾರಾಜಿಸುವ ಲಲಾಟ ಭಸ್ಮಮಾಗೀ."
      ಈಗ ನನ್ನ ಮುಕ್ತಕ. 
      ಓದಿದ್ದು 
      " ಆ ಮನೆ ಹುಡುಗಿಯು  ಫಸ್ಟ್ ಕ್ಲಾಸು ಬಂದಳು 
      ನೋಡಿ ಕಲಿಯಬೇಕು ನೀನು"
      "ಹಾಗೆಯೆ  ಮಾಡಿಯೆ  ಅವಳನ್ನೆ ನೋಡಿಯೆ 
      ಫೇಲಾದೆನಲ್ಲಮ್ಮ ನಾನು"!  
       

      ಗುರುವಾರ, ಏಪ್ರಿಲ್ 11, 2013

      ವಿಜಯ ಸಂವತ್ಸರದ ಯುಗಾದಿ.
      ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
      ಫೋ: ೨೩೬೭೬೭೬         Email: sahithyaprakashana@yahoo.co.in
      ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.

      • ಸಾಕ್ಷಾತ್ ಕಲೆಯೇ ಆಗಿದ್ದ ಬಂಗಾರಿ ಕಲೋಪಾಸಕರ, ಕಲಾಪೋಷಕರ ಉದರಾಶ್ರಯ, ಪೋಷಣೆ, ಪ್ರೋತ್ಸಾಹಗಳಿಂದ ಪಾಪದ ಮುದ್ರೆಯನ್ನು ಪಡೆದು, ಜಗತ್ತಿಗೆ ತೋರಿಸಲು ಕೈಯಲ್ಲಿ ಹಿಡಿದು ನಿಂತಿದ್ದಾಳೆ ವಂಚನೆಯ ಕುರುಹಾದ ಹೆಂಣು ಮಗುವೊಂದನ್ನು!          
               ಅದಾರೋ ಗದರಿಕೊಂಡರು. 
               "ಕೇಳಿಸಲಿಲ್ಲವೇನೇ ಆಗಲೆ ಹೇಳಿದುದು? ಮುಂದೆ ಹೋಗು."
               ಇನ್ನೂ ಎಷ್ಟು ಮುಂದು ಹೋಗಬೇಕು ಬಂಗಾರಿ!
               ಕಾಂಪ್ಲಿಮೆಂಟರಿ ಪಾಸು ಪಡೆದ ಗಂಡಂದಿರೊಂದಿಗೆ ಬಂದು ನಾಟಕಗಳನ್ನು ನೋಡಿದ್ದ ಗರತಿ ಗೌರಮ್ಮಗಳು ಈ ಪಾಪಿ ಬಂಗಾರಿಯನ್ನು                  ಗುರುತಿಸಿ ತಂತಮ್ಮಲ್ಲಿಯೆ ಏನೇನೋ ಮಾತನಾಡಿಕೊಂಡರು. ಕಡೆಗೊಬ್ಬ ಮಹಾಸತಿ ಅಂದೂಬಿಟ್ಟರು.
       "ಇಂತಹ ಮುಂಡೆಯರಿಂದ ಮನೆಗಳೇ ಹಾಳಾಗುತ್ತವೆ. ಇವಳಿಗೆ ಭಿಕ್ಷೆ ಹಾಕುವುದೂ  ಮಹಾಪಾಪ!"
              ಇದು ಸತ್ಪಾತ್ರ ದಾನವಲ್ಲವೆ?
              ಬಂಗಾರಿಯದು ಈಗ ಸತ್ತ ಪಾತ್ರ. ಚಂಚಲಾಕ್ಷಿಯ ಅಕ್ಷಿಯಿಂದ ಚಂಚಲತೆ ಮಾಯವಾಗಿದ್ದಿತು. 
              ಮುರಿದ ಬೊಂಬೆ ಯಾವ ಮಗುವಿಗೂ ಬೇಡ!

      ಈಗ ನನ್ನ ಮುಕ್ತಕ. 

        ಡಾಕ್ಟರ್ ಶಾಪಿನಲ್ಲಿ.... 
        "ಈ ಔಷಧಿಯನೊಂದುಬಾಟಲಿ ಕುಡಿದರೆ
        ಮತ್ತೆ ಬರಬೇಕಿಲ್ಲವಲ್ಲ?"
        "ಹಾಗೆಂದೆ ಕಾಣುತ್ತೆ, ಇದನೊಯ್ದ ಜನರಲಿ
        ಒಬ್ಬರೂ ತಿರುಗಿ ಬಂದಿಲ್ಲ."!

        ಶುಕ್ರವಾರ, ಮಾರ್ಚ್ 22, 2013


        ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
        ಫೋ: ೨೩೬೭೬೭೬         Email: sahithyaprakashana@yahoo.co.in
        ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
        • ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕೆ ಮುಹೂರ್ತವನ್ನಿಟ್ಟುಕೊಟ್ಟರು ವಶಿಷ್ಠ ಮಹರ್ಷಿಗಳು. ಅದೇ ಶುಭ ಮುಹೂರ್ತಕ್ಕೆ ಸರಿಯಾಗಿ ಶ್ರೀರಾಮ ಅರಣ್ಯವಾಸಕ್ಕಾಗಿ ಅಯೋಧ್ಯೆಯಿಂದ ಹೊರ ಹೊರಟ, ಸೀತಾ ಲಕ್ಷ್ಮಣ ಸಮೇತನಾಗಿ. 
        • ಇಬ್ಬರು ಮಹಾನುಭಾವರ ಮಿಳನ ಎಂದೂ ವ್ಯರ್ಥವಾದುದಿಲ್ಲ ಮಾನವ ಚರಿತ್ರೆಯಲ್ಲಿ. 
        • ಮಕ್ಕಳಾಗಲಿಲ್ಲ ಎಂದಾವ ಹೆಂಣೂ ಬಾವಿಯಲ್ಲಿ ಹಾರಿಕೊಳ್ಳುವುದಿಲ್ಲ. ಇಂದಲ್ಲ, ಇನ್ನು ಮುಂದಾದರೂ ಆದಾವು ಎಂದು  ಮೊದಲ ಕೆಲವು ವರ್ಷಗಳನ್ನು ಆಶೆಯಲ್ಲಿ ಕಳೆಯುತ್ತದೆ. ಆಮೇಲೆ ಇದ್ದೇ ಇವೆ ನೂರೆಂಟು ದೇವರುಗಳು. ಕಲ್ಲು, ಗುಂಡುಗಳ ಪೂಜೆ, ಜೋಡಿ ಮರಗಳನ್ನು ಸುತ್ತುವುದು, ದಾನ ಧರ್ಮವೆಂದು ಮನೆಯಲ್ಲಿದ್ದುದನ್ನಿಷ್ಟು ಅವರಿವರಿಗೆ ಕೊಟ್ಟು ಹಾಳು ಮಾಡುವುದು. ಸೋತೆ ಎಂದು ದೇವನೂ ಕೈ ಎತ್ತಿದ ಮೇಲೆ ಮನುಷ್ಯ ಪ್ರಯತ್ನ-ಲೇಡಿ ಡಾಕ್ಟರ ಬಳಿ ಲೇವಡಿ!
        • ನಾಟಕ ಕಂಪನಿಯ ಸರ್ವೀಸು, ಕಾಫಿ ಹೋಟೆಲ್ ಸರ್ವೀಸು, ಕಾಮಿನಿಯರ ಸರ್ವೀಸು, ಇವೆಲ್ಲವೂ ಹೋಲ್ ಇಂಡಿಯಾ ಸರ್ವೀಸ್ ಗಳು.                                                                                                                           ಒಂದೇ ಊರು, ಒಂದೇ ಸ್ಥಾನ ಎಂಬ ಹುಚ್ಚು ಇಲ್ಲ ಇವರಿಗೆ. ಇಂದು ಇಲ್ಲಿ, ನಾಳೆ ಇನ್ನೆಲ್ಲಿಯೋ! ಬಂಗಾರುಪೇಟೆ ರೈಲ್ವೇ ಸ್ಟೇಷನ್ ಹೋಟೆಲಲ್ಲಿ ಕಪ್ಪು ತೊಳೆಯುವ ಹುಡುಗ ನಾಲ್ಕೇ ದಿನಗಳಲ್ಲಿ ಬೊಂಬಾಯಿಯಲ್ಲಿ ಗಲ್ಲಿಯ ಪೂರಿ, ಭಾಜಿ ದುಕಾಣ್ ಒಂದರಲ್ಲಿ ಎಂಜಲ ಎಲೆ ತೆಗೆಯುತ್ತಿರುತ್ತಾನೆ. ಬೆಂಗಳೂರಿನ ಪೈಪ್ ಲೈನ್ ನಲ್ಲಿ ಸಾಧಾರಣ `ಪ್ರಾಕ್ಟೀಸ್' ಇರುವ ಬಡ ಸೌಂದರ್ಯ ಜೀವಿಯೊಬ್ಬಳು ರೇಸ್ ಸೀಜನ್ ನಲ್ಲಿ ಮದರಾಸಿನ ಹೈಕ್ಲಾಸ್ ಹೋಟೆಲಲ್ಲಿ ತೇಲಬಹುದು. ಇಂದು ಶಿವಕುಮಾರ ಸಾಮ್ರಾಜ್ಯ ಸಂಗೀತ ನಾಟಕ ಕಂಪನಿಯಲ್ಲಿ ಸೇವಕ-ನಾಳೆಯೇ ಗೋಕರ್ಣದ ಶಾಸ್ತ್ರೀ ಕಲಾಮಂಡಲಿಯಲ್ಲಿ ಅಶ್ವತ್ಥಾಮ. ಪಾಕಿಸ್ತಾನದಲ್ಲಿ ಕನ್ನಡ ಕಬೀರ್ ಹಾಕಿದರೆ ಅಲ್ಲಿಗೂ ರೆಡಿ!
        • "ನಾನಯ್ಯಾ, ನಾನು. ಈ ಕಂಪನಿಯನ್ನು ಕಟ್ಟಿ ನಿಲ್ಲಿಸಿ ಈ ಸ್ಥಿತಿಗೆ ತಂದವನು ಯಾವ ಸೂಳೇಮಗ ಗೊತ್ತೇ? ನಾನು. .."
        ಈಗ ನನ್ನ ಮುಕ್ತಕ:

        ಸತ್ಯವ್ರತ!
        "ಸತ್ಯವೆಂಬುದು ಬಹು ಬೆಲೆಯುಳ್ಳದ್ದೆನ್ನುತ 
        ತಿಳಿದಿರುವವನಯ್ಯ ನಾನು."
        "ಇರಬೇಕು, ಅದಕಾಗಿ ಜತನದಿ ಬಳಸುವೆ 
        ಅಪರೂಪಕೊಮ್ಮೊಮ್ಮೆ ಅದನು!"
                                                                * * * * * * * * * * * *

          ಶನಿವಾರ, ಮಾರ್ಚ್ 16, 2013


          ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
          ಫೋ: ೨೩೬೭೬೭೬         Email: sahithyaprakashana@yahoo.co.in
          ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
          • ಸೂಳೆಯ ಮನೆಗೂ ಎರಡೆರಡು ಬಾಗಿಲು ಬೇಡವೆಂದರೆ ಬಾಗಿಲು ಮಾಡುವ ಬಡಗಿ ಬದುಕುವುದಾದರೂ ಎಂತು?
          • ಅನೇಕಾನೇಕ ದೊಡ್ಡ ಮನುಷ್ಯರ ಇಲ್ಲದ ಮಾನವನ್ನು ಕಾಯ್ದಿರುವುದು, ಇಂದು ಕಾಯುತ್ತಿರುವುದು, ಮುಂದೂ ಕಾಯುವುದು ಆ ದೊಡ್ಡ ಮನುಷ್ಯರೆನಿಸಿಕೊಂಡವರ ನಡತೆಯಂತೂ ದೇವರಾಣೆಯಾಗಿಯೂ ಅಲ್ಲ. ಸೂಳೆಯ ಮನೆಯ ಹಿತ್ತಲ ಬಾಗಿಲಿಗೆ ಅವರು ಮತ್ತು ಅವರ ವಂಶಜರು ನಿತ್ಯವೂ ಕೈ ಮುಗಿಯಬೇಕು, ಕುಂಕುಮವಿಟ್ಟು ಪೂಜಿಸಬೇಕು ಅದನ್ನು. ಸಮಯೋಚಿತವಾಗಿ ಪಾರಾಗಲು ಅದು ಇದ್ದಿತೆಂದು ಅಲ್ಲವೇ ಇವರೆಲ್ಲರೂ ಇಂದು ತಲೆಯೆತ್ತಿ ಓಡಾಡುತ್ತಿದ್ದಾರೆ? ಇಲ್ಲದಿದ್ದರೇನಿತ್ತು? 
          • ಬೆನ್ನ ಮೇಲೆ ಕೈಯಿಟ್ಟು ಸಲುಗೆಯಿಂದ ನುಡಿದರು ಮೇನೇಜರು. ನೂರು ವರ್ಷಗಳ ಗೆಳೆಯರಾಗಬಲ್ಲರು ಸೆರೆ ಕುಡುಕರು, ಮೂರೇ ನಿಮಿಷಗಳಲ್ಲಿ.          
                  ಆದರೆ ಒಂದು. ಆಗ ಹೆಚ್ಚು ಕುಡಿದಿರಬೇಕು, ಇಲ್ಲವೆ ಅದರ ದಾಹದಿಂದ ತತ್ತರಪಡುತ್ತಿರಬೇಕು. 
          • "ಸೋಡಾ ಮುಗಿದಂತಿದೆ. ನೀರಾದರೆ ನಡೆಯುತ್ತೆ ತಾನೇ?" ಗ್ಲಾಸುಗಳಿಗೆ ಸಮನಾಗಿ ಸುರುವಿ ಕೇಳಿದರು ಮೇನೇಜರು ವಿಷಕಂಠರಾಯರು.  "ಅದೂ ಇಲ್ಲದೆಯೂ ನಡೆಯುತ್ತದೆ ಸ್ವಾಮೀ, ನನಗೆ. ನೀರಿಗೂ ನನಗೂ ಕೊಂಚ ಅಷ್ಟಕ್ಕಷ್ಟೆ. ಸ್ನಾನ ಗೀನ ಮುಂತಾದ ಕೇವಲ ಬಹಿರಂಗ ಶುದ್ಧಿಗೆ ಮಾತ್ರವೆ ನಾನು ನೀರನ್ನು ಉಪಯೋಗಿಸುತ್ತೇನೆ."       
          • ಸಾವಕಾಶವಾಗಿ ಕೊಂಚ ಕೊಂಚವನ್ನೇ ಸ್ವೀಕರಿಸುತ್ತಿದ್ದ ವಿಷಕಂಠರಾಯ ಕೇಳಿದ, ಮುಸಿಮುಸಿ ನಕ್ಕು. "ಅದೇನು ವಾಸುದೇವರಾಯರೆ! ನೀವು ಕುಡಿಯುವಾಗ ಕಂಣೇಕೆ ಮುಚ್ಚುತ್ತೀರಿ?"        
                    "ಇದು `ಬ್ರಾಹಿಬಿಷನ್ ಏರಿಯಾ ಅಲ್ಲವೇನು ಸ್ವಾಮಿ? ಕುಡಿಯುವಾಗ ಯಾರೂ ನೋಡಕೂಡದು ನೋಡಿ.  ಮೊಟ್ಟಮೊದಲು ನಾನೇ ನೋಡಕೂಡದೆಂದು ಕಂಣು ಮುಚ್ಚಿಬಿಡುತ್ತೇನೆ. ತಾವೂ ಮುಗಿಸಿಬಿಡಿ, ಅದನ್ನೆಷ್ಟು ಹೊತ್ತು ಗುಟುಕರಿಸುತ್ತ ಕೂಡುತ್ತೀರಿ? ಪಾನಪ್ರತಿಬಂಧ ನಿರೋಧವಿರುವಲ್ಲಿ..." 
          "ಏನಂದಿರಿ? ಪಾನಪ್ರತಿಬಂಧ ನಿರೋಧವೆ?" ನಕ್ಕರು ಇಬ್ಬರೂ. 

          ಇನ್ನು ನನ್ನ ಮುಕ್ತಕ, ಇದೋ:

          ದುರದೃಷ್ಟ 
          ಅನುಕೂಲದೊಳಗೆಯೆ ಆಪತ್ತು ಬರುವುದು 
          ಅದೃಷ್ಟ ಸರಿಯಿಲ್ಲದರಿಗೆ. 
          ಬೀಸಿದ ಗಾಳಿಗೆ ಮಳೆಯಲಿ ಹಿಡಿದಿದ್ದ 
          ಕೊಡೆಯೆ ಮಗುಚಿಕೊಂಡ ಹಾಗೆ!
                                                                             * * * * * * * * * *



            ಶುಕ್ರವಾರ, ಮಾರ್ಚ್ 1, 2013


            ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
            ಫೋ: ೨೩೬೭೬೭೬         Email: sahithyaprakashana@yahoo.co.in
            ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
            ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
            • `ಹಾ, ತಿಳಿಯಿತು ಈಗ. ನಿದ್ರೆಗೆ ಮುಖ್ಯವಾಗಿ ಬೇಕಾದುದು ಹಾಸಿಗೆ, ಮಂಚವಲ್ಲ. ನಿದ್ರಾಭಂಗಕ್ಕೆ ಕಾರಣ ಒಂದೇ, ಅದು ಯೋಚನೆ. ಯಾವ ಚಿಂತೆಯೂ ಇಲ್ಲ ಈ ಗಮಾರನಿಗೆ. ಹಾಯಾಗಿ ಗೊರಕೆ ಕೊರೆಯುತ್ತಿದ್ದಾನೆ.'
            •  ಹಾಳು ಬಾಳಿನ ಲೆಕ್ಕಾಚಾರವೇ ಹೀಗೆ. ಬದುಕುತ್ತೇನೆ ಎಂದು ಒದ್ದಾಡಿದಳು ಸುಭದ್ರ, ಸಾಯಿ ಎಂದಿತು. ಸಾಯಲು ಸನ್ನದ್ಧಳಾಗಿ  ಹೊರಬಂದಳು. ಬದುಕು ನಡೆ ಎಂದಿತು. ಇರುತ್ತೇನೆ ಎನ್ನುವಾಗ ಇರುವುದೆಷ್ಟು ಕಷ್ಟವೋ, ಹೋಗುತ್ತೇನೆ  ಎನ್ನುವಾಗ ಹೋಗುವುದೂ ಅಷ್ಟೇ ಕಷ್ಟ, ಪಾಪ!
            • "ನನಗೂ ನಿಮ್ಮ ಹೆಂಡತಿಗೂ ಒಂದೇ ಭೇದ. ಮೊದಲು ಮದುವೆ, ಆಮೇಲೆ ಇನ್ನೊಂದು ಆಕೆಯೊಟ್ಟಿಗೆ. ಅದು ಇನ್ನೂ ಆಗಲಿಲ್ಲ. ನನ್ನ ಸಮಾಚಾರ ಹಾಗಲ್ಲ. ಆಮೇಲೆ ಮದುವೆಯಾಗೋಣ. ಮೊದಲು ಇನ್ನೊಂದು ಆಗಲಿ ಬನ್ನಿ."
            • ಊರೆಲ್ಲವೋ ನಕ್ಕ ಮೇಲೆ ಕಿವುಡ ನಕ್ಕ ಎಂಬಂತೆ, ಲೋಕಕ್ಕೆಲ್ಲವೂ ತಿಳಿದ ಮೇಲೆ ಶ್ರೀನಿವಾಸಶೆಟ್ಟರಿಗೆ ತಿಳಿಯಿತು. 
            ಇಗೋ ನನ್ನ ಮುಕ್ತಕ:
            ಅದೃಷ್ಟ 
            ಆಪತ್ತಿನೊಳಗೆಯೆ ಅನುಕೂಲವಿರುವುದು 
            ಅದೃಷ್ಟ ಸರಿಯಿದ್ದವರಿಗೆ. 
            ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಬಾಯ್ದೆರೆದು 
            ತಲೆಯ ಮೇಲಕೆ ಬಿದ್ದ ಹಾಗೆ!

              ಶುಕ್ರವಾರ, ಫೆಬ್ರವರಿ 1, 2013


              ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
              ಫೋ: ೨೩೬೭೬೭೬         Email: sahithyaprakashana@yahoo.co.in
              ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
              ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
              • `ನನ್ನನ್ನು ಹಾಳು ಮಾಡಿದಳು ಆ ಮುಂಡೆ' ಅನ್ನುವ ಗಂಡುಗಳು ಅನೇಕ.
                        `ಆ  ಚಾಂಡಾಲನಿಂದಲೇ ನಾನು ಹಾಳಾದೆ' ಎಂದು ಹೇಳುವ ಹೆಂಣುಗಳು ಹೇರಳವಾಗಿವೆ.

                         ಯಾರೂ ಯಾರನ್ನೂ ಹಾಳು ಮಾಡಿಲ್ಲ ಎಂಬುದು ಸತ್ಯವಾದ ಮಾತು. ಹಾಳಾಗಿರುವ ಪ್ರತಿಯೊಬ್ಬನೂ,          ಪ್ರತಿಯೊಬ್ಬಳೂ ಆತ್ಮ ನಿರೀಕ್ಷೆ ಮಾಡಿಕೊಂಡು ತನ್ನ ಪತನಕ್ಕೆ ತಾನೇ ಕಾರಣವನ್ನು ಹುಡುಕಿಕೊಂಡರೆ, ಅದು ದೊರೆಯುವುದು ತನ್ನಲ್ಲಿ ಮಾತ್ರವೇ ಆಲ್ಲದೆ ಬೇರೆಲ್ಲಿಯೂ ಅಲ್ಲ. ಆದರೆ ಆ ಆತ್ಮಪರೀಕ್ಷೆಗೆ ಎಲ್ಲಕ್ಕೂ ಮೊಟ್ಟಮೊದಲಾಗಿ ಆ ಇಚ್ಛೆ ಬೇಕು, ತಾನೇ ತನ್ನಿಂದ ಹೊರ ನಿಂತು ನೋಡಲು ರಾಗದ್ವೇ ಷಾತೀತ ದೃಷ್ಟಿ ಬೇಕು, ಅದನ್ನು ಒಪ್ಪಿಕೊಳ್ಳಲು ಮನೋದಾರ್ಢ್ಯ ಬೇಕು, ಆ ಪ್ರಾಮಾಣಿಕತೆಯೂ ಬೇಕು.
              •  ತನ್ನನ್ನು ಕೆಡಿಸಿ, ಹಾಳು ಮಾಡಿ, ಬೀದಿಯ ಭಿಕಾರಿಯನ್ನಾಗಿ ಮಾಡಿದ ಸುಭದ್ರ ತನ್ನ ಪಕ್ಕದ ಮನೆಯ ಇನ್ನೊಬ್ಬನನ್ನೇಕೆ ಹಾಗೆಯೇ ಬಿಟ್ಟಳು?
              • ಹುಳುವನ್ನು ಹುಡುಕುತ್ತ ಅದು ಮಲಗಿದ್ದಲ್ಲಿಗೆ ಹೋಗಿ ಅದರ ರೆಕ್ಕೆಯನ್ನು ಸುಟ್ಟು ಬರುವಂತಹ ದೀಪವು ಇನ್ನೂ ಹುಟ್ಟಲಿಲ್ಲ. ಹುಡುಕುತ್ತ ಬರುವುದು ಸುಡುವ ದೀಪವಲ್ಲ, ಪಾಪ! ಅದಕ್ಕೆ ಅಪವಾದ ಕಟ್ಟುವುದು ಮಹಾಪಾಪ! ಸುಡಿ ಸಿಕೊಳ್ಳುವ ಹುಳುವೇ ಅಡಬರಿಸುತ್ತ ಬಂದು ಅದರಲ್ಲಿ ಬೀಳುತ್ತದೆ. ಸುಟ್ಟುಕೊಂಡು ಸಾಯುತ್ತದೆ.
              • ಪ್ರಭಾಕರ ಮತ್ತು ಸುಭದ್ರರಲ್ಲಿ ಬೆಂಕಿ ಯಾರು? ಹುಳು ಯಾರು? ಇಬ್ಬರೂ ಅಷ್ಟಿಷ್ಟು ಬೆಂಕಿ, ಇಬ್ಬರೂ ಇಷ್ಟಷ್ಟು ಹುಳು. ಒಬ್ಬರನ್ನೊಬ್ಬರು ಬೆಂಕಿಯಾಗಿ ಸುಟ್ಟರು, ಹುಳುವಾಗಿ ಸುಟ್ಟುಕೊಂಡರು, ಕಡೆಗೆ ಪರಸ್ಪರ ಬೈಯುತ್ತ ಕುಳಿತರು.
                            ಈಗ ನನ್ನ ಮುಕ್ತಕ:    

                            ಮುದ್ರಾ ರಾಕ್ಷಸ 
                          " ನಮ್ಮ ರಾಜರ ವಜ್ರಹಾರವ ಕದ್ದರು"
                          ಎಂದಿತ್ತು ಕಳಿಸಿದ್ದ ವರದಿ.
                          "ನಮ್ಮ ರಾಜರು ವಜ್ರಹಾರವ ಕದ್ದರು"
                          ಎಂದಿತ್ತು ಅಚ್ಚಾದ ಸುದ್ದಿ!


                ಶುಕ್ರವಾರ, ಜನವರಿ 25, 2013

                ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
                ಫೋ: ೨೩೬೭೬೭೬         Email: sahithyaprakashana@yahoo.co.in
                ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
                ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
                • "ಐದು, ಆರು ಆದಾಗ ಆಗುವುದೇ ಹಾಗೆ. ನನಗೂ ಆಗೆಲ್ಲ ಬಹು ಕಷ್ಟವೆನಿಸುತ್ತಿತ್ತು. ಹತ್ತು ದಾಟಿತು, ನೋಡಿ. ಯಾವ ಚಿಂತೆಯೂ ಇಲ್ಲ ನಮಗೆ. ಎರಡು ಮಕ್ಕಳಾದರೂ ಅಳುತ್ತಲಿದ್ದರೆ ಚೆನ್ನಾಗಿ ನಿದ್ರೆ ಬೀಳುತ್ತೆ, ನನಗೆ ನಮ್ಮ ಮನೆಯವರಿಗೆ."
                • ಗಂಡ ಸತ್ತ ದುಃಖವನ್ನು ಮರೆಯಲು ಅಷ್ಟೇನೂ ಕಷ್ಟವಾಗಲಿಲ್ಲ ಆ ಪ್ರಾಣಿಗೆ. ಗಂಡ ಸತ್ತನೆಂಬ ಕಾರಣಕ್ಕೆ ತಾನು ವಿಕಾರವಾದುದಕ್ಕಾಗಿ ಆಗಿದ್ದ ದುಃಖ? ಗಂಡ ಸತ್ತದ್ದು ಒಮ್ಮೆ, ಒಂದೇ ಒಂದು ಸಲ. ತಾನು ಜನ್ಮಾದ್ಯಂತವೂ ಅನುಭವಿಸಬೇಕು ಈ ರೂಪವನ್ನು!
                • ಸಾಕೇನು ಮನುಷ್ಯನಿಗೆ ಅನ್ನ, ಬಟ್ಟೆ ಎರಡೇ? ಜೀವನದಲ್ಲಿ ಜೋಡೆ೦ಬುದು ಬೇಡವೇ? ತಲೆ ಬೋಳಾದ ಮಾತ್ರಕ್ಕೆ ತಲೆಯಲ್ಲಿಯ ವಿಚಾರಗಳೂ ಬೋಳಾಗುತ್ತವೆಯೇ? ಅನ್ನ ಉಣ್ಣುವ ಬಾಯಿಗೆ ಹುಂಣಾದ ಮಾತ್ರಕ್ಕೆ ಹೊಟ್ಟೆಯ ಹಸಿವು ಬಿಡುತ್ತದೆಯೇ? ಅಂಗಸೌಖ್ಯದ ಅರಿವು ಇನ್ನೂ ಸರಿಯಾಗಿ ಆಗಿರಲಿಲ್ಲ ಸುಭದ್ರೆಗೆ, ಆಗಲೇ ವೈಧವ್ಯ. ಸಾಲದುದಕ್ಕೆ ಕೈಲೊಂದು ಮಗು.
                • ತಲೆಗೊಂದು ಮಾತನಾಡಿದರು ಮಡಿವಂತ ಮಹಾಶಯರುಗಳು. ಇವರಲ್ಲಿ ಸುಭದ್ರೆಯೊಂದಿಗೆ ಸುಖಪಟ್ಟವರೆ ಹೆಚ್ಚು ಎಂದರೆ ಎಷ್ಟೂ ಸುಳ್ಳಲ್ಲ. ಸಿಕ್ಕು ಬಿದ್ದವನು ಕಳ್ಳ. ಪಾರಾದವನು ಪಂಚಾಯತಿದಾರ!
                ಈಗ ನನ್ನ ಮುಕ್ತಕ:

                ಸ್ವಭಾವ:
                  ಸರಸ ಕಾವ್ಯಗಳೆಷ್ಟನೋದುತಲಿದ್ದರು
                  ಸಖಿ ನಿನ್ನ ಮುಖ ಮಾತ್ರ ಗಂಟು.
                  ಸಿಹಿಯಾದ ಪಾಯಸದೊಳಗಾಡುತಿದ್ದರು
                  ಸಿಹಿಯಾಗುವುದುಂಟೆ ಸೌಟು?

                  ಶುಕ್ರವಾರ, ಜನವರಿ 18, 2013

                  ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
                  ಫೋ: ೨೩೬೭೬೭೬         Email: sahithyaprakashana@yahoo.co.in
                  ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. 
                  ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
                  • ಮುಚ್ಚಿದ ಬಾಗಿಲನ್ನು ನೋಡಿ ಅಳುತ್ತ ಕೂಡುವುದು ಅವಿವೇಕಿಯ ಲಕ್ಷಣ. ಒಂದು ಮುಚ್ಚಿದಾಗ ಮತ್ತೊಂದು ತಾನೇ ತೆರೆದಿರುತ್ತದೆ. ಮಾರ್ಚಿನಲ್ಲಿ ಫೇಲಾದೆ ಎಂದು ಅಳುವ ವಿದ್ಯಾರ್ಥಿ ನಿರಾಶಾವಾದಿ-ಮುಂದೊಂದು ಸೆಪ್ಟೆಂಬರ್ ಕಾಣಲಿದೆ ಎನ್ನುವ ವಿದ್ಯಾರ್ಥಿ  ಆಶಾವಾದಿ. ಆಮೇಲೆಯೂ ಇದ್ದೇ ಇದೆ  ಮತ್ತೊಂದು ಮಾರ್ಚಿ ಎನ್ನುವವ ವಿಶಿಷ್ಟಾಶಾವಾದಿ. 
                  • ಬಾರ್ ಗೆ ಒಮ್ಮೆ ಬಂದವನು ಬಾರಿಬಾರಿಗೂ ಬರಬೇಕೆನ್ನುತ್ತಾನೆ. ಅದು ಬಾರ್ ನ ಆಚಾರವೂ ಅಹುದು, ಬರುವವನ ಗ್ರಹಚಾರವೂ ಅಹುದು. ಹಣವು ಕೊಡುವ ಹಲವಾರು ಸವಲತ್ತುಗಳಲ್ಲಿ ಹಾಳಾಗುವುದೂ ಒಂದು.
                  • ಕುಳಿತು ಉಂಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬುದು  ಆ ಎಂದಿನದೋ ಒಂದು ಹಳೆಯ ಗಾದೆಮಾತು. ಕುಳಿತು ಕುಡಿಯುವವನಿಗೆ? ಕುಬೇರನ ಹೊನ್ನೂ ಸಾಲದು. ಹೀಗಾಗದಿರಲೆಂದೋ ಏನೋ, ಕೆಲವರು ನಿಂತು ಕುಡಿದು, ಕಡೆಗೆ ಕುಡಿದು ಮಲಗುತ್ತಾರೆ; ಕೂಡುವ ದಡ್ಡತನವನ್ನೇ ಮಾಡುವುದಿಲ್ಲ.
                  • ಮುದ್ದುವೀರ ದೇವರಂತ ಹುಡುಗ, ದಾವಣಗೇರಿಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ. ಈಗಲೂ ದೇವರಂತಹನೆ ಅನ್ನಿ, ಅವತಾರಗಲಷ್ಟೇ ಬೇರೆ-ಆಗ ರಾಮಾವತಾರ, ಈಗ ಕೃಷ್ಣಾವತಾರ!
                  ಈಗ ನನ್ನ ಮುಕ್ತಕ-
                  ಸುಭಾಷಿತ 
                  ಅತಿಯಾದ ಬಳಕೆಯು ಬೆಲೆಯನು ಕಳೆವುದು 
                  ಇದಕೊಂದು ಸಾಮತಿ ಇಹುದು.
                  ಮಲಯ ಪರ್ವತದಲ್ಲಿ ಚಂದನ ವೃಕ್ಷವು 
                  ಭಿಲ್ಲರ ಒಲೆಯುರಿಸುವುದು.
                                                                     * * * * * * * * * * * * 

                  ಶುಕ್ರವಾರ, ಜನವರಿ 4, 2013

                  ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
                  ಫೋ: ೨೩೬೭೬೭೬         Email: sahithyaprakashana@yahoo.co.in
                  ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ
                  ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
                  • ಬರೀ`ಸತ್ತ'ಎಂದರೆ ನಿಜವಾಗಿಯೂ ಸತ್ತ ಎಂದಷ್ಟೆ ಅರ್ಥ. `ಸತ್ತ, ಸೂಳೇಮಗ'ಎಂದರೆ ಅಷ್ಟೇ ನಿಜವಾಗಿಯೂ ಸತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿದಂತಾಯಿತಲ್ಲ?
                  • "ಮುಂದಿನ ಜನ್ಮಗಳಲ್ಲಿ ರಾಜನಾಗಿ ಹುಟ್ಟುವ ಯೋಗವು, ಈಗ ವೇಷ ಹಾಕುವುದರಿಂದ ಹೋಗಿಬಿಡುತ್ತದೆ" ಎಂದರು ಅಜ್ಜಮ್ಮ.
                  • ನಾಟಕವನ್ನೇನೋ ಎಲ್ಲರೂ ಪ್ರೀತಿಸುತ್ತೇವೆ. ಕಾಂಪ್ಲಿಮೆಂಟರಿ ಫ್ಯಾಮಿಲೀ ಪಾಸೂ  ದೊರೆತರಂತೂ ಸರೇ ಸರೆ.
                  • ಸರಿಯಾದವರು ಮುಂದು ಬರಬೇಕು, ದೂರ ನಿಂತು ಟೀಕೆ ಮಾಡುವ ಬದಲು; ಸರಿ ಇಲ್ಲದವರನ್ನು ದೂರ ಸರಿಸಲಿಕ್ಕಲ್ಲ, ಸನಿಯ ಕರೆದು ತಿದ್ದಿ ಸರಿ ಮಾಡಿಕೊಡಲು.
                  • ಆ ಮನೆಯಲ್ಲಿ ಆಗಲಿದ್ದ ಮದುವೆ ಆಗಲಿಲ್ಲ-ಈ ಕಂಪನಿ ಮನೆಯಲ್ಲಿ ಮಗುವಾಯಿತು ಅವಳಿಗೆ. ಬಂಗಾರ, ಬಂಗಾರದ ಕತ್ತೆಯಾದಳು.
                  ನನ್ನ ಮುಕ್ತಕ

                  ಹೊಂದಿಕೆ 
                  ಕೃಷ್ಣನ ಮೈ ಬಣ್ಣ ಆಕಾಶನೀಲಿಯು 
                  ಬಲರಾಮನದು ಸ್ವರ್ಣವರ್ಣ.
                  ಪೀತಾಂಬರನು ಕೃಷ್ಣ ನೀಲಾಂಬರನು ರಾಮ 
                  ಎಂತಹ ಹೊಂದಿಕೆಯಣ್ಣ!
                                                                                               * * * * * * * * * *

                  ಶುಕ್ರವಾರ, ಡಿಸೆಂಬರ್ 7, 2012


                  ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
                  ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
                  • ಸಂತೋಷವಾದಾಗ ಎರಡು ಬಗೆಯ ಜನಕ್ಕೆ ಹೇಳಬೇಕೆನಿಸುತ್ತದೆ- ನಮ್ಮ ಸಂತೋಷವನ್ನು ಕಂಡು ಸಂತೋಷಿಸು ವವರು ಮತ್ತು ಅಸೂಯೆಯಿಂದ ಕೊರಗುವವರು. ಅವರ ಸಂತೋಷದಿಂದ ಮತ್ತು ಇವರ ಅಸೂಯೆಯಿಂದ ನಮ್ಮ ಸಂತೋಷ ದ್ವಿಗುಣವಾಗುತ್ತದೆ - ಎರಡನೆಯದು ನಮ್ಮ ಸಣ್ಣತನ.
                  • ಕನ್ನಡ ಸಾಹಿತಿಗಳನ್ನು ಕಂಡೂ ಅಸೂಯೆ ಪಡುವವರಿದ್ದಾರೆಯೇ? ಯಾಕಿಲ್ಲ? ಉಳಿದ ಕೆಲ ಸಾಹಿತಿಗಳು!
                  • ಮೂಗೆಳೆದರು ಮುತ್ತುಸ್ವಾಮಿ. ನಮ್ಮನ್ನು ಹೊತ್ತು ಹಾಕಲು ಮಾರ್ಗವನ್ನು ಹುಡುಕಬೇಡವೇ? ಇದಕ್ಕಾಗಿಯೇ ಅವರಿಗೆ ದೊಡ್ಡ ಸಂಬಳ.
                  • ವೃದ್ಧಾಪ್ಯ ಸುಖವಲ್ಲ ಎಂದು ದಡ್ಡ ಹೇಳಬೇಕು. ಮಕ್ಕಳು ಮೊಮ್ಮಕ್ಕಳು ಯೌವನದಲ್ಲಿ ಸಿಕ್ಕಾರೆಯೇ? ಈ ಹಿಗ್ಗು ಏನೆಂಬುದನ್ನು ಅರಿಯಲು ವೃದ್ಧಾಪ್ಯವೇ ಬೇಕು.
                  • ನಾನು ಸಾಧಿಸಿರುವ ಕೆಲ ತಪಸ್ಸುಗಳಲ್ಲಿ ಇದೂ ಒಂದು. ಮರೆಯಲು ನಿರ್ಧರಿಸಿದರೆ ನನ್ನ ಮನದಿಂದ ಅದನ್ನು ಕಿತ್ತಿ ಹಾಕಿ ಹಾಯಾಗಿದ್ದುಬಿಡುತ್ತೇನೆ. ನನ್ನ ಮೂವತ್ತಾರು ವರ್ಷಗಳ ಮಿತ್ರನಾಗಿದ್ದ ಕುಡಿತ ದೂರವಾಗಿರುವುದೂ ಹೀಗೆಯೇ. ಇದು ಮನಶ್ಶಾಂತಿಗೆ  ಬಹು ಸಹಕಾರಿ.
                  ಇನ್ನು ನನ್ನ ಮುಕ್ತಕ:

                  ಹಾಸ್ಯ 
                  ನೀನೆಂದ ಜೋಕಿಗೆ ಇತರರು ನಗಬೇಕು 
                  ನೀನೆ ಹಹ್ಹಾ ಎಂಬುದಲ್ಲ.
                  ನಶ್ಯದ ಘಾಟಿಗೆ ಜನರೆಲ್ಲ ಸೀತರು 
                  ಡಬ್ಬಿಯು ಸೀನುವುದಿಲ್ಲ!
                                                                          * * * * * * * * * * * *

                    ಶುಕ್ರವಾರ, ನವೆಂಬರ್ 30, 2012


                    ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
                    ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
                    • ಆದಕಾರಣ ನಮ್ಮ ಭಾರತ ಪವಿತ್ರವಾದ ದೇಶ ಎಂಬುದು ಒಂದು ವಾದ.
                    • ನೆಲವನ್ನು ಮುಗಿಲನ್ನು ಹೊಲಿವರುoಟೆಂದವರ । ಹೊಲಿದರೂ ಹೊಲೆವರೆನಬೇಕು ಮೂರ್ಖನಲಿ । ಕಲಹವೇ ಬೇಡ ಸರ್ವಜ್ಞ ।। ಎಂದು ಸರ್ವಜ್ಞ  ಕವಿ ಹೇಳಿಲ್ಲವೇ?
                    • ಯಾವಾಗ ಧರ್ಮ ಖಿಲವಾಗುತ್ತದೋ, ಅಧರ್ಮ ಪ್ರಬಲವಾಗುತ್ತದೋ ಆವಾಗ ನಾನು ಸಾಧುಗಳ ರಕ್ಷಣೆ, ಧರ್ಮದ ಪುನರುದ್ಧಾರಗಳಿಗಾಗಿ ಯುಗ-ಯುಗದಲ್ಲೂ ಹುಟ್ಟುತ್ತೇನೆ. ಹಾಗಾದರೆ ಧರ್ಮಕ್ಕೆ ಚ್ಯುತಿ ಬರದಿದ್ದಲ್ಲಿ ಭಗವಂತ ಅವತರಿಸುವುದಿಲ್ಲ ಎಂದಂತಾಯಿತು. ಭಗವಂತ ನಮ್ಮ ಭಾರತದಲ್ಲಿಯೇ ತನ್ನ ದಶಾವತಾರಗಳನ್ನು ಎತ್ತಿದ...... ಎಂಬುದರ ಅರ್ಥ, ಹತ್ತು ಬಾರಿಯೂ ಈ ಭಾರತದಲ್ಲಿಯೇ ಧರ್ಮಕ್ಕೆ ಧಕ್ಕೆ ಬಂತು ಎಂದು ಗ್ರಹಿಸೋಣವೇ? ಬೇರಾವ ಯುರೋಪಿಯನ್ ರಾಷ್ಟ್ರದಲ್ಲಿಯಾಗಲಿ, ಆಫ್ರಿಕಾ, ರಸಿಯಾಗಳಲ್ಲಿ ಧರ್ಮಗ್ಲಾನಿ ಆಗಲೇ ಇಲ್ಲ. ನಮ್ಮ ಭಾರತದಲ್ಲಿಯೇ ಆಯಿತು ಎಂದೊಂದು ಕಾರಣದಿಂದ ನಮ್ಮ ದೇಶ ಪವಿತ್ರವಾದ ದೇಶ, ನಮ್ಮದು ಪುಣ್ಯಭೂಮಿ ಎಂದು ಹೇಳಿಕೊಳ್ಳುವುದು ಸರಿಯೇ, ಜಾಣತನವೇ ಅಥವಾ ಹೆಮ್ಮೆಪಟ್ಟುಕೊಳ್ಳುವಂತಹ ಅಂಶವೇ?
                    • ಇದನ್ನು ಹೆಮ್ಮೆಪಟ್ಟುಕೊಳ್ಳುವಂತಹ ವಿಷಯ ಎಂದಾದಲ್ಲಿ, ನಮ್ಮಲ್ಲಿಂದ ಅನೇಕರು ಧರ್ಮವನ್ನು ಹಾಳುಮಾಡುವುದರಲ್ಲಿ ತೊಡಗಿರುವಾಗ, ಅವರೆಲ್ಲರೂ ಮೇಲಿಂದಮೇಲೆ ಪರಮಾತ್ಮನ ಅವತಾರಕ್ಕೆ ಆಸ್ಪದ ಮಾಡಿಕೊಟ್ಟು, ನಮ್ಮ ದೇಶವನ್ನು ಇನ್ನೂ ಹೆಚ್ಚು ಪವಿತ್ರಗೊಳಿಸುತ್ತಿದ್ದಾರೆ, ಉಪಕರಿಸುತ್ತಿದ್ದಾರೆ ಎಂದಾಯಿತು. ಅವರೆಲ್ಲರಿಗೂ ನಾವು ಋಣಿಗಳು!
                    • ನಮ್ಮೂರಲ್ಲಿ ಪೋಲಿಸ್ ಸ್ಟೇಶನ್ ಆಗಿದೆ ಎಂದು ಹೆಮ್ಮೆಪಟ್ಟುಕೊಳ್ಳುವುದರಲ್ಲಿ ಎಷ್ಟು ಅರ್ಥವಿದೆಯೋ, ನಮ್ಮ ಭಾರತದಲ್ಲಿಯೇ ದೇವರು ದಶಾವತಾರಗಳನ್ನೂ ಮಾಡಿದ್ದಾನೆ ಎಂದು ಹೆಮ್ಮೆಪಟ್ಟುಕೊಳ್ಳುವುದರಲ್ಲೂ ಅಷ್ಟೇ ಅರ್ಥವಿದೆ. 
                    • ಈಗ ಯೋಚಿಸಿ, ನಮ್ಮ ಭಾರತ ಪುಣ್ಯಭೂಮಿಯೇ? ಪವಿತ್ರದೇಶವೇ?
                    ಈಗ ನನ್ನ ಮುಕ್ತಕ.

                    ಹೋಟೆಲಿನಲ್ಲಿ 
                    "ಮರೆವಾಯ್ತೆ ಸಾರ್?" ಪ್ರೊಫೆಸರರ ಕೇಳಿದ ಮಾಣಿ,
                     "ಇಲ್ಲ, ಬಕ್ಷೀಸ್ ಕೊಟ್ಟೆನಲ್ಲ."
                    "ಸರಿ ಸ್ವಾಮಿ ಬಕ್ಷೀಸು ಕೊಟ್ಟಿರಿ, ಆದರೆ
                    ತಿಂಡಿಯನೇ  ತಿನ್ನಲಿಲ್ಲ!"
                                                                                         * * * * * * * * * *

                    ಶುಕ್ರವಾರ, ನವೆಂಬರ್ 23, 2012


                    ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
                    ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!

                    • ಅಣ್ಣ ಅ.ನ.ಕೃ.
                    •  ಕೃಷ್ಣರಾಯರು ಭಾರತದ ಆಚೆ ಹೋಗಲಿಲ್ಲ ಮಾತ್ರವಲ್ಲ, ದಿಲ್ಲಿಗೂ ಹೋಗಲಿಲ್ಲ.
                    • ಜೀವನವೇ ಹೀಗೆ. ಏನೂ ಅರ್ಥವಾಗದ ಅನೇಕ ಶ್ರೀಮಂತರು ಸ್ವಂತ ಖರ್ಚಿನಲ್ಲಿ ಎಲ್ಲ ದೇಶಗಳನ್ನೂ ಸುತ್ತಾಡಿ ಬರುತ್ತಾರೆ. ಅವರು ಇಲ್ಲಿಂದ ಒಯಿದುದು ಏನೂ ಇಲ್ಲ, ಅಲ್ಲಿಂದ ತಂದುದೂ ಏನೂ ಇಲ್ಲ- ಸುಂಕವನ್ನು ತಪ್ಪಿಸಿ ತಂದ ಕೆಲ ಕಳ್ಳ ವಿದೇಶೀ ವಸ್ತುಗಳ ಹೊರತು.
                    • ಯಾರದೋ ತಪ್ಪಿನಿಂದ ಅಧಿಕಾರಕ್ಕೆ ಬಂದ ರಾಜಕೀಯ ಪ್ರಭುಗಳೂ ಆ ಸಮ್ಮೇಳನ, ಈ ಸಮ್ಮೇಳನ ಎಂದು ವಿದೆಶಗಳಿಗೆಲ್ಲ ಹೋಗುತ್ತಿದ್ದಾರೆ. ದಡ್ಡ ಶ್ರೀಮಂತರಂತೆ ಸ್ವಂತ ಖರ್ಚಿನಲ್ಲಲ್ಲ. ಬಡ ಜನತೆಯ ಸ್ವಂತ ಖರ್ಚಿನಲ್ಲಿ.
                    • ಅವರಲ್ಲಿ ಅನೇಕರು ಇಲ್ಲಿಂದ ಒಯಿದುದೇನು? ಅಲ್ಲಿಂದ ತಂದುದೇನು? ಅಲ್ಲಿ ಹೆಚ್ಚಾಗಿ ಕುಡಿದು, ಹೋಗಿದ್ದ ಸಮ್ಮೇಳನವನ್ನು ಹಾಯಾಗಿ ಮರೆತು ಮಲಗಿ, ಎಚ್ಚರವಾದಾಗ ಎದ್ದು ಬಂದಿದ್ದಾರೆ.
                    • ಮರಳಿ ಬಂದಿದ್ದಾರೆ ಎಂಬುದಕ್ಕೆ ಸಂತೋಷಪಡಬೇಕು. ಯಾರು? ಸಂತೋಷಪಡಬೇಕಾದುದು ನಮ್ಮ ದೇಶವಲ್ಲ. ಅವರವರ ಮನೆಯವರು.
                    • ಎಲ್ಲ ಖರ್ಚುಗಳನ್ನು ಭರಿಸುತ್ತೇವೆ, ಬನ್ನಿ ಎಂದು ಕರೆದರೂ ಕನ್ನಡ ಹಿರಿ ಸಾಹಿತಿ ಕೃಷ್ಣರಾಯರಿಗೆ ಹೋಗಲು ಅನುವು ಇಲ್ಲ. ಖರ್ಚು ಕಳೆದರೆ ಆಯಿತೆ? ಅನ್ನದ ತಪ್ಪೇಲಿಗೆ ದುಡಿಯಬೇಡವೇ? ಇದು ನಮ್ಮ ಕನ್ನಡ ಸಾಹಿತಿಗಳ ಆರ್ಥಿಕ ಪರಿಸ್ಥಿತಿ.
                    • ಅಂತೂ ಕಡಲೆ ಇರುವವರಿಗೆ ಹಲ್ಲಿಲ್ಲ, ಹಲ್ಲಿದ್ದವರಿಗೆ ಕಡಲೆ ಇಲ್ಲ.
                    ಈಗ ನನ್ನ ಮುಕ್ತಕ.
                    ಹೋಟೆಲಿನಲ್ಲಿ.
                    "ಸೀಮೆ ಎಣ್ಣೆಯ ನಾತ ಬರುತಿದೆಯಲ್ಲಯ್ಯ,
                    ಚಹವೇನು ನೀನು ಕೊಟ್ಟದ್ದು?"
                    "ಅಲ್ಲ ಸಾರ್ ಅದು ಕಾಪಿ, ಚಹವಾಗಿದ್ದರೆ ಕೆಟ್ಟ 
                    ಹರಳೆಣ್ಣೆ  ನಾತ ಬರುತಿತ್ತು"!
                                                                         * * * * * * * * *


                    ಶುಕ್ರವಾರ, ನವೆಂಬರ್ 16, 2012

                    ಇಂದಿನ ಬ್ಲಾಗು ಬರೆಯಲು ಸಾಧ್ಯವಾಗಿಲ್ಲ. ದಯವಿಟ್ಟು ಕ್ಷಮಿಸಿ.
                    ನನ್ನ ಮುಕ್ತಕ:

                    ಕುಟುಂಬ ಯೋಜನೆ!
                    ಅರುವತ್ತು ವರ್ಷದ ಮುದುಕನ ಕೈಯಲಿ
                    ಎರಡು ತಿಂಗಳ ಕೂಸ ಕಂಡು
                    "ಮಗನೇನು?" ಎಂದಾಗ ಹೇಳಿದನಾತನು
                    "ಅಲ್ಲ ಸ್ವಾಮೀ, ತಮ್ಮ " ಎಂದು!

                    ಶುಕ್ರವಾರ, ನವೆಂಬರ್ 9, 2012

                    ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
                    ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
                    • ಪಿಂಚನಿಯಾದವನಿಗೆ ಎಲ್ಲ ವಾರಗಳೂ ಭಾನುವಾರಗಳೇ. ಶನಿವಾರ ಎಂಬುದು ನೆನಪಿರಲು ವಿಶೇಷ ಕಾರಣ ಬೇಕು.
                    • ಮನದಲ್ಲಿದ್ದುದನ್ನೂ ಆಡಲು ಅಡ್ಡ ಬರುವುದು ಸಂಸ್ಕೃತಿ. ಸಂಸ್ಕೃತಿಯೂ ಒಂದು ಬಗೆಯ ಹೇಡಿತನವೆಂದು ಅದಾರೋ ಒಬ್ಬ ಇಂಗ್ಲಿಷ್ ಸಾಹಿತಿ ಹೇಳಿದ್ದಾನೆ.
                    • ಆದರೂ ರಸಿಯಾ ನನಗೆ ಹೊಸತೆ? ಶಾಲೆಯಲ್ಲಿದ್ದಾಗ ಎಷ್ಟೋ ಬಾರಿ ನೋಡಿದ್ದೇನೆ-ಭೂಪಟದಲ್ಲಿ!
                    • ತಾಳಿ ಕಟ್ಟುವಾಗ ವರನಿಗೆ ಯೋಚನೆ ಮಾಡಲು ಆಸ್ಪದ ಕೊಡುತ್ತಾರೆಯೇ? ಯೋಚಿಸಲು ಸಾಧ್ಯವಾಗಬಾರದೆಂದೇ  ದೊಡ್ಡ ಕಂಠದಲ್ಲಿ ಮಂತ್ರ ಘೋಷಣೆ ಮಾಡುವುದು.
                    • ಆಮೇಲೆ ಓಲಗ. ಯುದ್ಧದಲ್ಲಿ ಬ್ಯಾಂಡು ಬಾರಿಸುವುದೂ ಅದಕ್ಕೇ. ಮುನ್ನುಗ್ಗುವುದೊಂದೇ ಯೋಧನ ಕೆಲಸ.
                    • ನಾನು ಧಾರಾಳವಾಗಿ ಕುಡಿಯುತ್ತಿದ್ದ ಕಾಲವದು. ಬಹು ಹಿಂದೇನಲ್ಲ, ಕೇವಲ ಒಂದೂವರೆ ವರ್ಷಗಳ ಹಿಂದು. ಆಗ ಬರಬಾರದಿತ್ತೇ ಈ ರಸಿಯಾ ಪ್ರವಾಸಯೋಗ? ಓಡ್ಕಾಕ್ಕೇ ಪುಣ್ಯವಿಲ್ಲ ನನ್ನ ಹೊಟ್ಟೆಯಲ್ಲಿ ಬರಲು. ಈಗ ಇಷ್ಟು ತಡವಾಗಿ ಬಂದಿದೆ ಓಡ್ಕಾ ದೇಶಕ್ಕೆ ಔತಣ.
                    ಈಗ ನನ್ನ ಮುಕ್ತಕ.

                    ದೂರು
                    "ರವಿ ನನ್ನ ಗೊಂಬೆಯ ಒಡೆದನು ನೋಡಮ್ಮ"
                    "ಹೇಗೆ ಒಡೆದನಪ್ಪ ಹೇಳು"
                    "ಅವನ ಬೆನ್ನಿಗೆ ನಾನು ಇದರಿಂದ ಹೊಡೆದಾಗ 
                    ಆಯ್ತಿದು ನಾಲ್ಕಾರು ಹೋಳು"!

                    ಶುಕ್ರವಾರ, ನವೆಂಬರ್ 2, 2012


                    ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
                    (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
                    • ಇಲ್ಲಿ ನೋಡಿ! ಕ್ಷಯರೋಗದಿಂದ ಕ್ಯಾನ್ಸರ್ ರೋಗದಿಂದ ಸತ್ತವರು ಬಹಳ ಸ್ವಲ್ಪ ಸ್ವಾಮೀ! ಎಲ್ಲಿಯೋ ನೂರಕ್ಕೆ ಒಬ್ಬರೋ ಇಬ್ಬರೋ ಈ ರೋಗದಿಂದ ಸತ್ತಿರಬೇಕಷ್ಟೆ. ಉಳಿದ ತೊಂಭತ್ತೆಂಟು ತೊಂಭತ್ತೊಂಭತ್ತು ಜನ ಬರೀ ರೋಗದ ಹೆಸರನ್ನು ಕೇಳಿಯೇ ಸತ್ತಿದ್ದಾರೆ.
                    • ನಾಲಗೆಗೆ ರಜಕೊಟ್ಟು, ಕಿವಿಗೆ ಕೆಲಸವನ್ನು ಕೊಟ್ಟೆ. ಇದು ಸಾಧಾರಣವಾಗಿ ಅನೇಕರಿಗೆ ಸಾಧಿಸಲು ಕಷ್ಟವಾದ ಕೆಲಸ ಅಲ್ಲವೆ?
                    • ನನ್ನನ್ನು ಆ ಆಸ್ಪತ್ರೆಯಲ್ಲಿ ಹೇಗೆ ನೋಡಿಕೊಂಡರು ಎಂಬುದನ್ನು ಪ್ರತ್ಯೇಕವಾಗಿ ಹೇಳಲೇಬೇಕಿಲ್ಲ. ನೀವೇ ಊಹಿಸಿ, ನನ್ನಂತಹ ರೋಗಿ ಸತ್ತರೆ ಅವರಿಗೇ ನಷ್ಟ. ಬೇಗ ಗುಣವಾದರೆ ಇನ್ನೂ ಹೆಚ್ಚು ನಷ್ಟ. ಈ ಎರಡೂ ಆಗದಂತೆ ಅತ್ಯಂತ ಜಾಗರೂಕತೆಯಿಂದ ನೋಡಿಕೊಂಡರು ಅನ್ನಿ.
                    • "ನಿಮ್ಮ ತಲೆ! ನಿಮ್ಮ ದೇವರೂ ನಿಮ್ಮ ಮಟ್ಟದವನೇ ಅನ್ನಿ. ಪ್ರಾರ್ಥಿಸಿದರೆ ಮಾತ್ರವೇ ರೋಗವನ್ನು ಗುಣ ಮಾಡುವ ದೇವರಿಗೂ, ಲಂಚಕ್ಕೆ ಒಳ್ಳೆಯ ಔಷಧಿ ಕೊಡುವ ಸರಕಾರೀ ಡಾಕ್ಟರರಿಗೂ ಏನು ಸ್ವಾಮೀ ಭೇದ?"
                    • ಅವಿದ್ಯಾವಂತರ ಮೌಢ್ಯ ಕ್ಷಮಾರ್ಹ-ಆದರೆ ವಿದ್ಯಾವಂತರ ಮೌಢ್ಯ?
                    • ಉಲ್ಲಸಿತ ಮನಸ್ಸು, ಪ್ರಸನ್ನವಾದ ಮನಸ್ಸು, ತುಂಬು ಹೃದಯದ ನಗೆ ಉಳ್ಳವನ ಬಳಿ ಯಾವ ರೋಗವೂ ಬಾರದು. ಬಂದರೂ ಅವನಲ್ಲಿ ಎರಡು ದಿನ ಉಳಿಯಲಾರದು.
                    • "ದೇವರನ್ನು ನಂಬಿದವರು  ಆಸ್ಪತ್ರೆಯ ಅಧಿಕಾರಿಗಳಿಗೆ, ಪೇದೆಗಳಿಗೆ ಲಂಚ ಏಕೆ ಸ್ವಾಮಿ ಕೊಡಬೇಕು?"
                    • "ಏಕೆ? ಮುಖವನ್ನೇಕೆ ತೊಳೆಯಬೇಕು? ಹುಲಿ ಸಿಂಹ ಮುಂತಾದವು ಮುಖ ತೊಳೆಯುತ್ತವೆಯೋ?" ಎಂದು ಕೇಳಿದೆ. "ಇಲ್ಲ ಕತ್ತೆ ಎತ್ತುಗಳೂ ತೊಳೆಯುವುದಿಲ್ಲ" ಎಂದಳು.
                    ಮುಂದಿನ ಶುಕ್ರವಾರ ದೇವರಿಲ್ಲದ ಗುಡಿ.
                    ಈಗ ನನ್ನ ಮುಕ್ತಕ. ಧಾಟಿಗೆ ಒಂದು ಬಾರಿ - ಬೋರ್ಡಿನ,  ಮೇಲಿನ,  ಅಕ್ಷರ,  ಗಳಪೈಕಿ, ಹೀಗೆ ಬಿಡಿಸಿಕೊಂಡು ಓದಿ. 

                    ಕಣ್ಣಿನ ಡಾಕ್ಟರಲ್ಲಿ.
                    " ಬೋರ್ಡಿನ ಮೇಲಿನ ಅಕ್ಷರಗಳ ಪೈಕಿ 
                    ಎಷ್ಟೋದಬಲ್ಲಿರಿ ರಾಯ್ರೆ?
                    ಮೇಲಿಂದ ನೋಡಿರಿ" "ಸರಿ ಸರಿ ಗೊತ್ತಾಯ್ತು,
                    ಆ ಬೋರ್ಡು ಎಲ್ಲಿದೆ ಡಾಕ್ಟ್ರೆ?"


                    ಶುಕ್ರವಾರ, ಅಕ್ಟೋಬರ್ 26, 2012


                    ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
                    (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
                    ಇವತ್ತಿನ ಪ್ರಜಾವಾಣಿಬ್ಲಾಗಿಲನು ತೆರೆದು... ಅಂಕಣದಲ್ಲಿ  ಈ ಬ್ಲಾಗನ್ನು ಪರಿಚಯಿಸುವ ಅರ್ಥಪೂರ್ಣವಾದ ಲೇಖನ ಬಂದಿದೆ. ಆ ಬಗ್ಗೆ 
                    ಅಂಕಣಕಾರರಿಗೂ ಪತ್ರಿಕೆಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
                    • "ಅದೆಲ್ಲ ಪ್ರಶ್ನೆ ಸಮಾಜಕ್ಕೆ ಸಂಬಂಧವಿಲ್ಲ. ತಲೆ ಇದ್ದರಲ್ಲವೆ ಅದರಲ್ಲಿ ಪ್ರಶ್ನೆಗಳೇಳುವುದು ? ದುಂಡು ಜಗತ್ತಿಗೆ ರುಂಡವಿಲ್ಲ, ಸ್ವಾಮೀ!"
                    • ನೀತಿಯನ್ನು ಬಿಟ್ಟು ಬಾಳುವ ಪ್ರಜೆಗಳೇ ಹೆಚ್ಚಿರುವಾಗ ಹಳಿಯನ್ನು ಬಿಟ್ಟು ಓಡುವ ಸ್ವಾತಂತ್ರ್ಯ ರೈಲಿಗೆ ಮಾತ್ರ ಏಕೆ ಬೇಡ?
                    • "ಹಾಗೂ ಅಲ್ಲ, ಹೀಗೂ ಅಲ್ಲ, ಅವರವರ ಸಂಸ್ಕೃತಿ ಅವರವರನ್ನು ಕಾಯಬೇಕಾಗಲಿ, ಅಪ್ಪ ಅಮ್ಮ ಕಾಯಲು ಆಗುತ್ತದೆಯೇ?"
                    • ಸಂಸ್ಕೃತಿ ಎಂಬುದು ಮುಳ್ಳು ಬೇಲಿ. ಹೆಂಣಿನ ಶೀಲವನ್ನು ಕಾಯಲು ಅದೊಂದೇ ಸಾಕು.
                    • ಸಾಲಂಕೃತ ಅಂದರೆ ಸಾಲವನ್ನು ಮಾಡಿ ಕನ್ನೆಗೆ ಮದುವೆ ಮಾಡಿ ಹೊರಸಾಗಿಸಿದರು.
                    • ಕಾಲರಾಯ ನುಂಗಲಾರದ ದುಃಖ ಎಂಬುದಿದೆಯೇ, ಈ ಸೃಷ್ಟಿಯಲ್ಲಿ? ವೃದ್ಧಾಪ್ಯದಲ್ಲಿ ಯೌವನದ ಮಗನನ್ನು ಕಳೆದುಕೊಂಡು ಮರೆತವರಿದ್ದಾರೆ.
                    *ಮುಂದಿನ ಬ್ಲಾಗ್ ಬರವಣಿಗೆ ಮುಂದಿನ ಶುಕ್ರವಾರ.
                    ಈಗ ನನ್ನ ಮುಕ್ತಕ.

                    ಹಲ್ಲಿನ ಡಾಕ್ಟರಲ್ಲಿ....
                    "ಒಂದು ಹಲ್ಲನು ಕಿತ್ತು ಎರಡು ಹಲ್ಲಿನ ಫೀಜು 
                    ನೀವು ಕೇಳುವುದು ಏತಕ್ಕೆ?"
                    "ಈ ಹಲ್ಲು ಕಿತ್ತಾಗ ನೀ ಕೂಗಿಕೊಂಡಾಗ 
                    ಓಡಿ ಹೋದನು ಒಬ್ಬ, ಅದಕೆ!"            
                                                                         **********

                    `

                      ಬುಧವಾರ, ಅಕ್ಟೋಬರ್ 24, 2012

                      ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
                      (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
                      • ಉಪದೇಶ ಕೊಡುವ ಧಾರಾಳತೆಗೆ ನಮ್ಮ ಜನತೆಯಲ್ಲಿ ಕೊರತೆಯೇ?  ಮಾಡು ಇಲ್ಲವೇ ಉಪದೇಶ ಮಾಡು ಎಂಬುದೇ  ನಮ್ಮ ತತ್ವ ಅಲ್ಲವೇ?
                      • ಆದರೆ ತಲೆ ಮಾತ್ರವೇ ಮನುಷ್ಯನಲ್ಲವಲ್ಲಾ? ಹೃದಯವೆಂಬುದೂ ಒಂದಿರುತ್ತದೆ ಸ್ವಾಮಿ!
                      • ಹೃದಯಕ್ಕೆ ತಲೆ ಇಲ್ಲ, ತಲೆಗೆ ಹೃದಯವಿಲ್ಲ, ಆದರೆ ಈ ಎರಡೂ ಮಾನವನಿಗಿರುತ್ತವೆ.
                      • ಅಧಿಕಾರವೆಂದರೇನು? ಅದೊಂದು ದೇವನ ಹೆಂಡ. ಅದರ ಅಮಲಿನಲ್ಲಿ ಎಲ್ಲವನ್ನೂ ಮರೆಯುತ್ತಾರೆ.
                      • ತಂದೆ ತಾಯಿಗಳು ಮಕ್ಕಳನ್ನು ಕೆಡಿಸುವುದಕ್ಕೆ ಎರಡು ಆಯುಧಗಳಿವೆ-ಒಂದು ಬೆತ್ತ, ಇನ್ನೊಂದು ಅತಿ ಪ್ರೀತಿ. ಈ ಎರಡನ್ನೂ ಸಮಯೋಚಿತವಾಗಿ ಉಪಯೋಗಿಸಿದರೆ ಮಕ್ಕಳು ಚೆನ್ನಾಗಿಯೇ ಆಗುತ್ತವೆ, ಒಳ್ಳೆಯ ಪ್ರಜೆಯಾಗಿ ಬಾಳುತ್ತವೆ ಕೂಡ.
                      • "ನಾನು ದೇವರನ್ನು ನಂಬುವುದಿಲ್ಲ. ಆದರೆ ದೈವೀ ಪ್ರತೀಕಾರವೆಂಬುದಂತೂ ಇದ್ದೇ ಇದೆಯಲ್ಲ!"
                      ಮುಕ್ತಕ.
                      ಸುಭಾಷಿತ 
                      ಅತಿಯಾದ ಬಳಕೆಯು ಬೆಲೆಯನು ಕಳೆವುದು 
                      ಇದಕೊಂದು ಸಾಮತಿಯಿಹುದು.
                      ಮಲಯ ಪರ್ವತದಲ್ಲಿ ಚಂದನ ವೃಕ್ಷವು 
                      ಭಿಲ್ಲರ ಒಲೆಯುರಿಸುವುದು.
                                                                              **********

                        ಸೋಮವಾರ, ಅಕ್ಟೋಬರ್ 22, 2012


                        ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
                        (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
                        • ಡಾಕ್ಟರ್ ಜಿ. ರಾಂಕ್ ಎಂಬ ಮಾನಸ ಶಾಸ್ತ್ರಜ್ಞ ಈ ಜಾತಿ ಪದ್ಧತಿಯಿಂದ ಮಾನವನ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳ ಒಂದು ಯಾದಿಯನ್ನೇ ಸಿದ್ಧಪಡಿಸಿದ್ದಾನೆ.
                        • ಜಾತಿ ಒಂದು ಅಗ್ಗದ ಅಫೀಮು.
                        • ತನ್ನ ಬಗ್ಗೆ ಏನನ್ನೂ ಹೇಳಿಕೊಳ್ಳಲು ಇಲ್ಲದವನು ತನ್ನ ಜಾತಿಯನ್ನು ಹೇಳಿಕೊಳ್ಳುತ್ತಾನೆ.
                        • ಯಾವನೂ ತನ್ನ ಜಾತಿಗಾಗಿ ನಾಚಿಕೆ ಪಡಬೇಕಾಗಿಲ್ಲ. ಅಂತೆಯೇ ಯಾವನೂ ಹೆಮ್ಮೆಪಟ್ಟುಕೊಳ್ಳಬೇಕಿಲ್ಲ.ಅದಕ್ಕವನು ಜವಾಬ್ದಾರನಲ್ಲವಲ್ಲ?
                        • ತಪ್ಪು ಮಾಡಿದವನು ಕ್ಷಮಾಪಣೆ ಬೇಡುವುದರಲ್ಲಿ ನಾಚಿಕೆ ಏಕೆ? ತಪ್ಪನ್ನೊಪ್ಪಿಕೊಂಡು ಕ್ಷಮಾಪಣೆ ಬೇಡುವುದು ಸುಸಂಸ್ಕೃತ ಮನುಷ್ಯನ ಮೊಟ್ಟ ಮೊದಲ ಲಕ್ಷಣ.
                        • ಜಾತಿಗೆ ಬೆಲೆ ಇದೆ, ನೀತಿಗೆ ಬೆಲೆ ಇಲ್ಲ. ಹಣಕ್ಕೆ ಬೆಲೆ ಇದೆ, ಗುಣಕ್ಕೆ ಬೆಲೆ ಇಲ್ಲ. ಮೌಢ್ಯತೆಗೆ ಬೆಲೆ ಇದೆ, ವಿವೇಚನೆಗೆ ಬೆಲೆ ಇಲ್ಲ-ಇದು ನಮ್ಮ ಸಮಾಜ.
                        • ಜೇಲು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿ ನೂರೆಂಟು ಜಾತಿಗಳ ಜಂಜಾಟವಿಲ್ಲ. ಮೇಲ್ಜಾತಿ, ಕೀಳ್ಜಾತಿ ಎಂಬ ಅಯೋಗ್ಯ ಮತ್ತು ದಡ್ಡ ಕಲ್ಪನೆಗಳಿಲ್ಲ. ಎಲ್ಲರೂ ಒಂದೇ ಜಾತಿ. ನೀವು ಹೊರಗಡೆ ಇನ್ನೂ ಕನಸು ಕಾಣುತ್ತಿರುವ ಜಾತ್ಯತೀತ ಸಮಾಜ ಇಲ್ಲಿ ಎಂದೋ ಹುಟ್ಟಿದೆ.
                        ಶುಕ್ರವಾರದ ಮುಕ್ತಕದ ಒಗಟು: ಮೊದಲ ಮೂರು ಪ್ರಶ್ನೆಗಳಿಗೆ ಕೊನೆಯ ಸಾಲಿನಲ್ಲಿರುವ ಮೂರು ಶಬ್ದಗಳೇ ಕ್ರಮವಾಗಿ ಉತ್ತರ!
                        ಇನ್ನು ಮುಂದಿನ ಮುಕ್ತಕ. ಧಾಟಿ ಹಿಡಿಯಲು  ಏನಯ್ಯ  ನೀಕೊಟ್ಟ  ಚಾಕಪ್ಪಿ ನೊಳಗೊಂದು  ನೊಣಬಿದ್ದು  ಸತ್ತಿದೆ  ಮಾಣಿ ಹೀಗೆ ಬಿಡಿಸಿ ಒಮ್ಮೆ ಓದಿಕೊಳ್ಳಿ.
                        ಹೋಟೆಲಿನಲ್ಲಿ 
                        "ಏನಯ್ಯ, ನೀ ಕೊಟ್ಟ ಚಾಕಪ್ಪಿನೊಳಗೊಂದು 
                        ನೊಣ ಬಿದ್ದು ಸತ್ತಿದೆ ಮಾಣಿ"
                        "ಚಾ ಒಳ್ಳೆ ಬಿಸಿಯುಂಟು ನೊಣ ಬಿದ್ದರದರಲ್ಲಿ 
                        ಬದುಕಿರಲಾರದು ಕಾಣಿ!"
                                                                                          ************