ಶುಕ್ರವಾರ, ಮೇ 10, 2013


ಬೀchi ಯವರ ಕನ್ನಡ ಎಮ್ಮೆ  ಶುಂಟಿ ಚೂರುಗಳು. ಪ್ರ: ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ -೧
ಫೋ: ೨೭೯೧೬೧೬        
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಕನ್ನಡ ಎಮ್ಮೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • ಈಗ ಸ್ಥೂಲ ಅಧ್ಯಕ್ಷರ ಪರಿಚಯ ಅಲ್ಲಲ್ಲ, ಅಧ್ಯಕ್ಷರ ಸ್ಥೂಲ ಪರಿಚಯ ಮಾಡಿಕೊಡುವ ಹೊಣೆ, ಅಥವಾ ಹೊರೆ ಅನ್ನಿ, ಅಥವಾ ಕೆಲಸ, ಕಾರ್ಯ ಏನಾದರೂ ಅನ್ನಿ, ಈ ಸುಡುಗಾಡು ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ. 
  • ಪೊಲೀಸರು ನಮ್ಮಿಬ್ಬರ ಮೇಲೆ ಕೇಸು ಮಾಡಿದರು; ಆಗ ನಾವಿಬ್ಬರೂ ತಲೆ ಮರೆಸಿ, ವೇಷ ಬದಲಾಯಿಸಿಕೊಂಡು ಹೊರಟೆವು. ಈ ಅಧ್ಯಕ್ಷರು ಹೆಣ್ಣಾದರು; ನಾನು ಇವರ ಗಂಡನಾಗಿ ಇಬ್ಬರೂ ಹತ್ತಿಯ ಹೊಲದಲ್ಲಿ ದುಡಿಯಲು ಕೂಲಿ ಹೊದೆವು. ಇಲ್ಲಿ ಒಂದು ಮಾತನ್ನು ಹೇಳದಿದ್ದರೆ ನನ್ನಿಂದ ಕರ್ತವ್ಯಲೋಪ ಅಗುತ್ತದೆ. ಅದೇನೆಂದರೆ ಇದು ಪೋಲೀಸರ ಕಣ್ಣು ತಪ್ಪಿಸಲಿಕ್ಕಾಗಿಯೇ, ಇವರು ಹೆಣ್ಣು ವೇಷ ಮಾಡಿಕೊಂಡರು. ನಿಜ, ಆದರೆ ಇವರ ದುರ್ದೈವದಿಂದ ಇವರು ಹೆಣ್ಣಾದುದಕ್ಕೇ ಪೊಲೀಸರು ಇವರಿಗೆ ಗಂಟುಬಿದ್ದರು. ಆ ಕತೆ ಎಲ್ಲ ಬೇರೆ, ಈಗದು ಬೇಡ. 
  • ನಮ್ಮ ಅಧ್ಯಕ್ಷ ಮಹಾಶಯರಿಗೆ ಮೊದಲಿನಿಂದಲೂ ಕೂಲಿಕಾರರೆಂದರೆ ಬಹಳ ಪ್ರೀತಿ. ಕೂಲಿಕಾರರನ್ನು ಬಿಟ್ಟು ಅರೆಗಳಿಗೆಯೂ ಇರಲಾರರು. ಯಾಕೆಂದರೆ ಇವರು ಕಂಟ್ರಾಕ್ಟರು.  
ಈಗ ನನ್ನ ಮುಕ್ತಕ 
ಬೊಗಳೆ 
"ನನ್ನ ತಾತನ ಶಾಲು ಇಲ್ಲಿಂದ ಡೆಲ್ಲಿಯ 
ವರೆಗೆ ಹಾಸಲು ಸಾಕಾದೀತು"
"ಅಷ್ಟೇನಾ? ಹಾಗಿದ್ದರದು ನನ್ನ ತಾತನ 
ಶಾಲಿನ ತೂತು ಮುಚ್ಚೀತು"!
                                                        * * * * * * * * * * * * 

    ಮಂಗಳವಾರ, ಏಪ್ರಿಲ್ 30, 2013


    ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
    ಫೋ: ೨೩೬೭೬೭೬         Email: sahithyaprakashana@yahoo.co.in
    ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
    • ಊರು ಚಿಕ್ಕದಿದ್ದಷ್ಟೂ ಊರಲ್ಲಿ ದೊಡ್ಡ ಮನುಷ್ಯರು ಹೆಚ್ಚು. 
              ನಾಟಕದಲ್ಲಿ ಹೆಂಣು ಚೆನ್ನಾಗಿದ್ದಷ್ಟೂ ಊರಲ್ಲಿ ಕಲಾಭಿಮಾನಿಗಳೂ ಹೆಚ್ಚು. ಕರೆಯಿಸಿಕೊಂಡು ಬಂದವರು ಕೆಲವರು, ಅವರಿವರಿಂದ ಹೇಳಿಸಿ ಕರೆಯಿಸಿಕೊಂಡು ಬಂದವರು ಹಲವರು, ತಾವೇ ಕೇಳಿಕೊಂಡು ಬಂದ ಕಂಪಲ್ಸರಿ ಕಾಂಪ್ಲಿಮೆಂಟರಿ ವಾಲಂಟರಿ ಕಲಾಭಿಮಾನಿಗಳಂತೂ ಸರೇ  ಸರೆ 
    ಇವರೆಲ್ಲರೂ ಕಲಾಭಿಮಾನಿಗಳೇ. ಬಂಗಾರಿಯ ದುಂಡು ಮುಖವೇ ಕಲೆ!

    ಮುಕ್ತಕ 

    ಸ್ವಕೀಯ-ಪರಕೀಯ 
    ನಿನ್ನವರಾದರು ಖಳರ ಸಂಗವು ಬೇಡ 
    ಸುಜನರು ಪರರಾದರೇನು?
    ನಿನ್ನೊಳೆ ಜನಿಸಿದ ರೋಗವ ಕಳೆಯದೆ 
    ಕಾಡಿನ ಮೂಲಿಕೆ ತಾನು!
                                                **********
    ಮುಂದಿನ ಪುಸ್ತಕ: ಕನ್ನಡ ಎಮ್ಮೆ. 

      ಸೋಮವಾರ, ಏಪ್ರಿಲ್ 22, 2013


      ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
      ಫೋ: ೨೩೬೭೬೭೬         Email: sahithyaprakashana@yahoo.co.in
      ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
      • "ಜಲದ ಮೇಲ್ ತೇಲುವ ನೆಲದ ಬಸಿರಿನ ನೀರು ಥಕಥಕನೆ ಕುದಿದುರಿದು, ಗಿಡಮರ, ಪರ್ವತ ಗಿರಿಂಗಳು ಸರಭರನೆ ಮುರಿದುರುಲಿ, ಧಡಂ ಧಡಂ ಎಂದು ಬಿದ್ದೆದ್ದು ಪುಡಿಪುಡಿಯಾಗಿ, ಹುಡಿಹುಡಿಯಾಗಿ, ಮೀನು ಮತ್ಸ್ಯಂಗಳು      ಉಷ್ಣೋದಕದ ಭೀತಿಯಿಂ ಭಯಪಟ್ಟು ಕಂಗಾಲಾಗಿ ಕಾತರಮಾಗೀ"                                                                       ಒಂದು ಸಲ ಉಸಿರೆಳೆದುಕೊಂಡು, ಹೀರೋ ಮುಂದುವರಿಸಿದ ಅಸಂಪೂರ್ಣವಾಗಿದ್ದ ಆ ಮೊತ್ತಮೊದಲ ವಾಕ್ಯವನ್ನು.                                                                  "ತಿಮಿಂಗಿಲಗಳು ಬಾಯಿಂದ ನೊರೆಯುಗುಳಿ  ದಿಗ್ಭ್ರಾಂತವಾಗಿವಾಗಿ ಮರ, ವೃಕ್ಷಂಗಳಂ ಏರಿ ಕುಳಿತಾಗ, ಕಾಡು ಕಾನನ ಅಟವಿಯೋಳ್ ಗಿರಿ ಗಹ್ವರಗಳೋಳ್ ಪವಡಿಸಿರುವ ಗಂಧಸಿಂಧೂರ, ಪುಲಿ, ಸಿಂಹ, ಸಿಂಹಿಣಿ, ಕೇಸರಿಗಳ ಕನಸಂ ಕೆಟ್ಟು, ಅಡಬರಿಸಿ ಅಂ ಎಂದು ಊರಗಲ ಮಾರಗಲ ಬಾಯ್ತೆರೆ ತೆರೆದು, ಆನೆ, ಗಜಾದಿಂಗಳು ಸೊಂಡಿಲಿ ಗಿಂಡಿ ಲಿಯಂ ಮೇಲೆತ್ತಿ, ಮುಗಿಲಾಕಾಶ, ಗಗನ, ಚಂದ್ರ ಸೂರ್ಯ ನಕ್ಷತ್ರ ಮಂಡಲಕ್ಕೆತ್ತಿ ಕಿರ್ ರ್ ರ್ ಎಂದು ಕಿರಲಿ, ಭರ್ ರ್ ರ್  ಎಂದು ಭೋರ್ಗರೆದು ಭೂ ನೆಲಕ್ಕೆ ಅಪ್ಪಳಿಸೆ ಭೂಮಾತೆ ನೆಲತಾಯಿ ಪೃಥ್ವಿಯೊಡತಿ ಹೊಟ್ಟೆ ಸೀಳಿ ಹೋ  ಎಂದಳುತಳುತ ಕಂಣೀರು ಕಂಬನಿ ಸುರಿಸುರಿಸಿ, ಫಲಕುಸುಮದ ಭಾರದಿಂದ ಬಗ್ಗಿದ ತರುಷಂಡಂಗಳು ತತ್ತರಿಸಿ,ಶುಕ ಪಿಕ ಶಾರಿಕಾದಿ  ವಿಹಂಗಳು ಶೋಕಿಸಿ, ಲತಾ ಬಳ್ಳಿಗಳು ಭಸ್ಮೀಭೂತಮಾಗಿ ಬೂದಿಯಾಗಿ, ಶಿವನ ಮಸ್ತಕದೋಳ್ ರಾರಾಜಿಸುವ ಲಲಾಟ ಭಸ್ಮಮಾಗೀ."
      ಈಗ ನನ್ನ ಮುಕ್ತಕ. 
      ಓದಿದ್ದು 
      " ಆ ಮನೆ ಹುಡುಗಿಯು  ಫಸ್ಟ್ ಕ್ಲಾಸು ಬಂದಳು 
      ನೋಡಿ ಕಲಿಯಬೇಕು ನೀನು"
      "ಹಾಗೆಯೆ  ಮಾಡಿಯೆ  ಅವಳನ್ನೆ ನೋಡಿಯೆ 
      ಫೇಲಾದೆನಲ್ಲಮ್ಮ ನಾನು"!  
       

      ಗುರುವಾರ, ಏಪ್ರಿಲ್ 11, 2013

      ವಿಜಯ ಸಂವತ್ಸರದ ಯುಗಾದಿ.
      ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
      ಫೋ: ೨೩೬೭೬೭೬         Email: sahithyaprakashana@yahoo.co.in
      ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.

      • ಸಾಕ್ಷಾತ್ ಕಲೆಯೇ ಆಗಿದ್ದ ಬಂಗಾರಿ ಕಲೋಪಾಸಕರ, ಕಲಾಪೋಷಕರ ಉದರಾಶ್ರಯ, ಪೋಷಣೆ, ಪ್ರೋತ್ಸಾಹಗಳಿಂದ ಪಾಪದ ಮುದ್ರೆಯನ್ನು ಪಡೆದು, ಜಗತ್ತಿಗೆ ತೋರಿಸಲು ಕೈಯಲ್ಲಿ ಹಿಡಿದು ನಿಂತಿದ್ದಾಳೆ ವಂಚನೆಯ ಕುರುಹಾದ ಹೆಂಣು ಮಗುವೊಂದನ್ನು!          
               ಅದಾರೋ ಗದರಿಕೊಂಡರು. 
               "ಕೇಳಿಸಲಿಲ್ಲವೇನೇ ಆಗಲೆ ಹೇಳಿದುದು? ಮುಂದೆ ಹೋಗು."
               ಇನ್ನೂ ಎಷ್ಟು ಮುಂದು ಹೋಗಬೇಕು ಬಂಗಾರಿ!
               ಕಾಂಪ್ಲಿಮೆಂಟರಿ ಪಾಸು ಪಡೆದ ಗಂಡಂದಿರೊಂದಿಗೆ ಬಂದು ನಾಟಕಗಳನ್ನು ನೋಡಿದ್ದ ಗರತಿ ಗೌರಮ್ಮಗಳು ಈ ಪಾಪಿ ಬಂಗಾರಿಯನ್ನು                  ಗುರುತಿಸಿ ತಂತಮ್ಮಲ್ಲಿಯೆ ಏನೇನೋ ಮಾತನಾಡಿಕೊಂಡರು. ಕಡೆಗೊಬ್ಬ ಮಹಾಸತಿ ಅಂದೂಬಿಟ್ಟರು.
       "ಇಂತಹ ಮುಂಡೆಯರಿಂದ ಮನೆಗಳೇ ಹಾಳಾಗುತ್ತವೆ. ಇವಳಿಗೆ ಭಿಕ್ಷೆ ಹಾಕುವುದೂ  ಮಹಾಪಾಪ!"
              ಇದು ಸತ್ಪಾತ್ರ ದಾನವಲ್ಲವೆ?
              ಬಂಗಾರಿಯದು ಈಗ ಸತ್ತ ಪಾತ್ರ. ಚಂಚಲಾಕ್ಷಿಯ ಅಕ್ಷಿಯಿಂದ ಚಂಚಲತೆ ಮಾಯವಾಗಿದ್ದಿತು. 
              ಮುರಿದ ಬೊಂಬೆ ಯಾವ ಮಗುವಿಗೂ ಬೇಡ!

      ಈಗ ನನ್ನ ಮುಕ್ತಕ. 

        ಡಾಕ್ಟರ್ ಶಾಪಿನಲ್ಲಿ.... 
        "ಈ ಔಷಧಿಯನೊಂದುಬಾಟಲಿ ಕುಡಿದರೆ
        ಮತ್ತೆ ಬರಬೇಕಿಲ್ಲವಲ್ಲ?"
        "ಹಾಗೆಂದೆ ಕಾಣುತ್ತೆ, ಇದನೊಯ್ದ ಜನರಲಿ
        ಒಬ್ಬರೂ ತಿರುಗಿ ಬಂದಿಲ್ಲ."!

        ಶುಕ್ರವಾರ, ಮಾರ್ಚ್ 22, 2013


        ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
        ಫೋ: ೨೩೬೭೬೭೬         Email: sahithyaprakashana@yahoo.co.in
        ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
        • ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕೆ ಮುಹೂರ್ತವನ್ನಿಟ್ಟುಕೊಟ್ಟರು ವಶಿಷ್ಠ ಮಹರ್ಷಿಗಳು. ಅದೇ ಶುಭ ಮುಹೂರ್ತಕ್ಕೆ ಸರಿಯಾಗಿ ಶ್ರೀರಾಮ ಅರಣ್ಯವಾಸಕ್ಕಾಗಿ ಅಯೋಧ್ಯೆಯಿಂದ ಹೊರ ಹೊರಟ, ಸೀತಾ ಲಕ್ಷ್ಮಣ ಸಮೇತನಾಗಿ. 
        • ಇಬ್ಬರು ಮಹಾನುಭಾವರ ಮಿಳನ ಎಂದೂ ವ್ಯರ್ಥವಾದುದಿಲ್ಲ ಮಾನವ ಚರಿತ್ರೆಯಲ್ಲಿ. 
        • ಮಕ್ಕಳಾಗಲಿಲ್ಲ ಎಂದಾವ ಹೆಂಣೂ ಬಾವಿಯಲ್ಲಿ ಹಾರಿಕೊಳ್ಳುವುದಿಲ್ಲ. ಇಂದಲ್ಲ, ಇನ್ನು ಮುಂದಾದರೂ ಆದಾವು ಎಂದು  ಮೊದಲ ಕೆಲವು ವರ್ಷಗಳನ್ನು ಆಶೆಯಲ್ಲಿ ಕಳೆಯುತ್ತದೆ. ಆಮೇಲೆ ಇದ್ದೇ ಇವೆ ನೂರೆಂಟು ದೇವರುಗಳು. ಕಲ್ಲು, ಗುಂಡುಗಳ ಪೂಜೆ, ಜೋಡಿ ಮರಗಳನ್ನು ಸುತ್ತುವುದು, ದಾನ ಧರ್ಮವೆಂದು ಮನೆಯಲ್ಲಿದ್ದುದನ್ನಿಷ್ಟು ಅವರಿವರಿಗೆ ಕೊಟ್ಟು ಹಾಳು ಮಾಡುವುದು. ಸೋತೆ ಎಂದು ದೇವನೂ ಕೈ ಎತ್ತಿದ ಮೇಲೆ ಮನುಷ್ಯ ಪ್ರಯತ್ನ-ಲೇಡಿ ಡಾಕ್ಟರ ಬಳಿ ಲೇವಡಿ!
        • ನಾಟಕ ಕಂಪನಿಯ ಸರ್ವೀಸು, ಕಾಫಿ ಹೋಟೆಲ್ ಸರ್ವೀಸು, ಕಾಮಿನಿಯರ ಸರ್ವೀಸು, ಇವೆಲ್ಲವೂ ಹೋಲ್ ಇಂಡಿಯಾ ಸರ್ವೀಸ್ ಗಳು.                                                                                                                           ಒಂದೇ ಊರು, ಒಂದೇ ಸ್ಥಾನ ಎಂಬ ಹುಚ್ಚು ಇಲ್ಲ ಇವರಿಗೆ. ಇಂದು ಇಲ್ಲಿ, ನಾಳೆ ಇನ್ನೆಲ್ಲಿಯೋ! ಬಂಗಾರುಪೇಟೆ ರೈಲ್ವೇ ಸ್ಟೇಷನ್ ಹೋಟೆಲಲ್ಲಿ ಕಪ್ಪು ತೊಳೆಯುವ ಹುಡುಗ ನಾಲ್ಕೇ ದಿನಗಳಲ್ಲಿ ಬೊಂಬಾಯಿಯಲ್ಲಿ ಗಲ್ಲಿಯ ಪೂರಿ, ಭಾಜಿ ದುಕಾಣ್ ಒಂದರಲ್ಲಿ ಎಂಜಲ ಎಲೆ ತೆಗೆಯುತ್ತಿರುತ್ತಾನೆ. ಬೆಂಗಳೂರಿನ ಪೈಪ್ ಲೈನ್ ನಲ್ಲಿ ಸಾಧಾರಣ `ಪ್ರಾಕ್ಟೀಸ್' ಇರುವ ಬಡ ಸೌಂದರ್ಯ ಜೀವಿಯೊಬ್ಬಳು ರೇಸ್ ಸೀಜನ್ ನಲ್ಲಿ ಮದರಾಸಿನ ಹೈಕ್ಲಾಸ್ ಹೋಟೆಲಲ್ಲಿ ತೇಲಬಹುದು. ಇಂದು ಶಿವಕುಮಾರ ಸಾಮ್ರಾಜ್ಯ ಸಂಗೀತ ನಾಟಕ ಕಂಪನಿಯಲ್ಲಿ ಸೇವಕ-ನಾಳೆಯೇ ಗೋಕರ್ಣದ ಶಾಸ್ತ್ರೀ ಕಲಾಮಂಡಲಿಯಲ್ಲಿ ಅಶ್ವತ್ಥಾಮ. ಪಾಕಿಸ್ತಾನದಲ್ಲಿ ಕನ್ನಡ ಕಬೀರ್ ಹಾಕಿದರೆ ಅಲ್ಲಿಗೂ ರೆಡಿ!
        • "ನಾನಯ್ಯಾ, ನಾನು. ಈ ಕಂಪನಿಯನ್ನು ಕಟ್ಟಿ ನಿಲ್ಲಿಸಿ ಈ ಸ್ಥಿತಿಗೆ ತಂದವನು ಯಾವ ಸೂಳೇಮಗ ಗೊತ್ತೇ? ನಾನು. .."
        ಈಗ ನನ್ನ ಮುಕ್ತಕ:

        ಸತ್ಯವ್ರತ!
        "ಸತ್ಯವೆಂಬುದು ಬಹು ಬೆಲೆಯುಳ್ಳದ್ದೆನ್ನುತ 
        ತಿಳಿದಿರುವವನಯ್ಯ ನಾನು."
        "ಇರಬೇಕು, ಅದಕಾಗಿ ಜತನದಿ ಬಳಸುವೆ 
        ಅಪರೂಪಕೊಮ್ಮೊಮ್ಮೆ ಅದನು!"
                                                                * * * * * * * * * * * *

          ಶನಿವಾರ, ಮಾರ್ಚ್ 16, 2013


          ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
          ಫೋ: ೨೩೬೭೬೭೬         Email: sahithyaprakashana@yahoo.co.in
          ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
          • ಸೂಳೆಯ ಮನೆಗೂ ಎರಡೆರಡು ಬಾಗಿಲು ಬೇಡವೆಂದರೆ ಬಾಗಿಲು ಮಾಡುವ ಬಡಗಿ ಬದುಕುವುದಾದರೂ ಎಂತು?
          • ಅನೇಕಾನೇಕ ದೊಡ್ಡ ಮನುಷ್ಯರ ಇಲ್ಲದ ಮಾನವನ್ನು ಕಾಯ್ದಿರುವುದು, ಇಂದು ಕಾಯುತ್ತಿರುವುದು, ಮುಂದೂ ಕಾಯುವುದು ಆ ದೊಡ್ಡ ಮನುಷ್ಯರೆನಿಸಿಕೊಂಡವರ ನಡತೆಯಂತೂ ದೇವರಾಣೆಯಾಗಿಯೂ ಅಲ್ಲ. ಸೂಳೆಯ ಮನೆಯ ಹಿತ್ತಲ ಬಾಗಿಲಿಗೆ ಅವರು ಮತ್ತು ಅವರ ವಂಶಜರು ನಿತ್ಯವೂ ಕೈ ಮುಗಿಯಬೇಕು, ಕುಂಕುಮವಿಟ್ಟು ಪೂಜಿಸಬೇಕು ಅದನ್ನು. ಸಮಯೋಚಿತವಾಗಿ ಪಾರಾಗಲು ಅದು ಇದ್ದಿತೆಂದು ಅಲ್ಲವೇ ಇವರೆಲ್ಲರೂ ಇಂದು ತಲೆಯೆತ್ತಿ ಓಡಾಡುತ್ತಿದ್ದಾರೆ? ಇಲ್ಲದಿದ್ದರೇನಿತ್ತು? 
          • ಬೆನ್ನ ಮೇಲೆ ಕೈಯಿಟ್ಟು ಸಲುಗೆಯಿಂದ ನುಡಿದರು ಮೇನೇಜರು. ನೂರು ವರ್ಷಗಳ ಗೆಳೆಯರಾಗಬಲ್ಲರು ಸೆರೆ ಕುಡುಕರು, ಮೂರೇ ನಿಮಿಷಗಳಲ್ಲಿ.          
                  ಆದರೆ ಒಂದು. ಆಗ ಹೆಚ್ಚು ಕುಡಿದಿರಬೇಕು, ಇಲ್ಲವೆ ಅದರ ದಾಹದಿಂದ ತತ್ತರಪಡುತ್ತಿರಬೇಕು. 
          • "ಸೋಡಾ ಮುಗಿದಂತಿದೆ. ನೀರಾದರೆ ನಡೆಯುತ್ತೆ ತಾನೇ?" ಗ್ಲಾಸುಗಳಿಗೆ ಸಮನಾಗಿ ಸುರುವಿ ಕೇಳಿದರು ಮೇನೇಜರು ವಿಷಕಂಠರಾಯರು.  "ಅದೂ ಇಲ್ಲದೆಯೂ ನಡೆಯುತ್ತದೆ ಸ್ವಾಮೀ, ನನಗೆ. ನೀರಿಗೂ ನನಗೂ ಕೊಂಚ ಅಷ್ಟಕ್ಕಷ್ಟೆ. ಸ್ನಾನ ಗೀನ ಮುಂತಾದ ಕೇವಲ ಬಹಿರಂಗ ಶುದ್ಧಿಗೆ ಮಾತ್ರವೆ ನಾನು ನೀರನ್ನು ಉಪಯೋಗಿಸುತ್ತೇನೆ."       
          • ಸಾವಕಾಶವಾಗಿ ಕೊಂಚ ಕೊಂಚವನ್ನೇ ಸ್ವೀಕರಿಸುತ್ತಿದ್ದ ವಿಷಕಂಠರಾಯ ಕೇಳಿದ, ಮುಸಿಮುಸಿ ನಕ್ಕು. "ಅದೇನು ವಾಸುದೇವರಾಯರೆ! ನೀವು ಕುಡಿಯುವಾಗ ಕಂಣೇಕೆ ಮುಚ್ಚುತ್ತೀರಿ?"        
                    "ಇದು `ಬ್ರಾಹಿಬಿಷನ್ ಏರಿಯಾ ಅಲ್ಲವೇನು ಸ್ವಾಮಿ? ಕುಡಿಯುವಾಗ ಯಾರೂ ನೋಡಕೂಡದು ನೋಡಿ.  ಮೊಟ್ಟಮೊದಲು ನಾನೇ ನೋಡಕೂಡದೆಂದು ಕಂಣು ಮುಚ್ಚಿಬಿಡುತ್ತೇನೆ. ತಾವೂ ಮುಗಿಸಿಬಿಡಿ, ಅದನ್ನೆಷ್ಟು ಹೊತ್ತು ಗುಟುಕರಿಸುತ್ತ ಕೂಡುತ್ತೀರಿ? ಪಾನಪ್ರತಿಬಂಧ ನಿರೋಧವಿರುವಲ್ಲಿ..." 
          "ಏನಂದಿರಿ? ಪಾನಪ್ರತಿಬಂಧ ನಿರೋಧವೆ?" ನಕ್ಕರು ಇಬ್ಬರೂ. 

          ಇನ್ನು ನನ್ನ ಮುಕ್ತಕ, ಇದೋ:

          ದುರದೃಷ್ಟ 
          ಅನುಕೂಲದೊಳಗೆಯೆ ಆಪತ್ತು ಬರುವುದು 
          ಅದೃಷ್ಟ ಸರಿಯಿಲ್ಲದರಿಗೆ. 
          ಬೀಸಿದ ಗಾಳಿಗೆ ಮಳೆಯಲಿ ಹಿಡಿದಿದ್ದ 
          ಕೊಡೆಯೆ ಮಗುಚಿಕೊಂಡ ಹಾಗೆ!
                                                                             * * * * * * * * * *



            ಶುಕ್ರವಾರ, ಮಾರ್ಚ್ 1, 2013


            ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
            ಫೋ: ೨೩೬೭೬೭೬         Email: sahithyaprakashana@yahoo.co.in
            ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
            ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
            • `ಹಾ, ತಿಳಿಯಿತು ಈಗ. ನಿದ್ರೆಗೆ ಮುಖ್ಯವಾಗಿ ಬೇಕಾದುದು ಹಾಸಿಗೆ, ಮಂಚವಲ್ಲ. ನಿದ್ರಾಭಂಗಕ್ಕೆ ಕಾರಣ ಒಂದೇ, ಅದು ಯೋಚನೆ. ಯಾವ ಚಿಂತೆಯೂ ಇಲ್ಲ ಈ ಗಮಾರನಿಗೆ. ಹಾಯಾಗಿ ಗೊರಕೆ ಕೊರೆಯುತ್ತಿದ್ದಾನೆ.'
            •  ಹಾಳು ಬಾಳಿನ ಲೆಕ್ಕಾಚಾರವೇ ಹೀಗೆ. ಬದುಕುತ್ತೇನೆ ಎಂದು ಒದ್ದಾಡಿದಳು ಸುಭದ್ರ, ಸಾಯಿ ಎಂದಿತು. ಸಾಯಲು ಸನ್ನದ್ಧಳಾಗಿ  ಹೊರಬಂದಳು. ಬದುಕು ನಡೆ ಎಂದಿತು. ಇರುತ್ತೇನೆ ಎನ್ನುವಾಗ ಇರುವುದೆಷ್ಟು ಕಷ್ಟವೋ, ಹೋಗುತ್ತೇನೆ  ಎನ್ನುವಾಗ ಹೋಗುವುದೂ ಅಷ್ಟೇ ಕಷ್ಟ, ಪಾಪ!
            • "ನನಗೂ ನಿಮ್ಮ ಹೆಂಡತಿಗೂ ಒಂದೇ ಭೇದ. ಮೊದಲು ಮದುವೆ, ಆಮೇಲೆ ಇನ್ನೊಂದು ಆಕೆಯೊಟ್ಟಿಗೆ. ಅದು ಇನ್ನೂ ಆಗಲಿಲ್ಲ. ನನ್ನ ಸಮಾಚಾರ ಹಾಗಲ್ಲ. ಆಮೇಲೆ ಮದುವೆಯಾಗೋಣ. ಮೊದಲು ಇನ್ನೊಂದು ಆಗಲಿ ಬನ್ನಿ."
            • ಊರೆಲ್ಲವೋ ನಕ್ಕ ಮೇಲೆ ಕಿವುಡ ನಕ್ಕ ಎಂಬಂತೆ, ಲೋಕಕ್ಕೆಲ್ಲವೂ ತಿಳಿದ ಮೇಲೆ ಶ್ರೀನಿವಾಸಶೆಟ್ಟರಿಗೆ ತಿಳಿಯಿತು. 
            ಇಗೋ ನನ್ನ ಮುಕ್ತಕ:
            ಅದೃಷ್ಟ 
            ಆಪತ್ತಿನೊಳಗೆಯೆ ಅನುಕೂಲವಿರುವುದು 
            ಅದೃಷ್ಟ ಸರಿಯಿದ್ದವರಿಗೆ. 
            ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಬಾಯ್ದೆರೆದು 
            ತಲೆಯ ಮೇಲಕೆ ಬಿದ್ದ ಹಾಗೆ!

              ಶುಕ್ರವಾರ, ಫೆಬ್ರವರಿ 1, 2013


              ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
              ಫೋ: ೨೩೬೭೬೭೬         Email: sahithyaprakashana@yahoo.co.in
              ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
              ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
              • `ನನ್ನನ್ನು ಹಾಳು ಮಾಡಿದಳು ಆ ಮುಂಡೆ' ಅನ್ನುವ ಗಂಡುಗಳು ಅನೇಕ.
                        `ಆ  ಚಾಂಡಾಲನಿಂದಲೇ ನಾನು ಹಾಳಾದೆ' ಎಂದು ಹೇಳುವ ಹೆಂಣುಗಳು ಹೇರಳವಾಗಿವೆ.

                         ಯಾರೂ ಯಾರನ್ನೂ ಹಾಳು ಮಾಡಿಲ್ಲ ಎಂಬುದು ಸತ್ಯವಾದ ಮಾತು. ಹಾಳಾಗಿರುವ ಪ್ರತಿಯೊಬ್ಬನೂ,          ಪ್ರತಿಯೊಬ್ಬಳೂ ಆತ್ಮ ನಿರೀಕ್ಷೆ ಮಾಡಿಕೊಂಡು ತನ್ನ ಪತನಕ್ಕೆ ತಾನೇ ಕಾರಣವನ್ನು ಹುಡುಕಿಕೊಂಡರೆ, ಅದು ದೊರೆಯುವುದು ತನ್ನಲ್ಲಿ ಮಾತ್ರವೇ ಆಲ್ಲದೆ ಬೇರೆಲ್ಲಿಯೂ ಅಲ್ಲ. ಆದರೆ ಆ ಆತ್ಮಪರೀಕ್ಷೆಗೆ ಎಲ್ಲಕ್ಕೂ ಮೊಟ್ಟಮೊದಲಾಗಿ ಆ ಇಚ್ಛೆ ಬೇಕು, ತಾನೇ ತನ್ನಿಂದ ಹೊರ ನಿಂತು ನೋಡಲು ರಾಗದ್ವೇ ಷಾತೀತ ದೃಷ್ಟಿ ಬೇಕು, ಅದನ್ನು ಒಪ್ಪಿಕೊಳ್ಳಲು ಮನೋದಾರ್ಢ್ಯ ಬೇಕು, ಆ ಪ್ರಾಮಾಣಿಕತೆಯೂ ಬೇಕು.
              •  ತನ್ನನ್ನು ಕೆಡಿಸಿ, ಹಾಳು ಮಾಡಿ, ಬೀದಿಯ ಭಿಕಾರಿಯನ್ನಾಗಿ ಮಾಡಿದ ಸುಭದ್ರ ತನ್ನ ಪಕ್ಕದ ಮನೆಯ ಇನ್ನೊಬ್ಬನನ್ನೇಕೆ ಹಾಗೆಯೇ ಬಿಟ್ಟಳು?
              • ಹುಳುವನ್ನು ಹುಡುಕುತ್ತ ಅದು ಮಲಗಿದ್ದಲ್ಲಿಗೆ ಹೋಗಿ ಅದರ ರೆಕ್ಕೆಯನ್ನು ಸುಟ್ಟು ಬರುವಂತಹ ದೀಪವು ಇನ್ನೂ ಹುಟ್ಟಲಿಲ್ಲ. ಹುಡುಕುತ್ತ ಬರುವುದು ಸುಡುವ ದೀಪವಲ್ಲ, ಪಾಪ! ಅದಕ್ಕೆ ಅಪವಾದ ಕಟ್ಟುವುದು ಮಹಾಪಾಪ! ಸುಡಿ ಸಿಕೊಳ್ಳುವ ಹುಳುವೇ ಅಡಬರಿಸುತ್ತ ಬಂದು ಅದರಲ್ಲಿ ಬೀಳುತ್ತದೆ. ಸುಟ್ಟುಕೊಂಡು ಸಾಯುತ್ತದೆ.
              • ಪ್ರಭಾಕರ ಮತ್ತು ಸುಭದ್ರರಲ್ಲಿ ಬೆಂಕಿ ಯಾರು? ಹುಳು ಯಾರು? ಇಬ್ಬರೂ ಅಷ್ಟಿಷ್ಟು ಬೆಂಕಿ, ಇಬ್ಬರೂ ಇಷ್ಟಷ್ಟು ಹುಳು. ಒಬ್ಬರನ್ನೊಬ್ಬರು ಬೆಂಕಿಯಾಗಿ ಸುಟ್ಟರು, ಹುಳುವಾಗಿ ಸುಟ್ಟುಕೊಂಡರು, ಕಡೆಗೆ ಪರಸ್ಪರ ಬೈಯುತ್ತ ಕುಳಿತರು.
                            ಈಗ ನನ್ನ ಮುಕ್ತಕ:    

                            ಮುದ್ರಾ ರಾಕ್ಷಸ 
                          " ನಮ್ಮ ರಾಜರ ವಜ್ರಹಾರವ ಕದ್ದರು"
                          ಎಂದಿತ್ತು ಕಳಿಸಿದ್ದ ವರದಿ.
                          "ನಮ್ಮ ರಾಜರು ವಜ್ರಹಾರವ ಕದ್ದರು"
                          ಎಂದಿತ್ತು ಅಚ್ಚಾದ ಸುದ್ದಿ!


                ಶುಕ್ರವಾರ, ಜನವರಿ 25, 2013

                ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
                ಫೋ: ೨೩೬೭೬೭೬         Email: sahithyaprakashana@yahoo.co.in
                ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
                ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
                • "ಐದು, ಆರು ಆದಾಗ ಆಗುವುದೇ ಹಾಗೆ. ನನಗೂ ಆಗೆಲ್ಲ ಬಹು ಕಷ್ಟವೆನಿಸುತ್ತಿತ್ತು. ಹತ್ತು ದಾಟಿತು, ನೋಡಿ. ಯಾವ ಚಿಂತೆಯೂ ಇಲ್ಲ ನಮಗೆ. ಎರಡು ಮಕ್ಕಳಾದರೂ ಅಳುತ್ತಲಿದ್ದರೆ ಚೆನ್ನಾಗಿ ನಿದ್ರೆ ಬೀಳುತ್ತೆ, ನನಗೆ ನಮ್ಮ ಮನೆಯವರಿಗೆ."
                • ಗಂಡ ಸತ್ತ ದುಃಖವನ್ನು ಮರೆಯಲು ಅಷ್ಟೇನೂ ಕಷ್ಟವಾಗಲಿಲ್ಲ ಆ ಪ್ರಾಣಿಗೆ. ಗಂಡ ಸತ್ತನೆಂಬ ಕಾರಣಕ್ಕೆ ತಾನು ವಿಕಾರವಾದುದಕ್ಕಾಗಿ ಆಗಿದ್ದ ದುಃಖ? ಗಂಡ ಸತ್ತದ್ದು ಒಮ್ಮೆ, ಒಂದೇ ಒಂದು ಸಲ. ತಾನು ಜನ್ಮಾದ್ಯಂತವೂ ಅನುಭವಿಸಬೇಕು ಈ ರೂಪವನ್ನು!
                • ಸಾಕೇನು ಮನುಷ್ಯನಿಗೆ ಅನ್ನ, ಬಟ್ಟೆ ಎರಡೇ? ಜೀವನದಲ್ಲಿ ಜೋಡೆ೦ಬುದು ಬೇಡವೇ? ತಲೆ ಬೋಳಾದ ಮಾತ್ರಕ್ಕೆ ತಲೆಯಲ್ಲಿಯ ವಿಚಾರಗಳೂ ಬೋಳಾಗುತ್ತವೆಯೇ? ಅನ್ನ ಉಣ್ಣುವ ಬಾಯಿಗೆ ಹುಂಣಾದ ಮಾತ್ರಕ್ಕೆ ಹೊಟ್ಟೆಯ ಹಸಿವು ಬಿಡುತ್ತದೆಯೇ? ಅಂಗಸೌಖ್ಯದ ಅರಿವು ಇನ್ನೂ ಸರಿಯಾಗಿ ಆಗಿರಲಿಲ್ಲ ಸುಭದ್ರೆಗೆ, ಆಗಲೇ ವೈಧವ್ಯ. ಸಾಲದುದಕ್ಕೆ ಕೈಲೊಂದು ಮಗು.
                • ತಲೆಗೊಂದು ಮಾತನಾಡಿದರು ಮಡಿವಂತ ಮಹಾಶಯರುಗಳು. ಇವರಲ್ಲಿ ಸುಭದ್ರೆಯೊಂದಿಗೆ ಸುಖಪಟ್ಟವರೆ ಹೆಚ್ಚು ಎಂದರೆ ಎಷ್ಟೂ ಸುಳ್ಳಲ್ಲ. ಸಿಕ್ಕು ಬಿದ್ದವನು ಕಳ್ಳ. ಪಾರಾದವನು ಪಂಚಾಯತಿದಾರ!
                ಈಗ ನನ್ನ ಮುಕ್ತಕ:

                ಸ್ವಭಾವ:
                  ಸರಸ ಕಾವ್ಯಗಳೆಷ್ಟನೋದುತಲಿದ್ದರು
                  ಸಖಿ ನಿನ್ನ ಮುಖ ಮಾತ್ರ ಗಂಟು.
                  ಸಿಹಿಯಾದ ಪಾಯಸದೊಳಗಾಡುತಿದ್ದರು
                  ಸಿಹಿಯಾಗುವುದುಂಟೆ ಸೌಟು?

                  ಶುಕ್ರವಾರ, ಜನವರಿ 18, 2013

                  ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
                  ಫೋ: ೨೩೬೭೬೭೬         Email: sahithyaprakashana@yahoo.co.in
                  ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. 
                  ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
                  • ಮುಚ್ಚಿದ ಬಾಗಿಲನ್ನು ನೋಡಿ ಅಳುತ್ತ ಕೂಡುವುದು ಅವಿವೇಕಿಯ ಲಕ್ಷಣ. ಒಂದು ಮುಚ್ಚಿದಾಗ ಮತ್ತೊಂದು ತಾನೇ ತೆರೆದಿರುತ್ತದೆ. ಮಾರ್ಚಿನಲ್ಲಿ ಫೇಲಾದೆ ಎಂದು ಅಳುವ ವಿದ್ಯಾರ್ಥಿ ನಿರಾಶಾವಾದಿ-ಮುಂದೊಂದು ಸೆಪ್ಟೆಂಬರ್ ಕಾಣಲಿದೆ ಎನ್ನುವ ವಿದ್ಯಾರ್ಥಿ  ಆಶಾವಾದಿ. ಆಮೇಲೆಯೂ ಇದ್ದೇ ಇದೆ  ಮತ್ತೊಂದು ಮಾರ್ಚಿ ಎನ್ನುವವ ವಿಶಿಷ್ಟಾಶಾವಾದಿ. 
                  • ಬಾರ್ ಗೆ ಒಮ್ಮೆ ಬಂದವನು ಬಾರಿಬಾರಿಗೂ ಬರಬೇಕೆನ್ನುತ್ತಾನೆ. ಅದು ಬಾರ್ ನ ಆಚಾರವೂ ಅಹುದು, ಬರುವವನ ಗ್ರಹಚಾರವೂ ಅಹುದು. ಹಣವು ಕೊಡುವ ಹಲವಾರು ಸವಲತ್ತುಗಳಲ್ಲಿ ಹಾಳಾಗುವುದೂ ಒಂದು.
                  • ಕುಳಿತು ಉಂಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬುದು  ಆ ಎಂದಿನದೋ ಒಂದು ಹಳೆಯ ಗಾದೆಮಾತು. ಕುಳಿತು ಕುಡಿಯುವವನಿಗೆ? ಕುಬೇರನ ಹೊನ್ನೂ ಸಾಲದು. ಹೀಗಾಗದಿರಲೆಂದೋ ಏನೋ, ಕೆಲವರು ನಿಂತು ಕುಡಿದು, ಕಡೆಗೆ ಕುಡಿದು ಮಲಗುತ್ತಾರೆ; ಕೂಡುವ ದಡ್ಡತನವನ್ನೇ ಮಾಡುವುದಿಲ್ಲ.
                  • ಮುದ್ದುವೀರ ದೇವರಂತ ಹುಡುಗ, ದಾವಣಗೇರಿಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ. ಈಗಲೂ ದೇವರಂತಹನೆ ಅನ್ನಿ, ಅವತಾರಗಲಷ್ಟೇ ಬೇರೆ-ಆಗ ರಾಮಾವತಾರ, ಈಗ ಕೃಷ್ಣಾವತಾರ!
                  ಈಗ ನನ್ನ ಮುಕ್ತಕ-
                  ಸುಭಾಷಿತ 
                  ಅತಿಯಾದ ಬಳಕೆಯು ಬೆಲೆಯನು ಕಳೆವುದು 
                  ಇದಕೊಂದು ಸಾಮತಿ ಇಹುದು.
                  ಮಲಯ ಪರ್ವತದಲ್ಲಿ ಚಂದನ ವೃಕ್ಷವು 
                  ಭಿಲ್ಲರ ಒಲೆಯುರಿಸುವುದು.
                                                                     * * * * * * * * * * * * 

                  ಶುಕ್ರವಾರ, ಜನವರಿ 4, 2013

                  ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
                  ಫೋ: ೨೩೬೭೬೭೬         Email: sahithyaprakashana@yahoo.co.in
                  ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ
                  ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
                  • ಬರೀ`ಸತ್ತ'ಎಂದರೆ ನಿಜವಾಗಿಯೂ ಸತ್ತ ಎಂದಷ್ಟೆ ಅರ್ಥ. `ಸತ್ತ, ಸೂಳೇಮಗ'ಎಂದರೆ ಅಷ್ಟೇ ನಿಜವಾಗಿಯೂ ಸತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿದಂತಾಯಿತಲ್ಲ?
                  • "ಮುಂದಿನ ಜನ್ಮಗಳಲ್ಲಿ ರಾಜನಾಗಿ ಹುಟ್ಟುವ ಯೋಗವು, ಈಗ ವೇಷ ಹಾಕುವುದರಿಂದ ಹೋಗಿಬಿಡುತ್ತದೆ" ಎಂದರು ಅಜ್ಜಮ್ಮ.
                  • ನಾಟಕವನ್ನೇನೋ ಎಲ್ಲರೂ ಪ್ರೀತಿಸುತ್ತೇವೆ. ಕಾಂಪ್ಲಿಮೆಂಟರಿ ಫ್ಯಾಮಿಲೀ ಪಾಸೂ  ದೊರೆತರಂತೂ ಸರೇ ಸರೆ.
                  • ಸರಿಯಾದವರು ಮುಂದು ಬರಬೇಕು, ದೂರ ನಿಂತು ಟೀಕೆ ಮಾಡುವ ಬದಲು; ಸರಿ ಇಲ್ಲದವರನ್ನು ದೂರ ಸರಿಸಲಿಕ್ಕಲ್ಲ, ಸನಿಯ ಕರೆದು ತಿದ್ದಿ ಸರಿ ಮಾಡಿಕೊಡಲು.
                  • ಆ ಮನೆಯಲ್ಲಿ ಆಗಲಿದ್ದ ಮದುವೆ ಆಗಲಿಲ್ಲ-ಈ ಕಂಪನಿ ಮನೆಯಲ್ಲಿ ಮಗುವಾಯಿತು ಅವಳಿಗೆ. ಬಂಗಾರ, ಬಂಗಾರದ ಕತ್ತೆಯಾದಳು.
                  ನನ್ನ ಮುಕ್ತಕ

                  ಹೊಂದಿಕೆ 
                  ಕೃಷ್ಣನ ಮೈ ಬಣ್ಣ ಆಕಾಶನೀಲಿಯು 
                  ಬಲರಾಮನದು ಸ್ವರ್ಣವರ್ಣ.
                  ಪೀತಾಂಬರನು ಕೃಷ್ಣ ನೀಲಾಂಬರನು ರಾಮ 
                  ಎಂತಹ ಹೊಂದಿಕೆಯಣ್ಣ!
                                                                                               * * * * * * * * * *