ಶುಕ್ರವಾರ, ಸೆಪ್ಟೆಂಬರ್ 21, 2012

ಬೀchiಯವರ `ಕಮಲೆಯ ಓಲೆಗಳು'(ಪ್ರ: ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ-580001) ಪುಸ್ತಕದಿಂದ -
  • ಮೋಹನ್! ಅವಕಾಶ ಇಲ್ಲದುದಕ್ಕಾಗಿ ಕೆಲವರು ಶ್ರೀರಾಮರು. ಇನ್ನು ಕೆಲವರು ಅವಕಾಶವಿದ್ದರೂ ಧೈರ್ಯವಿಲ್ಲದುದಕ್ಕಾಗಿ ಶ್ರೀರಾಮರು. ಇಂಥವರೆಲ್ಲ ಕೇವಲ ಕಾಯೇನ ಮತ್ತು ವಾಚಾ ಮಾತ್ರ  ಶ್ರೀರಾಮರು. ಅಂದರೆ ಮನಸಾ? 
  • ವಚನದೊಳಗೆಲ್ಲವರು ಶುಚಿ ವೀರ  ಸಾಧುಗಳು
          ಕುಚ, ಶಸ್ತ್ರ, ಹೇಮ ಸೋಂಕಿದರೆ ಲೋಕದೊಳ-
          ಗಚಲದವರಾರು? ಸರ್ವಜ್ಞ
          ಈ ಸತ್ಯೋಕ್ತಿಗೆ ನಾನೂ ನಿಜಕ್ಕೂ ಅಪವಾದವಲ್ಲ ಎಂಬುದನ್ನೊಪ್ಪಿಕೊಂಡೆ.
  • ಬೆಳಿಗ್ಗೆ ರೇಡಿಯೋದಲ್ಲಿ ಇಂದಿನ ಹವಾಮಾನ ಕೇಳಿದ್ದೆ. ಸಂಜೆಗೆ ಮೋಡ ಕವಿದ ವಾತಾವರಣ ಇರಬಹುದು,  ಇಲ್ಲವೆಂದೂ ಇರಬಹುದು. ತುಂತುರು ಮಳೆ ಆಗುವ ಸಂಭವ ಉಂಟು. ಆದರೆ ಮಳೆಯೇ ಆಗದಿರುವ ಸಂಭವವೇ ಹೆಚ್ಚು ಎಂದು ಹೇಳಿದಳು ಆ ರೇಡಿಯೋ ಮಾತೆ.
  • ಆಗಲೆ ಚಿಕ್ಕದಾಗಿ ಸುರುವಾಗಿತ್ತು-ಅತ್ತೆ-ಸೊಸೆಯರ ಜಗಳ. ಜಗಳಕ್ಕೆ ಕಾರಣ ಗೊತ್ತೆ? ಒಂದೇ ಒಂದು ಕಾರಣ-ಅವರಿಬ್ಬರೂ ಅತ್ತೆ ಸೊಸೆಯರು! ಸಾಲದೇ? ಇದೇನು ಸಾಮಾನ್ಯ ಕಾರಣವೇ?
  • ಹೊರಬಂದು ನೋಡಿದೆ, ನನ್ನ ತಾಯಿಯವರು ಗೋಡೆಗೆ ತಲೆ ಹೊಡದುಕೊಳ್ಳುತ್ತಿದ್ದರು. ಏನಾಯಿತೆಂದು ವಿಚಾರಿಸಿದೆ. ಏನೂ ಇಲ್ಲ. ಆದುದು ಇಷ್ಟೆ,
         "ನನ್ನ ದೇವರು ಇಡಬಾರದು ಇನ್ನು." ಎಂದು ನಮ್ಮ ತಾಯಿ ಅಂದರಂತೆ.
        "ನಾನೂ ಅದನ್ನೇ ಅಂಬೋದು" ಎಂದು ನನ್ನ ಹೆಂಡತಿ ಅಂದಳಂತೆ. 'ನನ್ನನ್ನು ಸಾಯಿ ಎಂದಂದಳು  ನಿನ್ನ ಹೆಂಡತಿ'                ಎಂದು ತಾಯಿಯವರ ದೂರು. ಇದಕ್ಕೆ ನನ್ನ ಹೆಂಡತಿಯ ಸಮ್ಜಾಯಿಷಿ ಏನು ಗೊತ್ತೆ?  "ನಾನೂ ಅದನ್ನೇ ಅಂಬೋದು ಅಂದರೆ, ನನ್ನನ್ನೂ ದೇವರು ಇಡಬಾರದು ಇನ್ನು-ಅಂಬೋ ಅರ್ಥದಾಗೆ ನಾನು ಅಂದೆ" ಎಂದವಳ ವಾದ, ಇದನ್ನು ಹೇಗಯ್ಯಾ ಪರಿಹರಿಸುವುದು?
ಇವತ್ತಿಗಿಷ್ಟು. ಇನ್ನು ಸೋಮವಾರ. ರಜಾದಲ್ಲಿ ಕನ್ನಡ ಪುಸ್ತಕ, ಪತ್ರಿಕೆ, ಮ್ಯಾಗಜೀನ್, ಬ್ಲಾಗ್ ಏನಾದರೂ ಓದಿ. Enjoy week end. Enjoy life:)
ಈಗ ನನ್ನ ಒಂದು ಮುಕ್ತಕ:
ಸಾಮರ್ಥ್ಯ 
ತಾನಿಲ್ಲಿದ್ದೇನೆಂದು ತಿಳಿಸಲು ಜನರನು 
ಕಸ್ತೂರಿ ಕರೆಯುವುದಿಲ್ಲ.
ಪರಿಮಳದಿಂದಲೆ ಅವರನು ಸೆಳೆಯುವ 
ಸಾಮರ್ಥ್ಯ ಅದಕಿಹುದಲ್ಲ!
                                                                 -----


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ