ಮಂಗಳವಾರ, ಸೆಪ್ಟೆಂಬರ್ 11, 2012

ಈಗ ಸಾಹಿತ್ಯ ಲೋಕವನ್ನು ಪ್ರವೇಶಿಸೋಣ.  ಮುಂದಿನ ಹೇಳಿಕೆಗಳು ಬೀ chi (ರಾಯಸಂ ಭೀಮಸೇನ ರಾವ್ 1913-1980)  ಅವರ `ಕಮಲೆಯ ಓಲೆಗಳು' ಪುಸ್ತಕದಿಂದ(ಚತುರ್ಥ ಮುದ್ರಣ2010). ಪ್ರಕಾಶಕರು `ಸಮಾಜ ಪುಸ್ತಕಾಲಯ, ಧಾರವಾಡ-580001. ಫೋ:2791616.
ಇವುಗಳನ್ನು ಓದಿದ ನಂತರ ಮೂಲ ಪುಸ್ತಕವನ್ನೂ, ಅವರ ಇತರ ಪುಸ್ತಕಗಳನ್ನೂ , ಕನ್ನಡದ ಇತರ ಪುಸ್ತಕಗಳನ್ನೂ  ಓದಬೇಕೆಂಬ ಅಪೇಕ್ಷೆ ಓದುಗರಲ್ಲಿ ಹುಟ್ಟಲಿ ಎಂಬುದು ನನ್ನ ಅಪೇಕ್ಷೆ. ಹಾಗೆ ಆದೀತು ಎಂಬುದು ನನ್ನ ನಿರೀಕ್ಷೆ.
  • ಕುಡಿಯುವುದೂ ತಪ್ಪಲ್ಲ, ಕಾರ್ ಡ್ರೈವ್  ಮಾಡುವುದೂ ತಪ್ಪಲ್ಲ. ಆದರೆ ಕುಡಿದು ಡ್ರೈವ್ ಮಾಡುವುದು ಮಾತ್ರ ತಪ್ಪು.
  • ಅನೇಕ ಬಾರಿ ಈ ಸಾಹಿತಿಗಳಿಗೆ ಬದುಕಿನಕಿಂತಲೂ ಸಾವೇ ಹೆಚ್ಚು ಸುಖವೆನಿಸುತ್ತದೆ, ಅಗ್ಗವೆನಿಸುತ್ತದೆ.
  • ಅವನು ಸತ್ತರಾಯಿತೇ ? ಹೌದು. ಇವನು ನಿಜವಾಗಿಯೂ ಸತ್ತಿದ್ದಾನೆ ಎಂದು ಹೇಳುವ ಸರ್ವಾಧಿಕಾರ ಡ್ಯೂಟಿ ಡಾಕ್ಟರ್ ಆದ ನನ್ನದಲ್ಲವೇ? ನಾನು ಹೇಳುವವರೆಗೂ ಅವನಿಗೆ ಸಾಯುವ ಹಕ್ಕೂ ಇಲ್ಲ.
  • ಯಾವನಿಗಯ್ಯಾ ಈ ಸರಕಾರ ಕೊಡುವ ಸಂಬಳದಿಂದ ಹೊಟ್ಟೆ ತುಂಬುತ್ತದೆ? ಅದು ದೇವರು ಕೊಟ್ಟದ್ದು. ಇದು ನಮ್ಮ ಬುದ್ಧಿ ಕೊಟ್ಟದ್ದು. ಇರಲಿ ಬಿಡು, ಇದು ಭಾರತ ಅಲ್ಲವೇ? ವಾಚ್ ಮನ್ ನಿಂದ ಹಿಡಿದು ಚೇರ್ ಮನ್ ವರೆಗೂ ನೀತಿ ಒಂದೇ. ರೀತಿಗಳಷ್ಟೆ ಬೇರೆ ಬೇರೆ.  
  • ಅದಕ್ಕಾಗಿ ಎಕ್ಸ್ ರೇ  ಮಾಡತಕ್ಕದ್ದೆಂದು ನಿರ್ಧರಿಸಿದ್ದೇವೆ. ನಿರ್ಧಾರ ಮಾಡುವುದು ನಮ್ಮ ಕೈಯಲ್ಲಿತ್ತು . ಮಾಡಿದೆವು. ಆದರೆ ನಾವು? ನಿರಾಧಾರಿಗಳು.  ನಮ್ಮ ಆಸ್ಪತ್ರೆಯಲ್ಲಿ ಅತ್ಯುತ್ತಮವಾದ ಇಂಪೋರ್ಟೆಡ್ ಎಕ್ಸ್ ರೇ  ಪ್ಲಾಂಟ್ ಇದೆ.  ಬ್ರ್ಯಾಂಡ್ ನ್ಯೂ . ಒಳ್ಳೆಯ ಅನುಭವವುಳ್ಳ ಸೀ ಜನ್ ಡ್  ರೇಡಿಯಾಲಜಿಸ್ಟ್ ಇದ್ದಾರೆ-ವೆಂಕಟರಾಮಯ್ಯ.  ಅಸ್ಸಲು ಫಿಲಂಸ್ ಇಲ್ಲ. ಯಾಕಿಲ್ಲ? ಸಪ್ಲೈ ಇಲ್ಲ. ಆರು ತಿಂಗಳಿಂದ! ಸಪ್ಲೈ ಯಾಕಿಲ್ಲ? ಒಂದೇ ಉತ್ತರ-ಇದು ಗವರ್ನಮೆಂಟ್ ಆಸ್ಪತ್ರೆ ಸಾರ್!
  • ಒಂದು ಮಾತು-ನೀನು ಯಾರ ಮುಂದೂ ಹೇಳಬೇಡ. ಒಂದು ವೇಳೆ ಹೇಳಿದರೂ ನಾನು ಹೇಳಿದೆ ಎಂದು ಮಾತ್ರ ಮೊದಲೇ ಹೇಳಬೇಡ. ಇಲ್ಲಿಗೆ ಬಂದವರಲ್ಲಿ ಸತ್ತವರು ಶೇಕಡಾ ಕೇವಲ ನೂರೇ ನೂರು. ಈ ನೂರರಲ್ಲಿ ಔಷಧಿ ಇಲ್ಲದೆ ಸತ್ತವರು ಶೇಕಡಾ ಎಂಭತ್ತು. ಇನ್ನಿಪ್ಪತ್ತು ತಪ್ಪು ಔಷಧಿ ಸೇವನೆಯಿಂದ. ಈ ಆಸ್ಪತ್ರೆಯಲ್ಲಿ ನಿನ್ನ ಮಿತ್ರ ಬದುಕಬೇಕು. ಆಗಲಿ, ದೇವರಿದ್ದಾನೆ.        
         ಇವತ್ತಿಗೆ ಇಷ್ಟು. 

ಈಗ ನನ್ನದೊಂದು ಮುಕ್ತಕ: ಮೊದಲ ಬಾರಿಗೆ ಓದುವಾಗ, ಯಾಲಕ್ಕಿ, ಮೂಟೆಯು, ದಾಟಿ ಹೋ , ದರುಕೂಡ , ಹೀಗೆ ವಿಭಾಗ ಮಾಡಿಕೊಂಡು ಓದಿದರೆ ಸರಾಗ.

ಸತ್ಕಾರ್ಯ 
ಯಾಲಕ್ಕಿ ಮೂಟೆಯು ದಾಟಿ ಹೋದರು ಕೂಡ 
ಪರಿಮಳ ಉಳಿವುದು ಹಿಂದೆ.
ಗೈದ  ಸತ್ಕಾರ್ಯಕೆ ಫಲವಿಲ್ಲ ಎನಬೇಡ 
ಅದು ಕೂಡಿ ಬರುವುದು ಮುಂದೆ.
                                                   ---
       


2 ಕಾಮೆಂಟ್‌ಗಳು: