ಶುಕ್ರವಾರ, ಅಕ್ಟೋಬರ್ 26, 2012


ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
ಇವತ್ತಿನ ಪ್ರಜಾವಾಣಿಬ್ಲಾಗಿಲನು ತೆರೆದು... ಅಂಕಣದಲ್ಲಿ  ಈ ಬ್ಲಾಗನ್ನು ಪರಿಚಯಿಸುವ ಅರ್ಥಪೂರ್ಣವಾದ ಲೇಖನ ಬಂದಿದೆ. ಆ ಬಗ್ಗೆ 
ಅಂಕಣಕಾರರಿಗೂ ಪತ್ರಿಕೆಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
  • "ಅದೆಲ್ಲ ಪ್ರಶ್ನೆ ಸಮಾಜಕ್ಕೆ ಸಂಬಂಧವಿಲ್ಲ. ತಲೆ ಇದ್ದರಲ್ಲವೆ ಅದರಲ್ಲಿ ಪ್ರಶ್ನೆಗಳೇಳುವುದು ? ದುಂಡು ಜಗತ್ತಿಗೆ ರುಂಡವಿಲ್ಲ, ಸ್ವಾಮೀ!"
  • ನೀತಿಯನ್ನು ಬಿಟ್ಟು ಬಾಳುವ ಪ್ರಜೆಗಳೇ ಹೆಚ್ಚಿರುವಾಗ ಹಳಿಯನ್ನು ಬಿಟ್ಟು ಓಡುವ ಸ್ವಾತಂತ್ರ್ಯ ರೈಲಿಗೆ ಮಾತ್ರ ಏಕೆ ಬೇಡ?
  • "ಹಾಗೂ ಅಲ್ಲ, ಹೀಗೂ ಅಲ್ಲ, ಅವರವರ ಸಂಸ್ಕೃತಿ ಅವರವರನ್ನು ಕಾಯಬೇಕಾಗಲಿ, ಅಪ್ಪ ಅಮ್ಮ ಕಾಯಲು ಆಗುತ್ತದೆಯೇ?"
  • ಸಂಸ್ಕೃತಿ ಎಂಬುದು ಮುಳ್ಳು ಬೇಲಿ. ಹೆಂಣಿನ ಶೀಲವನ್ನು ಕಾಯಲು ಅದೊಂದೇ ಸಾಕು.
  • ಸಾಲಂಕೃತ ಅಂದರೆ ಸಾಲವನ್ನು ಮಾಡಿ ಕನ್ನೆಗೆ ಮದುವೆ ಮಾಡಿ ಹೊರಸಾಗಿಸಿದರು.
  • ಕಾಲರಾಯ ನುಂಗಲಾರದ ದುಃಖ ಎಂಬುದಿದೆಯೇ, ಈ ಸೃಷ್ಟಿಯಲ್ಲಿ? ವೃದ್ಧಾಪ್ಯದಲ್ಲಿ ಯೌವನದ ಮಗನನ್ನು ಕಳೆದುಕೊಂಡು ಮರೆತವರಿದ್ದಾರೆ.
*ಮುಂದಿನ ಬ್ಲಾಗ್ ಬರವಣಿಗೆ ಮುಂದಿನ ಶುಕ್ರವಾರ.
ಈಗ ನನ್ನ ಮುಕ್ತಕ.

ಹಲ್ಲಿನ ಡಾಕ್ಟರಲ್ಲಿ....
"ಒಂದು ಹಲ್ಲನು ಕಿತ್ತು ಎರಡು ಹಲ್ಲಿನ ಫೀಜು 
ನೀವು ಕೇಳುವುದು ಏತಕ್ಕೆ?"
"ಈ ಹಲ್ಲು ಕಿತ್ತಾಗ ನೀ ಕೂಗಿಕೊಂಡಾಗ 
ಓಡಿ ಹೋದನು ಒಬ್ಬ, ಅದಕೆ!"            
                                                     **********

`

    ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ