ಸೋಮವಾರ, ಅಕ್ಟೋಬರ್ 15, 2012


ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
  • ಸುಳ್ಳನ್ನು ನಂಬಿದಷ್ಟು ಸುಲಭವಾಗಿ ಯಾವ ಸಮಾಜವೂ ಸತ್ಯವನ್ನು ನಂಬಲು ಸಾಧ್ಯವಿಲ್ಲ.
  • ಇದು ಆತ್ಮಚರಿತ್ರೆ. ಜಗತ್ತಿನ ಮುಂದು ತನ್ನ ಆತ್ಮವನ್ನು ಬೆತ್ತಲೆಯಾಗಿ ನಿಲ್ಲಿಸಬೇಕು.ಅದಕ್ಕೆ ಬೇಕಾದುದು ಒಂದೇ ಒಂದು-ಬೌದ್ಧಿಕ ಪ್ರಾಮಾಣಿಕತೆ. ಇದು ಇಲ್ಲದವನು ಆತ್ಮಚರಿತ್ರೆ ಬರೆಯುವ ಉದ್ಧಟತನಕ್ಕೆ ಎಂದೂ ಕೈಹಾಕಬಾರದು.
  • ಜೀವನದ ಬರೀ ಗೆಲುವುಗಳನ್ನಷ್ಟೇ ಲಿಸ್ಟ್ ಮಾಡಿ ಸಾಲಾಗಿ ಪೋಣಿಸಿ ಬರೆದರೆ ಅದು ಆತ್ಮಚರಿತ್ರೆ ಆಗುವುದಿಲ್ಲ. ಆತ್ಮಪ್ರತಿಷ್ಠೆ ಚರಿತ್ರೆ ಆಗುತ್ತದದು.
  • ಗಾಂಧೀಜಿಯವರನ್ನೇ ಪೂರ್ತಿಯಾಗಿ ಮರೆತಿರುವ ಭಾರತದಲ್ಲಿ ಅವರು ಹೇಳಿರುವ ಒಂದು ಮಾತನ್ನು ಮರೆಯುವುದರಲ್ಲಿ ಏನೂ ಆಶ್ಚರ್ಯವಿಲ್ಲ. 
  • ನಮ್ಮ ದೇಶದ ಚರಿತ್ರೆಯಲ್ಲಿ ಒಬ್ಬನೇ ಗಾಂಧಿ, ಒಬ್ಬರೇ ಲಾಲ್ ಬಹದ್ದೂರ್ ಶಾಸ್ತ್ರಿ.  ಅನಂತರದವರೆಲ್ಲ ಎಲೆಕ್ಷನ್ ಗಾಂಧಿಗಳು, ಬೈ ಎಲೆಕ್ಷನ್ ಶಾಸ್ತ್ರಿಗಳು.
  • ಪ್ರಾಮಾಣಿಕ ಕಳ್ಳ, ಸತ್ಯಸಂಧನಾದ ರಾಜಕೀಯ  ಪುಢಾರಿ, ಸತಿ ಸೂಳೆ! ಹೀಗೂ ಉಂಟೆ? ಯಾಕಿರಬಾರದು?
ಇನ್ನು ಒಂದು ಮುಕ್ತಕ. 
ನಾದ 
`ನಾನೆಷ್ಟು ಚೆನ್ನಾಗಿ ಹಾಡಿದೆ ಗೊತ್ತೇನು? 
ನಾದ ತುಂಬಿತು ಸಭೆಯೊಳಗೆ'
`ಇರಬೇಕು, ಅದರಿಂದ ಜಾಗವೆ ಸಾಲದೆ 
ಜನ ಹೋಗುತಿದ್ದರು ಹೊರಗೆ!' 
                                                          ***********


    ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ