ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ. ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
- ಸಂತೋಷವಾದಾಗ ಎರಡು ಬಗೆಯ ಜನಕ್ಕೆ ಹೇಳಬೇಕೆನಿಸುತ್ತದೆ- ನಮ್ಮ ಸಂತೋಷವನ್ನು ಕಂಡು ಸಂತೋಷಿಸು ವವರು ಮತ್ತು ಅಸೂಯೆಯಿಂದ ಕೊರಗುವವರು. ಅವರ ಸಂತೋಷದಿಂದ ಮತ್ತು ಇವರ ಅಸೂಯೆಯಿಂದ ನಮ್ಮ ಸಂತೋಷ ದ್ವಿಗುಣವಾಗುತ್ತದೆ - ಎರಡನೆಯದು ನಮ್ಮ ಸಣ್ಣತನ.
- ಕನ್ನಡ ಸಾಹಿತಿಗಳನ್ನು ಕಂಡೂ ಅಸೂಯೆ ಪಡುವವರಿದ್ದಾರೆಯೇ? ಯಾಕಿಲ್ಲ? ಉಳಿದ ಕೆಲ ಸಾಹಿತಿಗಳು!
- ಮೂಗೆಳೆದರು ಮುತ್ತುಸ್ವಾಮಿ. ನಮ್ಮನ್ನು ಹೊತ್ತು ಹಾಕಲು ಮಾರ್ಗವನ್ನು ಹುಡುಕಬೇಡವೇ? ಇದಕ್ಕಾಗಿಯೇ ಅವರಿಗೆ ದೊಡ್ಡ ಸಂಬಳ.
- ವೃದ್ಧಾಪ್ಯ ಸುಖವಲ್ಲ ಎಂದು ದಡ್ಡ ಹೇಳಬೇಕು. ಮಕ್ಕಳು ಮೊಮ್ಮಕ್ಕಳು ಯೌವನದಲ್ಲಿ ಸಿಕ್ಕಾರೆಯೇ? ಈ ಹಿಗ್ಗು ಏನೆಂಬುದನ್ನು ಅರಿಯಲು ವೃದ್ಧಾಪ್ಯವೇ ಬೇಕು.
- ನಾನು ಸಾಧಿಸಿರುವ ಕೆಲ ತಪಸ್ಸುಗಳಲ್ಲಿ ಇದೂ ಒಂದು. ಮರೆಯಲು ನಿರ್ಧರಿಸಿದರೆ ನನ್ನ ಮನದಿಂದ ಅದನ್ನು ಕಿತ್ತಿ ಹಾಕಿ ಹಾಯಾಗಿದ್ದುಬಿಡುತ್ತೇನೆ. ನನ್ನ ಮೂವತ್ತಾರು ವರ್ಷಗಳ ಮಿತ್ರನಾಗಿದ್ದ ಕುಡಿತ ದೂರವಾಗಿರುವುದೂ ಹೀಗೆಯೇ. ಇದು ಮನಶ್ಶಾಂತಿಗೆ ಬಹು ಸಹಕಾರಿ.
ಹಾಸ್ಯ
ನೀನೆಂದ ಜೋಕಿಗೆ ಇತರರು ನಗಬೇಕು
ನೀನೆ ಹಹ್ಹಾ ಎಂಬುದಲ್ಲ.
ನಶ್ಯದ ಘಾಟಿಗೆ ಜನರೆಲ್ಲ ಸೀತರು
ಡಬ್ಬಿಯು ಸೀನುವುದಿಲ್ಲ!
* * * * * * * * * * * *