ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ. ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
- ಅಣ್ಣ ಅ.ನ.ಕೃ.
- ಕೃಷ್ಣರಾಯರು ಭಾರತದ ಆಚೆ ಹೋಗಲಿಲ್ಲ ಮಾತ್ರವಲ್ಲ, ದಿಲ್ಲಿಗೂ ಹೋಗಲಿಲ್ಲ.
- ಜೀವನವೇ ಹೀಗೆ. ಏನೂ ಅರ್ಥವಾಗದ ಅನೇಕ ಶ್ರೀಮಂತರು ಸ್ವಂತ ಖರ್ಚಿನಲ್ಲಿ ಎಲ್ಲ ದೇಶಗಳನ್ನೂ ಸುತ್ತಾಡಿ ಬರುತ್ತಾರೆ. ಅವರು ಇಲ್ಲಿಂದ ಒಯಿದುದು ಏನೂ ಇಲ್ಲ, ಅಲ್ಲಿಂದ ತಂದುದೂ ಏನೂ ಇಲ್ಲ- ಸುಂಕವನ್ನು ತಪ್ಪಿಸಿ ತಂದ ಕೆಲ ಕಳ್ಳ ವಿದೇಶೀ ವಸ್ತುಗಳ ಹೊರತು.
- ಯಾರದೋ ತಪ್ಪಿನಿಂದ ಅಧಿಕಾರಕ್ಕೆ ಬಂದ ರಾಜಕೀಯ ಪ್ರಭುಗಳೂ ಆ ಸಮ್ಮೇಳನ, ಈ ಸಮ್ಮೇಳನ ಎಂದು ವಿದೆಶಗಳಿಗೆಲ್ಲ ಹೋಗುತ್ತಿದ್ದಾರೆ. ದಡ್ಡ ಶ್ರೀಮಂತರಂತೆ ಸ್ವಂತ ಖರ್ಚಿನಲ್ಲಲ್ಲ. ಬಡ ಜನತೆಯ ಸ್ವಂತ ಖರ್ಚಿನಲ್ಲಿ.
- ಅವರಲ್ಲಿ ಅನೇಕರು ಇಲ್ಲಿಂದ ಒಯಿದುದೇನು? ಅಲ್ಲಿಂದ ತಂದುದೇನು? ಅಲ್ಲಿ ಹೆಚ್ಚಾಗಿ ಕುಡಿದು, ಹೋಗಿದ್ದ ಸಮ್ಮೇಳನವನ್ನು ಹಾಯಾಗಿ ಮರೆತು ಮಲಗಿ, ಎಚ್ಚರವಾದಾಗ ಎದ್ದು ಬಂದಿದ್ದಾರೆ.
- ಮರಳಿ ಬಂದಿದ್ದಾರೆ ಎಂಬುದಕ್ಕೆ ಸಂತೋಷಪಡಬೇಕು. ಯಾರು? ಸಂತೋಷಪಡಬೇಕಾದುದು ನಮ್ಮ ದೇಶವಲ್ಲ. ಅವರವರ ಮನೆಯವರು.
- ಎಲ್ಲ ಖರ್ಚುಗಳನ್ನು ಭರಿಸುತ್ತೇವೆ, ಬನ್ನಿ ಎಂದು ಕರೆದರೂ ಕನ್ನಡ ಹಿರಿ ಸಾಹಿತಿ ಕೃಷ್ಣರಾಯರಿಗೆ ಹೋಗಲು ಅನುವು ಇಲ್ಲ. ಖರ್ಚು ಕಳೆದರೆ ಆಯಿತೆ? ಅನ್ನದ ತಪ್ಪೇಲಿಗೆ ದುಡಿಯಬೇಡವೇ? ಇದು ನಮ್ಮ ಕನ್ನಡ ಸಾಹಿತಿಗಳ ಆರ್ಥಿಕ ಪರಿಸ್ಥಿತಿ.
- ಅಂತೂ ಕಡಲೆ ಇರುವವರಿಗೆ ಹಲ್ಲಿಲ್ಲ, ಹಲ್ಲಿದ್ದವರಿಗೆ ಕಡಲೆ ಇಲ್ಲ.
ಹೋಟೆಲಿನಲ್ಲಿ.
"ಸೀಮೆ ಎಣ್ಣೆಯ ನಾತ ಬರುತಿದೆಯಲ್ಲಯ್ಯ,
ಚಹವೇನು ನೀನು ಕೊಟ್ಟದ್ದು?"
"ಅಲ್ಲ ಸಾರ್ ಅದು ಕಾಪಿ, ಚಹವಾಗಿದ್ದರೆ ಕೆಟ್ಟ
ಹರಳೆಣ್ಣೆ ನಾತ ಬರುತಿತ್ತು"!
* * * * * * * * *
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ