ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ :
)- ಡಾಕ್ಟರ್ ಜಿ. ರಾಂಕ್ ಎಂಬ ಮಾನಸ ಶಾಸ್ತ್ರಜ್ಞ ಈ ಜಾತಿ ಪದ್ಧತಿಯಿಂದ ಮಾನವನ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳ ಒಂದು ಯಾದಿಯನ್ನೇ ಸಿದ್ಧಪಡಿಸಿದ್ದಾನೆ.
- ಜಾತಿ ಒಂದು ಅಗ್ಗದ ಅಫೀಮು.
- ತನ್ನ ಬಗ್ಗೆ ಏನನ್ನೂ ಹೇಳಿಕೊಳ್ಳಲು ಇಲ್ಲದವನು ತನ್ನ ಜಾತಿಯನ್ನು ಹೇಳಿಕೊಳ್ಳುತ್ತಾನೆ.
- ಯಾವನೂ ತನ್ನ ಜಾತಿಗಾಗಿ ನಾಚಿಕೆ ಪಡಬೇಕಾಗಿಲ್ಲ. ಅಂತೆಯೇ ಯಾವನೂ ಹೆಮ್ಮೆಪಟ್ಟುಕೊಳ್ಳಬೇಕಿಲ್ಲ.ಅದಕ್ಕವನು ಜವಾಬ್ದಾರನಲ್ಲವಲ್ಲ?
- ತಪ್ಪು ಮಾಡಿದವನು ಕ್ಷಮಾಪಣೆ ಬೇಡುವುದರಲ್ಲಿ ನಾಚಿಕೆ ಏಕೆ? ತಪ್ಪನ್ನೊಪ್ಪಿಕೊಂಡು ಕ್ಷಮಾಪಣೆ ಬೇಡುವುದು ಸುಸಂಸ್ಕೃತ ಮನುಷ್ಯನ ಮೊಟ್ಟ ಮೊದಲ ಲಕ್ಷಣ.
- ಜಾತಿಗೆ ಬೆಲೆ ಇದೆ, ನೀತಿಗೆ ಬೆಲೆ ಇಲ್ಲ. ಹಣಕ್ಕೆ ಬೆಲೆ ಇದೆ, ಗುಣಕ್ಕೆ ಬೆಲೆ ಇಲ್ಲ. ಮೌಢ್ಯತೆಗೆ ಬೆಲೆ ಇದೆ, ವಿವೇಚನೆಗೆ ಬೆಲೆ ಇಲ್ಲ-ಇದು ನಮ್ಮ ಸಮಾಜ.
- ಜೇಲು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿ ನೂರೆಂಟು ಜಾತಿಗಳ ಜಂಜಾಟವಿಲ್ಲ. ಮೇಲ್ಜಾತಿ, ಕೀಳ್ಜಾತಿ ಎಂಬ ಅಯೋಗ್ಯ ಮತ್ತು ದಡ್ಡ ಕಲ್ಪನೆಗಳಿಲ್ಲ. ಎಲ್ಲರೂ ಒಂದೇ ಜಾತಿ. ನೀವು ಹೊರಗಡೆ ಇನ್ನೂ ಕನಸು ಕಾಣುತ್ತಿರುವ ಜಾತ್ಯತೀತ ಸಮಾಜ ಇಲ್ಲಿ ಎಂದೋ ಹುಟ್ಟಿದೆ.
ಇನ್ನು ಮುಂದಿನ ಮುಕ್ತಕ. ಧಾಟಿ ಹಿಡಿಯಲು ಏನಯ್ಯ ನೀಕೊಟ್ಟ ಚಾಕಪ್ಪಿ ನೊಳಗೊಂದು ನೊಣಬಿದ್ದು ಸತ್ತಿದೆ ಮಾಣಿ ಹೀಗೆ ಬಿಡಿಸಿ ಒಮ್ಮೆ ಓದಿಕೊಳ್ಳಿ.
ಹೋಟೆಲಿನಲ್ಲಿ
"ಏನಯ್ಯ, ನೀ ಕೊಟ್ಟ ಚಾಕಪ್ಪಿನೊಳಗೊಂದು
ನೊಣ ಬಿದ್ದು ಸತ್ತಿದೆ ಮಾಣಿ"
"ಚಾ ಒಳ್ಳೆ ಬಿಸಿಯುಂಟು ನೊಣ ಬಿದ್ದರದರಲ್ಲಿ
ಬದುಕಿರಲಾರದು ಕಾಣಿ!"
************
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ