ಶುಕ್ರವಾರ, ನವೆಂಬರ್ 30, 2012


ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
  • ಆದಕಾರಣ ನಮ್ಮ ಭಾರತ ಪವಿತ್ರವಾದ ದೇಶ ಎಂಬುದು ಒಂದು ವಾದ.
  • ನೆಲವನ್ನು ಮುಗಿಲನ್ನು ಹೊಲಿವರುoಟೆಂದವರ । ಹೊಲಿದರೂ ಹೊಲೆವರೆನಬೇಕು ಮೂರ್ಖನಲಿ । ಕಲಹವೇ ಬೇಡ ಸರ್ವಜ್ಞ ।। ಎಂದು ಸರ್ವಜ್ಞ  ಕವಿ ಹೇಳಿಲ್ಲವೇ?
  • ಯಾವಾಗ ಧರ್ಮ ಖಿಲವಾಗುತ್ತದೋ, ಅಧರ್ಮ ಪ್ರಬಲವಾಗುತ್ತದೋ ಆವಾಗ ನಾನು ಸಾಧುಗಳ ರಕ್ಷಣೆ, ಧರ್ಮದ ಪುನರುದ್ಧಾರಗಳಿಗಾಗಿ ಯುಗ-ಯುಗದಲ್ಲೂ ಹುಟ್ಟುತ್ತೇನೆ. ಹಾಗಾದರೆ ಧರ್ಮಕ್ಕೆ ಚ್ಯುತಿ ಬರದಿದ್ದಲ್ಲಿ ಭಗವಂತ ಅವತರಿಸುವುದಿಲ್ಲ ಎಂದಂತಾಯಿತು. ಭಗವಂತ ನಮ್ಮ ಭಾರತದಲ್ಲಿಯೇ ತನ್ನ ದಶಾವತಾರಗಳನ್ನು ಎತ್ತಿದ...... ಎಂಬುದರ ಅರ್ಥ, ಹತ್ತು ಬಾರಿಯೂ ಈ ಭಾರತದಲ್ಲಿಯೇ ಧರ್ಮಕ್ಕೆ ಧಕ್ಕೆ ಬಂತು ಎಂದು ಗ್ರಹಿಸೋಣವೇ? ಬೇರಾವ ಯುರೋಪಿಯನ್ ರಾಷ್ಟ್ರದಲ್ಲಿಯಾಗಲಿ, ಆಫ್ರಿಕಾ, ರಸಿಯಾಗಳಲ್ಲಿ ಧರ್ಮಗ್ಲಾನಿ ಆಗಲೇ ಇಲ್ಲ. ನಮ್ಮ ಭಾರತದಲ್ಲಿಯೇ ಆಯಿತು ಎಂದೊಂದು ಕಾರಣದಿಂದ ನಮ್ಮ ದೇಶ ಪವಿತ್ರವಾದ ದೇಶ, ನಮ್ಮದು ಪುಣ್ಯಭೂಮಿ ಎಂದು ಹೇಳಿಕೊಳ್ಳುವುದು ಸರಿಯೇ, ಜಾಣತನವೇ ಅಥವಾ ಹೆಮ್ಮೆಪಟ್ಟುಕೊಳ್ಳುವಂತಹ ಅಂಶವೇ?
  • ಇದನ್ನು ಹೆಮ್ಮೆಪಟ್ಟುಕೊಳ್ಳುವಂತಹ ವಿಷಯ ಎಂದಾದಲ್ಲಿ, ನಮ್ಮಲ್ಲಿಂದ ಅನೇಕರು ಧರ್ಮವನ್ನು ಹಾಳುಮಾಡುವುದರಲ್ಲಿ ತೊಡಗಿರುವಾಗ, ಅವರೆಲ್ಲರೂ ಮೇಲಿಂದಮೇಲೆ ಪರಮಾತ್ಮನ ಅವತಾರಕ್ಕೆ ಆಸ್ಪದ ಮಾಡಿಕೊಟ್ಟು, ನಮ್ಮ ದೇಶವನ್ನು ಇನ್ನೂ ಹೆಚ್ಚು ಪವಿತ್ರಗೊಳಿಸುತ್ತಿದ್ದಾರೆ, ಉಪಕರಿಸುತ್ತಿದ್ದಾರೆ ಎಂದಾಯಿತು. ಅವರೆಲ್ಲರಿಗೂ ನಾವು ಋಣಿಗಳು!
  • ನಮ್ಮೂರಲ್ಲಿ ಪೋಲಿಸ್ ಸ್ಟೇಶನ್ ಆಗಿದೆ ಎಂದು ಹೆಮ್ಮೆಪಟ್ಟುಕೊಳ್ಳುವುದರಲ್ಲಿ ಎಷ್ಟು ಅರ್ಥವಿದೆಯೋ, ನಮ್ಮ ಭಾರತದಲ್ಲಿಯೇ ದೇವರು ದಶಾವತಾರಗಳನ್ನೂ ಮಾಡಿದ್ದಾನೆ ಎಂದು ಹೆಮ್ಮೆಪಟ್ಟುಕೊಳ್ಳುವುದರಲ್ಲೂ ಅಷ್ಟೇ ಅರ್ಥವಿದೆ. 
  • ಈಗ ಯೋಚಿಸಿ, ನಮ್ಮ ಭಾರತ ಪುಣ್ಯಭೂಮಿಯೇ? ಪವಿತ್ರದೇಶವೇ?
ಈಗ ನನ್ನ ಮುಕ್ತಕ.

ಹೋಟೆಲಿನಲ್ಲಿ 
"ಮರೆವಾಯ್ತೆ ಸಾರ್?" ಪ್ರೊಫೆಸರರ ಕೇಳಿದ ಮಾಣಿ,
 "ಇಲ್ಲ, ಬಕ್ಷೀಸ್ ಕೊಟ್ಟೆನಲ್ಲ."
"ಸರಿ ಸ್ವಾಮಿ ಬಕ್ಷೀಸು ಕೊಟ್ಟಿರಿ, ಆದರೆ
ತಿಂಡಿಯನೇ  ತಿನ್ನಲಿಲ್ಲ!"
                                                                     * * * * * * * * * *

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ