ಶುಕ್ರವಾರ, ಮಾರ್ಚ್ 22, 2013


ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕೆ ಮುಹೂರ್ತವನ್ನಿಟ್ಟುಕೊಟ್ಟರು ವಶಿಷ್ಠ ಮಹರ್ಷಿಗಳು. ಅದೇ ಶುಭ ಮುಹೂರ್ತಕ್ಕೆ ಸರಿಯಾಗಿ ಶ್ರೀರಾಮ ಅರಣ್ಯವಾಸಕ್ಕಾಗಿ ಅಯೋಧ್ಯೆಯಿಂದ ಹೊರ ಹೊರಟ, ಸೀತಾ ಲಕ್ಷ್ಮಣ ಸಮೇತನಾಗಿ. 
  • ಇಬ್ಬರು ಮಹಾನುಭಾವರ ಮಿಳನ ಎಂದೂ ವ್ಯರ್ಥವಾದುದಿಲ್ಲ ಮಾನವ ಚರಿತ್ರೆಯಲ್ಲಿ. 
  • ಮಕ್ಕಳಾಗಲಿಲ್ಲ ಎಂದಾವ ಹೆಂಣೂ ಬಾವಿಯಲ್ಲಿ ಹಾರಿಕೊಳ್ಳುವುದಿಲ್ಲ. ಇಂದಲ್ಲ, ಇನ್ನು ಮುಂದಾದರೂ ಆದಾವು ಎಂದು  ಮೊದಲ ಕೆಲವು ವರ್ಷಗಳನ್ನು ಆಶೆಯಲ್ಲಿ ಕಳೆಯುತ್ತದೆ. ಆಮೇಲೆ ಇದ್ದೇ ಇವೆ ನೂರೆಂಟು ದೇವರುಗಳು. ಕಲ್ಲು, ಗುಂಡುಗಳ ಪೂಜೆ, ಜೋಡಿ ಮರಗಳನ್ನು ಸುತ್ತುವುದು, ದಾನ ಧರ್ಮವೆಂದು ಮನೆಯಲ್ಲಿದ್ದುದನ್ನಿಷ್ಟು ಅವರಿವರಿಗೆ ಕೊಟ್ಟು ಹಾಳು ಮಾಡುವುದು. ಸೋತೆ ಎಂದು ದೇವನೂ ಕೈ ಎತ್ತಿದ ಮೇಲೆ ಮನುಷ್ಯ ಪ್ರಯತ್ನ-ಲೇಡಿ ಡಾಕ್ಟರ ಬಳಿ ಲೇವಡಿ!
  • ನಾಟಕ ಕಂಪನಿಯ ಸರ್ವೀಸು, ಕಾಫಿ ಹೋಟೆಲ್ ಸರ್ವೀಸು, ಕಾಮಿನಿಯರ ಸರ್ವೀಸು, ಇವೆಲ್ಲವೂ ಹೋಲ್ ಇಂಡಿಯಾ ಸರ್ವೀಸ್ ಗಳು.                                                                                                                           ಒಂದೇ ಊರು, ಒಂದೇ ಸ್ಥಾನ ಎಂಬ ಹುಚ್ಚು ಇಲ್ಲ ಇವರಿಗೆ. ಇಂದು ಇಲ್ಲಿ, ನಾಳೆ ಇನ್ನೆಲ್ಲಿಯೋ! ಬಂಗಾರುಪೇಟೆ ರೈಲ್ವೇ ಸ್ಟೇಷನ್ ಹೋಟೆಲಲ್ಲಿ ಕಪ್ಪು ತೊಳೆಯುವ ಹುಡುಗ ನಾಲ್ಕೇ ದಿನಗಳಲ್ಲಿ ಬೊಂಬಾಯಿಯಲ್ಲಿ ಗಲ್ಲಿಯ ಪೂರಿ, ಭಾಜಿ ದುಕಾಣ್ ಒಂದರಲ್ಲಿ ಎಂಜಲ ಎಲೆ ತೆಗೆಯುತ್ತಿರುತ್ತಾನೆ. ಬೆಂಗಳೂರಿನ ಪೈಪ್ ಲೈನ್ ನಲ್ಲಿ ಸಾಧಾರಣ `ಪ್ರಾಕ್ಟೀಸ್' ಇರುವ ಬಡ ಸೌಂದರ್ಯ ಜೀವಿಯೊಬ್ಬಳು ರೇಸ್ ಸೀಜನ್ ನಲ್ಲಿ ಮದರಾಸಿನ ಹೈಕ್ಲಾಸ್ ಹೋಟೆಲಲ್ಲಿ ತೇಲಬಹುದು. ಇಂದು ಶಿವಕುಮಾರ ಸಾಮ್ರಾಜ್ಯ ಸಂಗೀತ ನಾಟಕ ಕಂಪನಿಯಲ್ಲಿ ಸೇವಕ-ನಾಳೆಯೇ ಗೋಕರ್ಣದ ಶಾಸ್ತ್ರೀ ಕಲಾಮಂಡಲಿಯಲ್ಲಿ ಅಶ್ವತ್ಥಾಮ. ಪಾಕಿಸ್ತಾನದಲ್ಲಿ ಕನ್ನಡ ಕಬೀರ್ ಹಾಕಿದರೆ ಅಲ್ಲಿಗೂ ರೆಡಿ!
  • "ನಾನಯ್ಯಾ, ನಾನು. ಈ ಕಂಪನಿಯನ್ನು ಕಟ್ಟಿ ನಿಲ್ಲಿಸಿ ಈ ಸ್ಥಿತಿಗೆ ತಂದವನು ಯಾವ ಸೂಳೇಮಗ ಗೊತ್ತೇ? ನಾನು. .."
ಈಗ ನನ್ನ ಮುಕ್ತಕ:

ಸತ್ಯವ್ರತ!
"ಸತ್ಯವೆಂಬುದು ಬಹು ಬೆಲೆಯುಳ್ಳದ್ದೆನ್ನುತ 
ತಿಳಿದಿರುವವನಯ್ಯ ನಾನು."
"ಇರಬೇಕು, ಅದಕಾಗಿ ಜತನದಿ ಬಳಸುವೆ 
ಅಪರೂಪಕೊಮ್ಮೊಮ್ಮೆ ಅದನು!"
                                                        * * * * * * * * * * * *

    ಶನಿವಾರ, ಮಾರ್ಚ್ 16, 2013


    ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
    ಫೋ: ೨೩೬೭೬೭೬         Email: sahithyaprakashana@yahoo.co.in
    ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
    • ಸೂಳೆಯ ಮನೆಗೂ ಎರಡೆರಡು ಬಾಗಿಲು ಬೇಡವೆಂದರೆ ಬಾಗಿಲು ಮಾಡುವ ಬಡಗಿ ಬದುಕುವುದಾದರೂ ಎಂತು?
    • ಅನೇಕಾನೇಕ ದೊಡ್ಡ ಮನುಷ್ಯರ ಇಲ್ಲದ ಮಾನವನ್ನು ಕಾಯ್ದಿರುವುದು, ಇಂದು ಕಾಯುತ್ತಿರುವುದು, ಮುಂದೂ ಕಾಯುವುದು ಆ ದೊಡ್ಡ ಮನುಷ್ಯರೆನಿಸಿಕೊಂಡವರ ನಡತೆಯಂತೂ ದೇವರಾಣೆಯಾಗಿಯೂ ಅಲ್ಲ. ಸೂಳೆಯ ಮನೆಯ ಹಿತ್ತಲ ಬಾಗಿಲಿಗೆ ಅವರು ಮತ್ತು ಅವರ ವಂಶಜರು ನಿತ್ಯವೂ ಕೈ ಮುಗಿಯಬೇಕು, ಕುಂಕುಮವಿಟ್ಟು ಪೂಜಿಸಬೇಕು ಅದನ್ನು. ಸಮಯೋಚಿತವಾಗಿ ಪಾರಾಗಲು ಅದು ಇದ್ದಿತೆಂದು ಅಲ್ಲವೇ ಇವರೆಲ್ಲರೂ ಇಂದು ತಲೆಯೆತ್ತಿ ಓಡಾಡುತ್ತಿದ್ದಾರೆ? ಇಲ್ಲದಿದ್ದರೇನಿತ್ತು? 
    • ಬೆನ್ನ ಮೇಲೆ ಕೈಯಿಟ್ಟು ಸಲುಗೆಯಿಂದ ನುಡಿದರು ಮೇನೇಜರು. ನೂರು ವರ್ಷಗಳ ಗೆಳೆಯರಾಗಬಲ್ಲರು ಸೆರೆ ಕುಡುಕರು, ಮೂರೇ ನಿಮಿಷಗಳಲ್ಲಿ.          
            ಆದರೆ ಒಂದು. ಆಗ ಹೆಚ್ಚು ಕುಡಿದಿರಬೇಕು, ಇಲ್ಲವೆ ಅದರ ದಾಹದಿಂದ ತತ್ತರಪಡುತ್ತಿರಬೇಕು. 
    • "ಸೋಡಾ ಮುಗಿದಂತಿದೆ. ನೀರಾದರೆ ನಡೆಯುತ್ತೆ ತಾನೇ?" ಗ್ಲಾಸುಗಳಿಗೆ ಸಮನಾಗಿ ಸುರುವಿ ಕೇಳಿದರು ಮೇನೇಜರು ವಿಷಕಂಠರಾಯರು.  "ಅದೂ ಇಲ್ಲದೆಯೂ ನಡೆಯುತ್ತದೆ ಸ್ವಾಮೀ, ನನಗೆ. ನೀರಿಗೂ ನನಗೂ ಕೊಂಚ ಅಷ್ಟಕ್ಕಷ್ಟೆ. ಸ್ನಾನ ಗೀನ ಮುಂತಾದ ಕೇವಲ ಬಹಿರಂಗ ಶುದ್ಧಿಗೆ ಮಾತ್ರವೆ ನಾನು ನೀರನ್ನು ಉಪಯೋಗಿಸುತ್ತೇನೆ."       
    • ಸಾವಕಾಶವಾಗಿ ಕೊಂಚ ಕೊಂಚವನ್ನೇ ಸ್ವೀಕರಿಸುತ್ತಿದ್ದ ವಿಷಕಂಠರಾಯ ಕೇಳಿದ, ಮುಸಿಮುಸಿ ನಕ್ಕು. "ಅದೇನು ವಾಸುದೇವರಾಯರೆ! ನೀವು ಕುಡಿಯುವಾಗ ಕಂಣೇಕೆ ಮುಚ್ಚುತ್ತೀರಿ?"        
              "ಇದು `ಬ್ರಾಹಿಬಿಷನ್ ಏರಿಯಾ ಅಲ್ಲವೇನು ಸ್ವಾಮಿ? ಕುಡಿಯುವಾಗ ಯಾರೂ ನೋಡಕೂಡದು ನೋಡಿ.  ಮೊಟ್ಟಮೊದಲು ನಾನೇ ನೋಡಕೂಡದೆಂದು ಕಂಣು ಮುಚ್ಚಿಬಿಡುತ್ತೇನೆ. ತಾವೂ ಮುಗಿಸಿಬಿಡಿ, ಅದನ್ನೆಷ್ಟು ಹೊತ್ತು ಗುಟುಕರಿಸುತ್ತ ಕೂಡುತ್ತೀರಿ? ಪಾನಪ್ರತಿಬಂಧ ನಿರೋಧವಿರುವಲ್ಲಿ..." 
    "ಏನಂದಿರಿ? ಪಾನಪ್ರತಿಬಂಧ ನಿರೋಧವೆ?" ನಕ್ಕರು ಇಬ್ಬರೂ. 

    ಇನ್ನು ನನ್ನ ಮುಕ್ತಕ, ಇದೋ:

    ದುರದೃಷ್ಟ 
    ಅನುಕೂಲದೊಳಗೆಯೆ ಆಪತ್ತು ಬರುವುದು 
    ಅದೃಷ್ಟ ಸರಿಯಿಲ್ಲದರಿಗೆ. 
    ಬೀಸಿದ ಗಾಳಿಗೆ ಮಳೆಯಲಿ ಹಿಡಿದಿದ್ದ 
    ಕೊಡೆಯೆ ಮಗುಚಿಕೊಂಡ ಹಾಗೆ!
                                                                       * * * * * * * * * *



      ಶುಕ್ರವಾರ, ಮಾರ್ಚ್ 1, 2013


      ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
      ಫೋ: ೨೩೬೭೬೭೬         Email: sahithyaprakashana@yahoo.co.in
      ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
      ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
      • `ಹಾ, ತಿಳಿಯಿತು ಈಗ. ನಿದ್ರೆಗೆ ಮುಖ್ಯವಾಗಿ ಬೇಕಾದುದು ಹಾಸಿಗೆ, ಮಂಚವಲ್ಲ. ನಿದ್ರಾಭಂಗಕ್ಕೆ ಕಾರಣ ಒಂದೇ, ಅದು ಯೋಚನೆ. ಯಾವ ಚಿಂತೆಯೂ ಇಲ್ಲ ಈ ಗಮಾರನಿಗೆ. ಹಾಯಾಗಿ ಗೊರಕೆ ಕೊರೆಯುತ್ತಿದ್ದಾನೆ.'
      •  ಹಾಳು ಬಾಳಿನ ಲೆಕ್ಕಾಚಾರವೇ ಹೀಗೆ. ಬದುಕುತ್ತೇನೆ ಎಂದು ಒದ್ದಾಡಿದಳು ಸುಭದ್ರ, ಸಾಯಿ ಎಂದಿತು. ಸಾಯಲು ಸನ್ನದ್ಧಳಾಗಿ  ಹೊರಬಂದಳು. ಬದುಕು ನಡೆ ಎಂದಿತು. ಇರುತ್ತೇನೆ ಎನ್ನುವಾಗ ಇರುವುದೆಷ್ಟು ಕಷ್ಟವೋ, ಹೋಗುತ್ತೇನೆ  ಎನ್ನುವಾಗ ಹೋಗುವುದೂ ಅಷ್ಟೇ ಕಷ್ಟ, ಪಾಪ!
      • "ನನಗೂ ನಿಮ್ಮ ಹೆಂಡತಿಗೂ ಒಂದೇ ಭೇದ. ಮೊದಲು ಮದುವೆ, ಆಮೇಲೆ ಇನ್ನೊಂದು ಆಕೆಯೊಟ್ಟಿಗೆ. ಅದು ಇನ್ನೂ ಆಗಲಿಲ್ಲ. ನನ್ನ ಸಮಾಚಾರ ಹಾಗಲ್ಲ. ಆಮೇಲೆ ಮದುವೆಯಾಗೋಣ. ಮೊದಲು ಇನ್ನೊಂದು ಆಗಲಿ ಬನ್ನಿ."
      • ಊರೆಲ್ಲವೋ ನಕ್ಕ ಮೇಲೆ ಕಿವುಡ ನಕ್ಕ ಎಂಬಂತೆ, ಲೋಕಕ್ಕೆಲ್ಲವೂ ತಿಳಿದ ಮೇಲೆ ಶ್ರೀನಿವಾಸಶೆಟ್ಟರಿಗೆ ತಿಳಿಯಿತು. 
      ಇಗೋ ನನ್ನ ಮುಕ್ತಕ:
      ಅದೃಷ್ಟ 
      ಆಪತ್ತಿನೊಳಗೆಯೆ ಅನುಕೂಲವಿರುವುದು 
      ಅದೃಷ್ಟ ಸರಿಯಿದ್ದವರಿಗೆ. 
      ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಬಾಯ್ದೆರೆದು 
      ತಲೆಯ ಮೇಲಕೆ ಬಿದ್ದ ಹಾಗೆ!