ಶುಕ್ರವಾರ, ಸೆಪ್ಟೆಂಬರ್ 28, 2012

ಇನ್ನು ಬೀchi ಯವರ `ಆಟೋ' ಕಾದಂಬರಿಯಿಂದ ( ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020. ಫೋ-2367676. Email:sahithyaprakashana@yahoo.co.in)  ಆಯ್ದ ವಿಚಾರಗಳು.
  • "ಬಾಯಿ ಮುಚ್ಚೋ ಬದ್ಮಾಷ್! ಗಂಡು ಖರಾಬ್ ಆದ್ರೆ ದಿಲ್ದಾರ್ ಆದ್ಮಿ ಹೆಣ್ಣು ದಿಲ್ದಾರ್ ಆದ್ರೆ ಖರಾಬ್ ಅಮ್ತೀಯಾ? ಸೈತಾನ್"
  • ಮಲೇರಿಯಾ ರೋಗವೆಂದು ತಿಳಿದು ಔಷಧ ಕೊಟ್ಟು ಅವನನ್ನು ಕೊಂದ ಡಾಕ್ಟರು, ಅವನು ಸತ್ತ ತಕ್ಷಣವೇ ಅದು `ಟೈಫಾಡ್ ' ಎಂದು ಕರೆಕ್ಟ್ ಆಗಿ `ಡಯಾಗ್ನೈಜ್' ಮಾಡಿದ್ದರು.
  • ಅಳವಂಡಿ ಸಿಲ್ಕು ಫಾರ್ಮಿಗೆ ಗಾಡಿ ಹೊಡೆದು, ತನ್ನೆತ್ತಿನೊಡನೆ ಮಳೆ ಬಿಸಿಲಿನಲ್ಲಿ ಮೈಮುರಿದು ದುಡಿಯುವವನಿಗೆ ಜಾತಿ ಗೀತಿಗಳಿಂದ ಆಗಬೇಕಾದುದೇನಿದೆ? ಅವನೇನು ಕಾರ್ಪೋರೇಶನ್ ಕೌನ್ಸಿಲರ್ ಆಗಬೇಕೆ?
  • ಜಾತಿ ಜಗಳಗಳೆಲ್ಲವೂ ಬಹು ಬುದ್ಧಿಯುಳ್ಳವನಿಗೆ. 
  • ಮಕ್ಕಳಾಗಲಿಲ್ಲ ಎಂಬುದಕ್ಕೆ ಯಾವಾಗಲೂ ಒಂದೇ ಅರ್ಥ ಹೆಂಣು  ಬಂಜೆ, ಇದಕ್ಕೆ ಪರಿಹಾರ? ಗಂಡಿಗೆ ಇನ್ನೊಂದು ಹೆಂಣು  ತರತಕ್ಕದ್ದು. ಆ ಹೆಂಣಿಗೇ ಇನ್ನೊಂದು ಗಂಡನ್ನು.....ಛೆ! ಉಂಟೆ?
  • ಪೈಸಾ ಇಲ್ಲದಿದ್ರೆ ಯಾರು ಕೇಳ್ತವ್ರೆ ? ಈ ಹರಾಮ್ ಧುನಿಯಾದಲ್ಲಿ ಪೈಸಾನೆ ಎಲ್ಲಾ, ಪೈಸಾನೆ ಅಲ್ಲಾ!
  • ಸಾಕಷ್ಟು ದಡ್ಡತನವು ಜನತೆಗೆ ಸಹಜವಾಗಿಯೆ ಇರುತ್ತದೆ. ವಂಚಕರಿಗೆ ಸ್ವಲ್ಪ ಬುದ್ಧಿ ಇದ್ದರೇ ಸಾಕೇ ಸಾಕು, ಇವನ ಕೆಲಸವೂ ಸುಲಲಿತವಾಗಿ ಆಗಿಹೋಗುತ್ತದೆ.
  • ಒಂದು ಬಾರಿ ಮೋಸ ಮಾಡಿದ ಮೇಲೆ ಎರಡನೆಯ ಸಲ ಸುಲಭ. ಅನುಭವವು ಎಲ್ಲಿಯಾದರೂ, ಎಂದಾದರೂ ವ್ಯರ್ಥವಾದುದುಂಟೆ?
ಇಂದಿಗಿಷ್ಟು. ಇನ್ನು ಸೋಮವಾರ.
ರಜೆಯಲ್ಲಿ ಕನ್ನಡದ ಪುಸ್ತಕ, ಪತ್ರಿಕೆ, ಮ್ಯಾಗಜೀನ್, ಬ್ಲಾಗ್ ಏನಾದರೂ ಓದಿ. 
Enjoy week end. Enjoy life!
ಈಗ ನನ್ನದೊಂದು ಮುಕ್ತಕ.
ಮಗಳು 
`ಸಿನೆಮಾಕ್ಕೆ ಬಾರೆಂದು ನಾಲ್ಕಾರು ಹುಡುಗರು 
ಕರೆಯುತಿದ್ದರು ನಿಮ್ಮ ಮಗಳ.'
`ಹೋದಳೇನಾಕೆಯು?' `ಇಲ್ಲ'  `ಆ ಹುಡುಗಿಯು 
ಖಂಡಿತ ನನ್ನ ಮಗಳಲ್ಲ!'
                                                     *****


  


2 ಕಾಮೆಂಟ್‌ಗಳು: