ಈಗ ಸಾಹಿತ್ಯ ಲೋಕವನ್ನು ಪ್ರವೇಶಿಸೋಣ. ಮುಂದಿನ ಹೇಳಿಕೆಗಳು ಬೀ chi (ರಾಯಸಂ ಭೀಮಸೇನ ರಾವ್ 1913-1980) ಅವರ `ಕಮಲೆಯ ಓಲೆಗಳು' ಪುಸ್ತಕದಿಂದ(ಚತುರ್ಥ ಮುದ್ರಣ2010). ಪ್ರಕಾಶಕರು `ಸಮಾಜ ಪುಸ್ತಕಾಲಯ, ಧಾರವಾಡ-580001. ಫೋ:2791616.
ಇವುಗಳನ್ನು ಓದಿದ ನಂತರ ಮೂಲ ಪುಸ್ತಕವನ್ನೂ, ಅವರ ಇತರ ಪುಸ್ತಕಗಳನ್ನೂ , ಕನ್ನಡದ ಇತರ ಪುಸ್ತಕಗಳನ್ನೂ ಓದಬೇಕೆಂಬ ಅಪೇಕ್ಷೆ ಓದುಗರಲ್ಲಿ ಹುಟ್ಟಲಿ ಎಂಬುದು ನನ್ನ ಅಪೇಕ್ಷೆ. ಹಾಗೆ ಆದೀತು ಎಂಬುದು ನನ್ನ ನಿರೀಕ್ಷೆ.
- ಕುಡಿಯುವುದೂ ತಪ್ಪಲ್ಲ, ಕಾರ್ ಡ್ರೈವ್ ಮಾಡುವುದೂ ತಪ್ಪಲ್ಲ. ಆದರೆ ಕುಡಿದು ಡ್ರೈವ್ ಮಾಡುವುದು ಮಾತ್ರ ತಪ್ಪು.
- ಅನೇಕ ಬಾರಿ ಈ ಸಾಹಿತಿಗಳಿಗೆ ಬದುಕಿನಕಿಂತಲೂ ಸಾವೇ ಹೆಚ್ಚು ಸುಖವೆನಿಸುತ್ತದೆ, ಅಗ್ಗವೆನಿಸುತ್ತದೆ.
- ಅವನು ಸತ್ತರಾಯಿತೇ ? ಹೌದು. ಇವನು ನಿಜವಾಗಿಯೂ ಸತ್ತಿದ್ದಾನೆ ಎಂದು ಹೇಳುವ ಸರ್ವಾಧಿಕಾರ ಡ್ಯೂಟಿ ಡಾಕ್ಟರ್ ಆದ ನನ್ನದಲ್ಲವೇ? ನಾನು ಹೇಳುವವರೆಗೂ ಅವನಿಗೆ ಸಾಯುವ ಹಕ್ಕೂ ಇಲ್ಲ.
- ಯಾವನಿಗಯ್ಯಾ ಈ ಸರಕಾರ ಕೊಡುವ ಸಂಬಳದಿಂದ ಹೊಟ್ಟೆ ತುಂಬುತ್ತದೆ? ಅದು ದೇವರು ಕೊಟ್ಟದ್ದು. ಇದು ನಮ್ಮ ಬುದ್ಧಿ ಕೊಟ್ಟದ್ದು. ಇರಲಿ ಬಿಡು, ಇದು ಭಾರತ ಅಲ್ಲವೇ? ವಾಚ್ ಮನ್ ನಿಂದ ಹಿಡಿದು ಚೇರ್ ಮನ್ ವರೆಗೂ ನೀತಿ ಒಂದೇ. ರೀತಿಗಳಷ್ಟೆ ಬೇರೆ ಬೇರೆ.
- ಅದಕ್ಕಾಗಿ ಎಕ್ಸ್ ರೇ ಮಾಡತಕ್ಕದ್ದೆಂದು ನಿರ್ಧರಿಸಿದ್ದೇವೆ. ನಿರ್ಧಾರ ಮಾಡುವುದು ನಮ್ಮ ಕೈಯಲ್ಲಿತ್ತು . ಮಾಡಿದೆವು. ಆದರೆ ನಾವು? ನಿರಾಧಾರಿಗಳು. ನಮ್ಮ ಆಸ್ಪತ್ರೆಯಲ್ಲಿ ಅತ್ಯುತ್ತಮವಾದ ಇಂಪೋರ್ಟೆಡ್ ಎಕ್ಸ್ ರೇ ಪ್ಲಾಂಟ್ ಇದೆ. ಬ್ರ್ಯಾಂಡ್ ನ್ಯೂ . ಒಳ್ಳೆಯ ಅನುಭವವುಳ್ಳ ಸೀ ಜನ್ ಡ್ ರೇಡಿಯಾಲಜಿಸ್ಟ್ ಇದ್ದಾರೆ-ವೆಂಕಟರಾಮಯ್ಯ. ಅಸ್ಸಲು ಫಿಲಂಸ್ ಇಲ್ಲ. ಯಾಕಿಲ್ಲ? ಸಪ್ಲೈ ಇಲ್ಲ. ಆರು ತಿಂಗಳಿಂದ! ಸಪ್ಲೈ ಯಾಕಿಲ್ಲ? ಒಂದೇ ಉತ್ತರ-ಇದು ಗವರ್ನಮೆಂಟ್ ಆಸ್ಪತ್ರೆ ಸಾರ್!
- ಒಂದು ಮಾತು-ನೀನು ಯಾರ ಮುಂದೂ ಹೇಳಬೇಡ. ಒಂದು ವೇಳೆ ಹೇಳಿದರೂ ನಾನು ಹೇಳಿದೆ ಎಂದು ಮಾತ್ರ ಮೊದಲೇ ಹೇಳಬೇಡ. ಇಲ್ಲಿಗೆ ಬಂದವರಲ್ಲಿ ಸತ್ತವರು ಶೇಕಡಾ ಕೇವಲ ನೂರೇ ನೂರು. ಈ ನೂರರಲ್ಲಿ ಔಷಧಿ ಇಲ್ಲದೆ ಸತ್ತವರು ಶೇಕಡಾ ಎಂಭತ್ತು. ಇನ್ನಿಪ್ಪತ್ತು ತಪ್ಪು ಔಷಧಿ ಸೇವನೆಯಿಂದ. ಈ ಆಸ್ಪತ್ರೆಯಲ್ಲಿ ನಿನ್ನ ಮಿತ್ರ ಬದುಕಬೇಕು. ಆಗಲಿ, ದೇವರಿದ್ದಾನೆ.
ಈಗ ನನ್ನದೊಂದು ಮುಕ್ತಕ: ಮೊದಲ ಬಾರಿಗೆ ಓದುವಾಗ, ಯಾಲಕ್ಕಿ, ಮೂಟೆಯು, ದಾಟಿ ಹೋ , ದರುಕೂಡ , ಹೀಗೆ ವಿಭಾಗ ಮಾಡಿಕೊಂಡು ಓದಿದರೆ ಸರಾಗ.
ಸತ್ಕಾರ್ಯ
ಸತ್ಕಾರ್ಯ
ಯಾಲಕ್ಕಿ ಮೂಟೆಯು ದಾಟಿ ಹೋದರು ಕೂಡ
ಪರಿಮಳ ಉಳಿವುದು ಹಿಂದೆ.
ಗೈದ ಸತ್ಕಾರ್ಯಕೆ ಫಲವಿಲ್ಲ ಎನಬೇಡ
ಅದು ಕೂಡಿ ಬರುವುದು ಮುಂದೆ.
---
super aagidu :) neenu blog baritha idde heladu nange kushi kotidu :):)
ಪ್ರತ್ಯುತ್ತರಅಳಿಸಿlooking forward to read a lot of your good blogs(english nalli type madidake kshame irali ;))
Thnx.
ಪ್ರತ್ಯುತ್ತರಅಳಿಸಿ