ಶುಕ್ರವಾರ, ಮಾರ್ಚ್ 1, 2013


ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • `ಹಾ, ತಿಳಿಯಿತು ಈಗ. ನಿದ್ರೆಗೆ ಮುಖ್ಯವಾಗಿ ಬೇಕಾದುದು ಹಾಸಿಗೆ, ಮಂಚವಲ್ಲ. ನಿದ್ರಾಭಂಗಕ್ಕೆ ಕಾರಣ ಒಂದೇ, ಅದು ಯೋಚನೆ. ಯಾವ ಚಿಂತೆಯೂ ಇಲ್ಲ ಈ ಗಮಾರನಿಗೆ. ಹಾಯಾಗಿ ಗೊರಕೆ ಕೊರೆಯುತ್ತಿದ್ದಾನೆ.'
  •  ಹಾಳು ಬಾಳಿನ ಲೆಕ್ಕಾಚಾರವೇ ಹೀಗೆ. ಬದುಕುತ್ತೇನೆ ಎಂದು ಒದ್ದಾಡಿದಳು ಸುಭದ್ರ, ಸಾಯಿ ಎಂದಿತು. ಸಾಯಲು ಸನ್ನದ್ಧಳಾಗಿ  ಹೊರಬಂದಳು. ಬದುಕು ನಡೆ ಎಂದಿತು. ಇರುತ್ತೇನೆ ಎನ್ನುವಾಗ ಇರುವುದೆಷ್ಟು ಕಷ್ಟವೋ, ಹೋಗುತ್ತೇನೆ  ಎನ್ನುವಾಗ ಹೋಗುವುದೂ ಅಷ್ಟೇ ಕಷ್ಟ, ಪಾಪ!
  • "ನನಗೂ ನಿಮ್ಮ ಹೆಂಡತಿಗೂ ಒಂದೇ ಭೇದ. ಮೊದಲು ಮದುವೆ, ಆಮೇಲೆ ಇನ್ನೊಂದು ಆಕೆಯೊಟ್ಟಿಗೆ. ಅದು ಇನ್ನೂ ಆಗಲಿಲ್ಲ. ನನ್ನ ಸಮಾಚಾರ ಹಾಗಲ್ಲ. ಆಮೇಲೆ ಮದುವೆಯಾಗೋಣ. ಮೊದಲು ಇನ್ನೊಂದು ಆಗಲಿ ಬನ್ನಿ."
  • ಊರೆಲ್ಲವೋ ನಕ್ಕ ಮೇಲೆ ಕಿವುಡ ನಕ್ಕ ಎಂಬಂತೆ, ಲೋಕಕ್ಕೆಲ್ಲವೂ ತಿಳಿದ ಮೇಲೆ ಶ್ರೀನಿವಾಸಶೆಟ್ಟರಿಗೆ ತಿಳಿಯಿತು. 
ಇಗೋ ನನ್ನ ಮುಕ್ತಕ:
ಅದೃಷ್ಟ 
ಆಪತ್ತಿನೊಳಗೆಯೆ ಅನುಕೂಲವಿರುವುದು 
ಅದೃಷ್ಟ ಸರಿಯಿದ್ದವರಿಗೆ. 
ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಬಾಯ್ದೆರೆದು 
ತಲೆಯ ಮೇಲಕೆ ಬಿದ್ದ ಹಾಗೆ!

    ಶುಕ್ರವಾರ, ಫೆಬ್ರವರಿ 1, 2013


    ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
    ಫೋ: ೨೩೬೭೬೭೬         Email: sahithyaprakashana@yahoo.co.in
    ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
    ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
    • `ನನ್ನನ್ನು ಹಾಳು ಮಾಡಿದಳು ಆ ಮುಂಡೆ' ಅನ್ನುವ ಗಂಡುಗಳು ಅನೇಕ.
              `ಆ  ಚಾಂಡಾಲನಿಂದಲೇ ನಾನು ಹಾಳಾದೆ' ಎಂದು ಹೇಳುವ ಹೆಂಣುಗಳು ಹೇರಳವಾಗಿವೆ.

               ಯಾರೂ ಯಾರನ್ನೂ ಹಾಳು ಮಾಡಿಲ್ಲ ಎಂಬುದು ಸತ್ಯವಾದ ಮಾತು. ಹಾಳಾಗಿರುವ ಪ್ರತಿಯೊಬ್ಬನೂ,          ಪ್ರತಿಯೊಬ್ಬಳೂ ಆತ್ಮ ನಿರೀಕ್ಷೆ ಮಾಡಿಕೊಂಡು ತನ್ನ ಪತನಕ್ಕೆ ತಾನೇ ಕಾರಣವನ್ನು ಹುಡುಕಿಕೊಂಡರೆ, ಅದು ದೊರೆಯುವುದು ತನ್ನಲ್ಲಿ ಮಾತ್ರವೇ ಆಲ್ಲದೆ ಬೇರೆಲ್ಲಿಯೂ ಅಲ್ಲ. ಆದರೆ ಆ ಆತ್ಮಪರೀಕ್ಷೆಗೆ ಎಲ್ಲಕ್ಕೂ ಮೊಟ್ಟಮೊದಲಾಗಿ ಆ ಇಚ್ಛೆ ಬೇಕು, ತಾನೇ ತನ್ನಿಂದ ಹೊರ ನಿಂತು ನೋಡಲು ರಾಗದ್ವೇ ಷಾತೀತ ದೃಷ್ಟಿ ಬೇಕು, ಅದನ್ನು ಒಪ್ಪಿಕೊಳ್ಳಲು ಮನೋದಾರ್ಢ್ಯ ಬೇಕು, ಆ ಪ್ರಾಮಾಣಿಕತೆಯೂ ಬೇಕು.
    •  ತನ್ನನ್ನು ಕೆಡಿಸಿ, ಹಾಳು ಮಾಡಿ, ಬೀದಿಯ ಭಿಕಾರಿಯನ್ನಾಗಿ ಮಾಡಿದ ಸುಭದ್ರ ತನ್ನ ಪಕ್ಕದ ಮನೆಯ ಇನ್ನೊಬ್ಬನನ್ನೇಕೆ ಹಾಗೆಯೇ ಬಿಟ್ಟಳು?
    • ಹುಳುವನ್ನು ಹುಡುಕುತ್ತ ಅದು ಮಲಗಿದ್ದಲ್ಲಿಗೆ ಹೋಗಿ ಅದರ ರೆಕ್ಕೆಯನ್ನು ಸುಟ್ಟು ಬರುವಂತಹ ದೀಪವು ಇನ್ನೂ ಹುಟ್ಟಲಿಲ್ಲ. ಹುಡುಕುತ್ತ ಬರುವುದು ಸುಡುವ ದೀಪವಲ್ಲ, ಪಾಪ! ಅದಕ್ಕೆ ಅಪವಾದ ಕಟ್ಟುವುದು ಮಹಾಪಾಪ! ಸುಡಿ ಸಿಕೊಳ್ಳುವ ಹುಳುವೇ ಅಡಬರಿಸುತ್ತ ಬಂದು ಅದರಲ್ಲಿ ಬೀಳುತ್ತದೆ. ಸುಟ್ಟುಕೊಂಡು ಸಾಯುತ್ತದೆ.
    • ಪ್ರಭಾಕರ ಮತ್ತು ಸುಭದ್ರರಲ್ಲಿ ಬೆಂಕಿ ಯಾರು? ಹುಳು ಯಾರು? ಇಬ್ಬರೂ ಅಷ್ಟಿಷ್ಟು ಬೆಂಕಿ, ಇಬ್ಬರೂ ಇಷ್ಟಷ್ಟು ಹುಳು. ಒಬ್ಬರನ್ನೊಬ್ಬರು ಬೆಂಕಿಯಾಗಿ ಸುಟ್ಟರು, ಹುಳುವಾಗಿ ಸುಟ್ಟುಕೊಂಡರು, ಕಡೆಗೆ ಪರಸ್ಪರ ಬೈಯುತ್ತ ಕುಳಿತರು.
                  ಈಗ ನನ್ನ ಮುಕ್ತಕ:    

                  ಮುದ್ರಾ ರಾಕ್ಷಸ 
                " ನಮ್ಮ ರಾಜರ ವಜ್ರಹಾರವ ಕದ್ದರು"
                ಎಂದಿತ್ತು ಕಳಿಸಿದ್ದ ವರದಿ.
                "ನಮ್ಮ ರಾಜರು ವಜ್ರಹಾರವ ಕದ್ದರು"
                ಎಂದಿತ್ತು ಅಚ್ಚಾದ ಸುದ್ದಿ!


      ಶುಕ್ರವಾರ, ಜನವರಿ 25, 2013

      ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
      ಫೋ: ೨೩೬೭೬೭೬         Email: sahithyaprakashana@yahoo.co.in
      ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
      ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
      • "ಐದು, ಆರು ಆದಾಗ ಆಗುವುದೇ ಹಾಗೆ. ನನಗೂ ಆಗೆಲ್ಲ ಬಹು ಕಷ್ಟವೆನಿಸುತ್ತಿತ್ತು. ಹತ್ತು ದಾಟಿತು, ನೋಡಿ. ಯಾವ ಚಿಂತೆಯೂ ಇಲ್ಲ ನಮಗೆ. ಎರಡು ಮಕ್ಕಳಾದರೂ ಅಳುತ್ತಲಿದ್ದರೆ ಚೆನ್ನಾಗಿ ನಿದ್ರೆ ಬೀಳುತ್ತೆ, ನನಗೆ ನಮ್ಮ ಮನೆಯವರಿಗೆ."
      • ಗಂಡ ಸತ್ತ ದುಃಖವನ್ನು ಮರೆಯಲು ಅಷ್ಟೇನೂ ಕಷ್ಟವಾಗಲಿಲ್ಲ ಆ ಪ್ರಾಣಿಗೆ. ಗಂಡ ಸತ್ತನೆಂಬ ಕಾರಣಕ್ಕೆ ತಾನು ವಿಕಾರವಾದುದಕ್ಕಾಗಿ ಆಗಿದ್ದ ದುಃಖ? ಗಂಡ ಸತ್ತದ್ದು ಒಮ್ಮೆ, ಒಂದೇ ಒಂದು ಸಲ. ತಾನು ಜನ್ಮಾದ್ಯಂತವೂ ಅನುಭವಿಸಬೇಕು ಈ ರೂಪವನ್ನು!
      • ಸಾಕೇನು ಮನುಷ್ಯನಿಗೆ ಅನ್ನ, ಬಟ್ಟೆ ಎರಡೇ? ಜೀವನದಲ್ಲಿ ಜೋಡೆ೦ಬುದು ಬೇಡವೇ? ತಲೆ ಬೋಳಾದ ಮಾತ್ರಕ್ಕೆ ತಲೆಯಲ್ಲಿಯ ವಿಚಾರಗಳೂ ಬೋಳಾಗುತ್ತವೆಯೇ? ಅನ್ನ ಉಣ್ಣುವ ಬಾಯಿಗೆ ಹುಂಣಾದ ಮಾತ್ರಕ್ಕೆ ಹೊಟ್ಟೆಯ ಹಸಿವು ಬಿಡುತ್ತದೆಯೇ? ಅಂಗಸೌಖ್ಯದ ಅರಿವು ಇನ್ನೂ ಸರಿಯಾಗಿ ಆಗಿರಲಿಲ್ಲ ಸುಭದ್ರೆಗೆ, ಆಗಲೇ ವೈಧವ್ಯ. ಸಾಲದುದಕ್ಕೆ ಕೈಲೊಂದು ಮಗು.
      • ತಲೆಗೊಂದು ಮಾತನಾಡಿದರು ಮಡಿವಂತ ಮಹಾಶಯರುಗಳು. ಇವರಲ್ಲಿ ಸುಭದ್ರೆಯೊಂದಿಗೆ ಸುಖಪಟ್ಟವರೆ ಹೆಚ್ಚು ಎಂದರೆ ಎಷ್ಟೂ ಸುಳ್ಳಲ್ಲ. ಸಿಕ್ಕು ಬಿದ್ದವನು ಕಳ್ಳ. ಪಾರಾದವನು ಪಂಚಾಯತಿದಾರ!
      ಈಗ ನನ್ನ ಮುಕ್ತಕ:

      ಸ್ವಭಾವ:
        ಸರಸ ಕಾವ್ಯಗಳೆಷ್ಟನೋದುತಲಿದ್ದರು
        ಸಖಿ ನಿನ್ನ ಮುಖ ಮಾತ್ರ ಗಂಟು.
        ಸಿಹಿಯಾದ ಪಾಯಸದೊಳಗಾಡುತಿದ್ದರು
        ಸಿಹಿಯಾಗುವುದುಂಟೆ ಸೌಟು?

        ಶುಕ್ರವಾರ, ಜನವರಿ 18, 2013

        ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
        ಫೋ: ೨೩೬೭೬೭೬         Email: sahithyaprakashana@yahoo.co.in
        ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. 
        ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
        • ಮುಚ್ಚಿದ ಬಾಗಿಲನ್ನು ನೋಡಿ ಅಳುತ್ತ ಕೂಡುವುದು ಅವಿವೇಕಿಯ ಲಕ್ಷಣ. ಒಂದು ಮುಚ್ಚಿದಾಗ ಮತ್ತೊಂದು ತಾನೇ ತೆರೆದಿರುತ್ತದೆ. ಮಾರ್ಚಿನಲ್ಲಿ ಫೇಲಾದೆ ಎಂದು ಅಳುವ ವಿದ್ಯಾರ್ಥಿ ನಿರಾಶಾವಾದಿ-ಮುಂದೊಂದು ಸೆಪ್ಟೆಂಬರ್ ಕಾಣಲಿದೆ ಎನ್ನುವ ವಿದ್ಯಾರ್ಥಿ  ಆಶಾವಾದಿ. ಆಮೇಲೆಯೂ ಇದ್ದೇ ಇದೆ  ಮತ್ತೊಂದು ಮಾರ್ಚಿ ಎನ್ನುವವ ವಿಶಿಷ್ಟಾಶಾವಾದಿ. 
        • ಬಾರ್ ಗೆ ಒಮ್ಮೆ ಬಂದವನು ಬಾರಿಬಾರಿಗೂ ಬರಬೇಕೆನ್ನುತ್ತಾನೆ. ಅದು ಬಾರ್ ನ ಆಚಾರವೂ ಅಹುದು, ಬರುವವನ ಗ್ರಹಚಾರವೂ ಅಹುದು. ಹಣವು ಕೊಡುವ ಹಲವಾರು ಸವಲತ್ತುಗಳಲ್ಲಿ ಹಾಳಾಗುವುದೂ ಒಂದು.
        • ಕುಳಿತು ಉಂಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬುದು  ಆ ಎಂದಿನದೋ ಒಂದು ಹಳೆಯ ಗಾದೆಮಾತು. ಕುಳಿತು ಕುಡಿಯುವವನಿಗೆ? ಕುಬೇರನ ಹೊನ್ನೂ ಸಾಲದು. ಹೀಗಾಗದಿರಲೆಂದೋ ಏನೋ, ಕೆಲವರು ನಿಂತು ಕುಡಿದು, ಕಡೆಗೆ ಕುಡಿದು ಮಲಗುತ್ತಾರೆ; ಕೂಡುವ ದಡ್ಡತನವನ್ನೇ ಮಾಡುವುದಿಲ್ಲ.
        • ಮುದ್ದುವೀರ ದೇವರಂತ ಹುಡುಗ, ದಾವಣಗೇರಿಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ. ಈಗಲೂ ದೇವರಂತಹನೆ ಅನ್ನಿ, ಅವತಾರಗಲಷ್ಟೇ ಬೇರೆ-ಆಗ ರಾಮಾವತಾರ, ಈಗ ಕೃಷ್ಣಾವತಾರ!
        ಈಗ ನನ್ನ ಮುಕ್ತಕ-
        ಸುಭಾಷಿತ 
        ಅತಿಯಾದ ಬಳಕೆಯು ಬೆಲೆಯನು ಕಳೆವುದು 
        ಇದಕೊಂದು ಸಾಮತಿ ಇಹುದು.
        ಮಲಯ ಪರ್ವತದಲ್ಲಿ ಚಂದನ ವೃಕ್ಷವು 
        ಭಿಲ್ಲರ ಒಲೆಯುರಿಸುವುದು.
                                                           * * * * * * * * * * * * 

        ಶುಕ್ರವಾರ, ಜನವರಿ 4, 2013

        ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
        ಫೋ: ೨೩೬೭೬೭೬         Email: sahithyaprakashana@yahoo.co.in
        ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ
        ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
        • ಬರೀ`ಸತ್ತ'ಎಂದರೆ ನಿಜವಾಗಿಯೂ ಸತ್ತ ಎಂದಷ್ಟೆ ಅರ್ಥ. `ಸತ್ತ, ಸೂಳೇಮಗ'ಎಂದರೆ ಅಷ್ಟೇ ನಿಜವಾಗಿಯೂ ಸತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿದಂತಾಯಿತಲ್ಲ?
        • "ಮುಂದಿನ ಜನ್ಮಗಳಲ್ಲಿ ರಾಜನಾಗಿ ಹುಟ್ಟುವ ಯೋಗವು, ಈಗ ವೇಷ ಹಾಕುವುದರಿಂದ ಹೋಗಿಬಿಡುತ್ತದೆ" ಎಂದರು ಅಜ್ಜಮ್ಮ.
        • ನಾಟಕವನ್ನೇನೋ ಎಲ್ಲರೂ ಪ್ರೀತಿಸುತ್ತೇವೆ. ಕಾಂಪ್ಲಿಮೆಂಟರಿ ಫ್ಯಾಮಿಲೀ ಪಾಸೂ  ದೊರೆತರಂತೂ ಸರೇ ಸರೆ.
        • ಸರಿಯಾದವರು ಮುಂದು ಬರಬೇಕು, ದೂರ ನಿಂತು ಟೀಕೆ ಮಾಡುವ ಬದಲು; ಸರಿ ಇಲ್ಲದವರನ್ನು ದೂರ ಸರಿಸಲಿಕ್ಕಲ್ಲ, ಸನಿಯ ಕರೆದು ತಿದ್ದಿ ಸರಿ ಮಾಡಿಕೊಡಲು.
        • ಆ ಮನೆಯಲ್ಲಿ ಆಗಲಿದ್ದ ಮದುವೆ ಆಗಲಿಲ್ಲ-ಈ ಕಂಪನಿ ಮನೆಯಲ್ಲಿ ಮಗುವಾಯಿತು ಅವಳಿಗೆ. ಬಂಗಾರ, ಬಂಗಾರದ ಕತ್ತೆಯಾದಳು.
        ನನ್ನ ಮುಕ್ತಕ

        ಹೊಂದಿಕೆ 
        ಕೃಷ್ಣನ ಮೈ ಬಣ್ಣ ಆಕಾಶನೀಲಿಯು 
        ಬಲರಾಮನದು ಸ್ವರ್ಣವರ್ಣ.
        ಪೀತಾಂಬರನು ಕೃಷ್ಣ ನೀಲಾಂಬರನು ರಾಮ 
        ಎಂತಹ ಹೊಂದಿಕೆಯಣ್ಣ!
                                                                                     * * * * * * * * * *