ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ :
)- ಇಲ್ಲಿ ನೋಡಿ! ಕ್ಷಯರೋಗದಿಂದ ಕ್ಯಾನ್ಸರ್ ರೋಗದಿಂದ ಸತ್ತವರು ಬಹಳ ಸ್ವಲ್ಪ ಸ್ವಾಮೀ! ಎಲ್ಲಿಯೋ ನೂರಕ್ಕೆ ಒಬ್ಬರೋ ಇಬ್ಬರೋ ಈ ರೋಗದಿಂದ ಸತ್ತಿರಬೇಕಷ್ಟೆ. ಉಳಿದ ತೊಂಭತ್ತೆಂಟು ತೊಂಭತ್ತೊಂಭತ್ತು ಜನ ಬರೀ ರೋಗದ ಹೆಸರನ್ನು ಕೇಳಿಯೇ ಸತ್ತಿದ್ದಾರೆ.
- ನಾಲಗೆಗೆ ರಜಕೊಟ್ಟು, ಕಿವಿಗೆ ಕೆಲಸವನ್ನು ಕೊಟ್ಟೆ. ಇದು ಸಾಧಾರಣವಾಗಿ ಅನೇಕರಿಗೆ ಸಾಧಿಸಲು ಕಷ್ಟವಾದ ಕೆಲಸ ಅಲ್ಲವೆ?
- ನನ್ನನ್ನು ಆ ಆಸ್ಪತ್ರೆಯಲ್ಲಿ ಹೇಗೆ ನೋಡಿಕೊಂಡರು ಎಂಬುದನ್ನು ಪ್ರತ್ಯೇಕವಾಗಿ ಹೇಳಲೇಬೇಕಿಲ್ಲ. ನೀವೇ ಊಹಿಸಿ, ನನ್ನಂತಹ ರೋಗಿ ಸತ್ತರೆ ಅವರಿಗೇ ನಷ್ಟ. ಬೇಗ ಗುಣವಾದರೆ ಇನ್ನೂ ಹೆಚ್ಚು ನಷ್ಟ. ಈ ಎರಡೂ ಆಗದಂತೆ ಅತ್ಯಂತ ಜಾಗರೂಕತೆಯಿಂದ ನೋಡಿಕೊಂಡರು ಅನ್ನಿ.
- "ನಿಮ್ಮ ತಲೆ! ನಿಮ್ಮ ದೇವರೂ ನಿಮ್ಮ ಮಟ್ಟದವನೇ ಅನ್ನಿ. ಪ್ರಾರ್ಥಿಸಿದರೆ ಮಾತ್ರವೇ ರೋಗವನ್ನು ಗುಣ ಮಾಡುವ ದೇವರಿಗೂ, ಲಂಚಕ್ಕೆ ಒಳ್ಳೆಯ ಔಷಧಿ ಕೊಡುವ ಸರಕಾರೀ ಡಾಕ್ಟರರಿಗೂ ಏನು ಸ್ವಾಮೀ ಭೇದ?"
- ಅವಿದ್ಯಾವಂತರ ಮೌಢ್ಯ ಕ್ಷಮಾರ್ಹ-ಆದರೆ ವಿದ್ಯಾವಂತರ ಮೌಢ್ಯ?
- ಉಲ್ಲಸಿತ ಮನಸ್ಸು, ಪ್ರಸನ್ನವಾದ ಮನಸ್ಸು, ತುಂಬು ಹೃದಯದ ನಗೆ ಉಳ್ಳವನ ಬಳಿ ಯಾವ ರೋಗವೂ ಬಾರದು. ಬಂದರೂ ಅವನಲ್ಲಿ ಎರಡು ದಿನ ಉಳಿಯಲಾರದು.
- "ದೇವರನ್ನು ನಂಬಿದವರು ಆಸ್ಪತ್ರೆಯ ಅಧಿಕಾರಿಗಳಿಗೆ, ಪೇದೆಗಳಿಗೆ ಲಂಚ ಏಕೆ ಸ್ವಾಮಿ ಕೊಡಬೇಕು?"
- "ಏಕೆ? ಮುಖವನ್ನೇಕೆ ತೊಳೆಯಬೇಕು? ಹುಲಿ ಸಿಂಹ ಮುಂತಾದವು ಮುಖ ತೊಳೆಯುತ್ತವೆಯೋ?" ಎಂದು ಕೇಳಿದೆ. "ಇಲ್ಲ ಕತ್ತೆ ಎತ್ತುಗಳೂ ತೊಳೆಯುವುದಿಲ್ಲ" ಎಂದಳು.
ಈಗ ನನ್ನ ಮುಕ್ತಕ. ಧಾಟಿಗೆ ಒಂದು ಬಾರಿ - ಬೋರ್ಡಿನ, ಮೇಲಿನ, ಅಕ್ಷರ, ಗಳಪೈಕಿ, ಹೀಗೆ ಬಿಡಿಸಿಕೊಂಡು ಓದಿ.
ಕಣ್ಣಿನ ಡಾಕ್ಟರಲ್ಲಿ.
" ಬೋರ್ಡಿನ ಮೇಲಿನ ಅಕ್ಷರಗಳ ಪೈಕಿ
ಎಷ್ಟೋದಬಲ್ಲಿರಿ ರಾಯ್ರೆ?
ಮೇಲಿಂದ ನೋಡಿರಿ" "ಸರಿ ಸರಿ ಗೊತ್ತಾಯ್ತು,
ಆ ಬೋರ್ಡು ಎಲ್ಲಿದೆ ಡಾಕ್ಟ್ರೆ?"
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ