ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ :
)- ಸುಳ್ಳನ್ನು ನಂಬಿದಷ್ಟು ಸುಲಭವಾಗಿ ಯಾವ ಸಮಾಜವೂ ಸತ್ಯವನ್ನು ನಂಬಲು ಸಾಧ್ಯವಿಲ್ಲ.
- ಇದು ಆತ್ಮಚರಿತ್ರೆ. ಜಗತ್ತಿನ ಮುಂದು ತನ್ನ ಆತ್ಮವನ್ನು ಬೆತ್ತಲೆಯಾಗಿ ನಿಲ್ಲಿಸಬೇಕು.ಅದಕ್ಕೆ ಬೇಕಾದುದು ಒಂದೇ ಒಂದು-ಬೌದ್ಧಿಕ ಪ್ರಾಮಾಣಿಕತೆ. ಇದು ಇಲ್ಲದವನು ಆತ್ಮಚರಿತ್ರೆ ಬರೆಯುವ ಉದ್ಧಟತನಕ್ಕೆ ಎಂದೂ ಕೈಹಾಕಬಾರದು.
- ಜೀವನದ ಬರೀ ಗೆಲುವುಗಳನ್ನಷ್ಟೇ ಲಿಸ್ಟ್ ಮಾಡಿ ಸಾಲಾಗಿ ಪೋಣಿಸಿ ಬರೆದರೆ ಅದು ಆತ್ಮಚರಿತ್ರೆ ಆಗುವುದಿಲ್ಲ. ಆತ್ಮಪ್ರತಿಷ್ಠೆ ಚರಿತ್ರೆ ಆಗುತ್ತದದು.
- ಗಾಂಧೀಜಿಯವರನ್ನೇ ಪೂರ್ತಿಯಾಗಿ ಮರೆತಿರುವ ಭಾರತದಲ್ಲಿ ಅವರು ಹೇಳಿರುವ ಒಂದು ಮಾತನ್ನು ಮರೆಯುವುದರಲ್ಲಿ ಏನೂ ಆಶ್ಚರ್ಯವಿಲ್ಲ.
- ನಮ್ಮ ದೇಶದ ಚರಿತ್ರೆಯಲ್ಲಿ ಒಬ್ಬನೇ ಗಾಂಧಿ, ಒಬ್ಬರೇ ಲಾಲ್ ಬಹದ್ದೂರ್ ಶಾಸ್ತ್ರಿ. ಅನಂತರದವರೆಲ್ಲ ಎಲೆಕ್ಷನ್ ಗಾಂಧಿಗಳು, ಬೈ ಎಲೆಕ್ಷನ್ ಶಾಸ್ತ್ರಿಗಳು.
- ಪ್ರಾಮಾಣಿಕ ಕಳ್ಳ, ಸತ್ಯಸಂಧನಾದ ರಾಜಕೀಯ ಪುಢಾರಿ, ಸತಿ ಸೂಳೆ! ಹೀಗೂ ಉಂಟೆ? ಯಾಕಿರಬಾರದು?
ನಾದ
`ನಾನೆಷ್ಟು ಚೆನ್ನಾಗಿ ಹಾಡಿದೆ ಗೊತ್ತೇನು?
ನಾದ ತುಂಬಿತು ಸಭೆಯೊಳಗೆ'
`ಇರಬೇಕು, ಅದರಿಂದ ಜಾಗವೆ ಸಾಲದೆ
ಜನ ಹೋಗುತಿದ್ದರು ಹೊರಗೆ!'
***********
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ