ಶುಕ್ರವಾರ, ಡಿಸೆಂಬರ್ 7, 2012


ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
  • ಸಂತೋಷವಾದಾಗ ಎರಡು ಬಗೆಯ ಜನಕ್ಕೆ ಹೇಳಬೇಕೆನಿಸುತ್ತದೆ- ನಮ್ಮ ಸಂತೋಷವನ್ನು ಕಂಡು ಸಂತೋಷಿಸು ವವರು ಮತ್ತು ಅಸೂಯೆಯಿಂದ ಕೊರಗುವವರು. ಅವರ ಸಂತೋಷದಿಂದ ಮತ್ತು ಇವರ ಅಸೂಯೆಯಿಂದ ನಮ್ಮ ಸಂತೋಷ ದ್ವಿಗುಣವಾಗುತ್ತದೆ - ಎರಡನೆಯದು ನಮ್ಮ ಸಣ್ಣತನ.
  • ಕನ್ನಡ ಸಾಹಿತಿಗಳನ್ನು ಕಂಡೂ ಅಸೂಯೆ ಪಡುವವರಿದ್ದಾರೆಯೇ? ಯಾಕಿಲ್ಲ? ಉಳಿದ ಕೆಲ ಸಾಹಿತಿಗಳು!
  • ಮೂಗೆಳೆದರು ಮುತ್ತುಸ್ವಾಮಿ. ನಮ್ಮನ್ನು ಹೊತ್ತು ಹಾಕಲು ಮಾರ್ಗವನ್ನು ಹುಡುಕಬೇಡವೇ? ಇದಕ್ಕಾಗಿಯೇ ಅವರಿಗೆ ದೊಡ್ಡ ಸಂಬಳ.
  • ವೃದ್ಧಾಪ್ಯ ಸುಖವಲ್ಲ ಎಂದು ದಡ್ಡ ಹೇಳಬೇಕು. ಮಕ್ಕಳು ಮೊಮ್ಮಕ್ಕಳು ಯೌವನದಲ್ಲಿ ಸಿಕ್ಕಾರೆಯೇ? ಈ ಹಿಗ್ಗು ಏನೆಂಬುದನ್ನು ಅರಿಯಲು ವೃದ್ಧಾಪ್ಯವೇ ಬೇಕು.
  • ನಾನು ಸಾಧಿಸಿರುವ ಕೆಲ ತಪಸ್ಸುಗಳಲ್ಲಿ ಇದೂ ಒಂದು. ಮರೆಯಲು ನಿರ್ಧರಿಸಿದರೆ ನನ್ನ ಮನದಿಂದ ಅದನ್ನು ಕಿತ್ತಿ ಹಾಕಿ ಹಾಯಾಗಿದ್ದುಬಿಡುತ್ತೇನೆ. ನನ್ನ ಮೂವತ್ತಾರು ವರ್ಷಗಳ ಮಿತ್ರನಾಗಿದ್ದ ಕುಡಿತ ದೂರವಾಗಿರುವುದೂ ಹೀಗೆಯೇ. ಇದು ಮನಶ್ಶಾಂತಿಗೆ  ಬಹು ಸಹಕಾರಿ.
ಇನ್ನು ನನ್ನ ಮುಕ್ತಕ:

ಹಾಸ್ಯ 
ನೀನೆಂದ ಜೋಕಿಗೆ ಇತರರು ನಗಬೇಕು 
ನೀನೆ ಹಹ್ಹಾ ಎಂಬುದಲ್ಲ.
ನಶ್ಯದ ಘಾಟಿಗೆ ಜನರೆಲ್ಲ ಸೀತರು 
ಡಬ್ಬಿಯು ಸೀನುವುದಿಲ್ಲ!
                                                        * * * * * * * * * * * *