ಗುರುವಾರ, ಸೆಪ್ಟೆಂಬರ್ 13, 2012

  • ನೀನೀಗ ಡಾಕ್ಟರು! ನೀನು ಡಾಕ್ಟರೇ ?ನಿನ್ನ ಬಳಿ ಔಷಧಿ ತೆಗೆದುಕೊಂಡವರಲ್ಲಿ ಯಾರಾದರೂ ಅಕಸ್ಮಾತ್ತಾಗಿ ಬದುಕಿದ್ದಾರೇನಯ್ಯಾ. 
  • ನೀನಿರುವ   ಆಸ್ಪತ್ರೆಯಲ್ಲಿ  ಔಷಧಿಗಳಿಲ್ಲ ಎಂಬುದೊಂದೇ ನನಗೆ ದೊಡ್ಡ ಸಮಾಧಾನ. ದೇವನು ದಯಾಮಯ-ಇದರಲ್ಲಿ ಮಾತ್ರ.
  • ನನ್ನ ಗೆಳೆಯ ಮೋಹನನ ಗತಿ ಏನಯ್ಯಾ? ಇವನು ಬಹಳ ಬಡವ-ಬರೀ ಬಡವ ಅಂದರೆ ಸಾಲದು, ಕೇವಲ ನಿರ್ಗತಿಕ. ನಿರ್ಗತಿಕ ಅಂದರೂ ಸಾಲದು, ಅವನು ಕವಿ. ಮಾಮೂಲಿ ಕವಿಯಾದರೂ ಅಲ್ಲ. ಪಾಪ! ನವ್ಯ ಕವಿತೆ ಬರೆಯುವ ಕವಿಯಯ್ಯಾ ಅವನು. ಅವನ ಪರಿಸ್ಥಿತಿ ಏನೆಂಬುದು ಅರ್ಥವಾಯಿತೆ ಈಗಲಾದರೂ?
  • ಅವನನ್ನು ಪ್ರೀತಿಸಿದಷ್ಟು ನಾನೀ ಜಗತ್ತಿನಲ್ಲಿ ಮತ್ತಾರನ್ನೂ ಪ್ರೀತಿಸಿಲ್ಲ. ಏಕೆ ಎಂದು ಕೇಳಬೇಡ-ದ್ವೇಷಕ್ಕೆ ಕಾರಣ ಬೇಕು, ಪ್ರೀತಿಗೆ ಬೇಕಿಲ್ಲ.
  • ನಮ್ಮ ಜನಕ್ಕೆ ಇರುವವು ಎರಡೇ ದೇವರುಗಳು-ಶಕ್ತಿ ದೇವರುಗಳು-ಶಕ್ತಿ ಮತ್ತು ಲಕ್ಷ್ಮಿ. ಒಂದು ಅಧಿಕಾರ, ಇನ್ನೊಂದು ಹಣ. ಅಧಿಕಾರ ಹಣವನ್ನು ಗಳಿಸುತ್ತದೆ. ಹಣ ಅಧಿಕಾರವನ್ನು ಗಳಿಸುತ್ತದೆ.
  • ಬಾಪೂಜಿ ಹೇಳಿದ್ದ ಒಂದು ಮಾತನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು-ಕಮ್ಯುನಿಜಂ ಒಳ್ಳೆಯದೇ, ಸೋಷಿಯಲಿಜಂ ಒಳ್ಳೆಯದೇ,   ಡಿಕ್ಟೇಟರ್ ಷಿಪ್ ಒಳ್ಳೆಯದೇ? ಎಂದದಾರೋ ಕೇಳಿದಾಗ ಆ ತಾತ ಹೇಳಿದ್ದರಂತೆ-ಮನುಷ್ಯ ಒಳ್ಳೆಯವನಾಗದಿದ್ದರೆ ಯಾವದೂ ಒಳ್ಳೆಯದಾಗದು ಎಂದು.
ಇವತ್ತಿಗೆ ಇಷ್ಟು.  ಇನ್ನು ಒಂದು ಮುಕ್ತಕ, ನನ್ನಿಂದ.( ಕೈಹಿಡಿ, ದದ್ದೆಲ್ಲ,ನಷ್ಟವಾ, ಗುವುದೆಂದು, ಹೋಗಿದ್ದೆ, ಜೋಯಿಸ, ರಲ್ಲಿ ಹೀಗೆ  ಓದಿಕೊಳ್ಳಿ.)
ಶಾಂತಿ 
ಕೈಹಿಡಿದದ್ದೆಲ್ಲ ನಷ್ಟವಾಗುವುದೆಂದು 
ಹೋಗಿದ್ದೆ ಜೋಯಿಸರಲ್ಲಿ.
ಶಾಂತಿ ಮಾಡಿಸಿಕೊಂಡು ಹಿಂದಕೆ ಬರುವಾಗ 
ಕೊಡೆಯ ಬಿಟ್ಟೆನು ಬಸ್ಸಿನಲ್ಲಿ!
                                                                       ----- 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ