ಇನ್ನು ಬೀchi ಯವರ `ಆಟೋ' ಕಾದಂಬರಿಯಿಂದ ( ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020. ಫೋ-2367676. Email:sahithyaprakashana@yahoo.co.in) ಆಯ್ದ ವಿಚಾರಗಳು.
- "ಬಾಯಿ ಮುಚ್ಚೋ ಬದ್ಮಾಷ್! ಗಂಡು ಖರಾಬ್ ಆದ್ರೆ ದಿಲ್ದಾರ್ ಆದ್ಮಿ ಹೆಣ್ಣು ದಿಲ್ದಾರ್ ಆದ್ರೆ ಖರಾಬ್ ಅಮ್ತೀಯಾ? ಸೈತಾನ್"
- ಮಲೇರಿಯಾ ರೋಗವೆಂದು ತಿಳಿದು ಔಷಧ ಕೊಟ್ಟು ಅವನನ್ನು ಕೊಂದ ಡಾಕ್ಟರು, ಅವನು ಸತ್ತ ತಕ್ಷಣವೇ ಅದು `ಟೈಫಾಡ್ ' ಎಂದು ಕರೆಕ್ಟ್ ಆಗಿ `ಡಯಾಗ್ನೈಜ್' ಮಾಡಿದ್ದರು.
- ಅಳವಂಡಿ ಸಿಲ್ಕು ಫಾರ್ಮಿಗೆ ಗಾಡಿ ಹೊಡೆದು, ತನ್ನೆತ್ತಿನೊಡನೆ ಮಳೆ ಬಿಸಿಲಿನಲ್ಲಿ ಮೈಮುರಿದು ದುಡಿಯುವವನಿಗೆ ಜಾತಿ ಗೀತಿಗಳಿಂದ ಆಗಬೇಕಾದುದೇನಿದೆ? ಅವನೇನು ಕಾರ್ಪೋರೇಶನ್ ಕೌನ್ಸಿಲರ್ ಆಗಬೇಕೆ?
- ಜಾತಿ ಜಗಳಗಳೆಲ್ಲವೂ ಬಹು ಬುದ್ಧಿಯುಳ್ಳವನಿಗೆ.
- ಮಕ್ಕಳಾಗಲಿಲ್ಲ ಎಂಬುದಕ್ಕೆ ಯಾವಾಗಲೂ ಒಂದೇ ಅರ್ಥ ಹೆಂಣು ಬಂಜೆ, ಇದಕ್ಕೆ ಪರಿಹಾರ? ಗಂಡಿಗೆ ಇನ್ನೊಂದು ಹೆಂಣು ತರತಕ್ಕದ್ದು. ಆ ಹೆಂಣಿಗೇ ಇನ್ನೊಂದು ಗಂಡನ್ನು.....ಛೆ! ಉಂಟೆ?
- ಪೈಸಾ ಇಲ್ಲದಿದ್ರೆ ಯಾರು ಕೇಳ್ತವ್ರೆ ? ಈ ಹರಾಮ್ ಧುನಿಯಾದಲ್ಲಿ ಪೈಸಾನೆ ಎಲ್ಲಾ, ಪೈಸಾನೆ ಅಲ್ಲಾ!
- ಸಾಕಷ್ಟು ದಡ್ಡತನವು ಜನತೆಗೆ ಸಹಜವಾಗಿಯೆ ಇರುತ್ತದೆ. ವಂಚಕರಿಗೆ ಸ್ವಲ್ಪ ಬುದ್ಧಿ ಇದ್ದರೇ ಸಾಕೇ ಸಾಕು, ಇವನ ಕೆಲಸವೂ ಸುಲಲಿತವಾಗಿ ಆಗಿಹೋಗುತ್ತದೆ.
- ಒಂದು ಬಾರಿ ಮೋಸ ಮಾಡಿದ ಮೇಲೆ ಎರಡನೆಯ ಸಲ ಸುಲಭ. ಅನುಭವವು ಎಲ್ಲಿಯಾದರೂ, ಎಂದಾದರೂ ವ್ಯರ್ಥವಾದುದುಂಟೆ?
ರಜೆಯಲ್ಲಿ ಕನ್ನಡದ ಪುಸ್ತಕ, ಪತ್ರಿಕೆ, ಮ್ಯಾಗಜೀನ್, ಬ್ಲಾಗ್ ಏನಾದರೂ ಓದಿ.
Enjoy week end. Enjoy life!
ಈಗ ನನ್ನದೊಂದು ಮುಕ್ತಕ.
ಮಗಳು
`ಸಿನೆಮಾಕ್ಕೆ ಬಾರೆಂದು ನಾಲ್ಕಾರು ಹುಡುಗರು
ಕರೆಯುತಿದ್ದರು ನಿಮ್ಮ ಮಗಳ.'
`ಹೋದಳೇನಾಕೆಯು?' `ಇಲ್ಲ' `ಆ ಹುಡುಗಿಯು
ಖಂಡಿತ ನನ್ನ ಮಗಳಲ್ಲ!'
*****