ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬ Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
ಫೋ: ೨೩೬೭೬೭೬ Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
- ಸೂಳೆಯ ಮನೆಗೂ ಎರಡೆರಡು ಬಾಗಿಲು ಬೇಡವೆಂದರೆ ಬಾಗಿಲು ಮಾಡುವ ಬಡಗಿ ಬದುಕುವುದಾದರೂ ಎಂತು?
- ಅನೇಕಾನೇಕ ದೊಡ್ಡ ಮನುಷ್ಯರ ಇಲ್ಲದ ಮಾನವನ್ನು ಕಾಯ್ದಿರುವುದು, ಇಂದು ಕಾಯುತ್ತಿರುವುದು, ಮುಂದೂ ಕಾಯುವುದು ಆ ದೊಡ್ಡ ಮನುಷ್ಯರೆನಿಸಿಕೊಂಡವರ ನಡತೆಯಂತೂ ದೇವರಾಣೆಯಾಗಿಯೂ ಅಲ್ಲ. ಸೂಳೆಯ ಮನೆಯ ಹಿತ್ತಲ ಬಾಗಿಲಿಗೆ ಅವರು ಮತ್ತು ಅವರ ವಂಶಜರು ನಿತ್ಯವೂ ಕೈ ಮುಗಿಯಬೇಕು, ಕುಂಕುಮವಿಟ್ಟು ಪೂಜಿಸಬೇಕು ಅದನ್ನು. ಸಮಯೋಚಿತವಾಗಿ ಪಾರಾಗಲು ಅದು ಇದ್ದಿತೆಂದು ಅಲ್ಲವೇ ಇವರೆಲ್ಲರೂ ಇಂದು ತಲೆಯೆತ್ತಿ ಓಡಾಡುತ್ತಿದ್ದಾರೆ? ಇಲ್ಲದಿದ್ದರೇನಿತ್ತು?
- ಬೆನ್ನ ಮೇಲೆ ಕೈಯಿಟ್ಟು ಸಲುಗೆಯಿಂದ ನುಡಿದರು ಮೇನೇಜರು. ನೂರು ವರ್ಷಗಳ ಗೆಳೆಯರಾಗಬಲ್ಲರು ಸೆರೆ ಕುಡುಕರು, ಮೂರೇ ನಿಮಿಷಗಳಲ್ಲಿ.
- "ಸೋಡಾ ಮುಗಿದಂತಿದೆ. ನೀರಾದರೆ ನಡೆಯುತ್ತೆ ತಾನೇ?" ಗ್ಲಾಸುಗಳಿಗೆ ಸಮನಾಗಿ ಸುರುವಿ ಕೇಳಿದರು ಮೇನೇಜರು ವಿಷಕಂಠರಾಯರು. "ಅದೂ ಇಲ್ಲದೆಯೂ ನಡೆಯುತ್ತದೆ ಸ್ವಾಮೀ, ನನಗೆ. ನೀರಿಗೂ ನನಗೂ ಕೊಂಚ ಅಷ್ಟಕ್ಕಷ್ಟೆ. ಸ್ನಾನ ಗೀನ ಮುಂತಾದ ಕೇವಲ ಬಹಿರಂಗ ಶುದ್ಧಿಗೆ ಮಾತ್ರವೆ ನಾನು ನೀರನ್ನು ಉಪಯೋಗಿಸುತ್ತೇನೆ."
- ಸಾವಕಾಶವಾಗಿ ಕೊಂಚ ಕೊಂಚವನ್ನೇ ಸ್ವೀಕರಿಸುತ್ತಿದ್ದ ವಿಷಕಂಠರಾಯ ಕೇಳಿದ, ಮುಸಿಮುಸಿ ನಕ್ಕು. "ಅದೇನು ವಾಸುದೇವರಾಯರೆ! ನೀವು ಕುಡಿಯುವಾಗ ಕಂಣೇಕೆ ಮುಚ್ಚುತ್ತೀರಿ?"
"ಇದು `ಬ್ರಾಹಿಬಿಷನ್ ಏರಿಯಾ ಅಲ್ಲವೇನು ಸ್ವಾಮಿ? ಕುಡಿಯುವಾಗ ಯಾರೂ ನೋಡಕೂಡದು ನೋಡಿ. ಮೊಟ್ಟಮೊದಲು ನಾನೇ ನೋಡಕೂಡದೆಂದು ಕಂಣು ಮುಚ್ಚಿಬಿಡುತ್ತೇನೆ. ತಾವೂ ಮುಗಿಸಿಬಿಡಿ, ಅದನ್ನೆಷ್ಟು ಹೊತ್ತು ಗುಟುಕರಿಸುತ್ತ ಕೂಡುತ್ತೀರಿ? ಪಾನಪ್ರತಿಬಂಧ ನಿರೋಧವಿರುವಲ್ಲಿ..."
"ಏನಂದಿರಿ? ಪಾನಪ್ರತಿಬಂಧ ನಿರೋಧವೆ?" ನಕ್ಕರು ಇಬ್ಬರೂ.
ಇನ್ನು ನನ್ನ ಮುಕ್ತಕ, ಇದೋ:
ದುರದೃಷ್ಟ
ಅನುಕೂಲದೊಳಗೆಯೆ ಆಪತ್ತು ಬರುವುದು
ಅದೃಷ್ಟ ಸರಿಯಿಲ್ಲದರಿಗೆ.
ಬೀಸಿದ ಗಾಳಿಗೆ ಮಳೆಯಲಿ ಹಿಡಿದಿದ್ದ
ಕೊಡೆಯೆ ಮಗುಚಿಕೊಂಡ ಹಾಗೆ!
* * * * * * * * * *
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ