ಬುಧವಾರ, ಅಕ್ಟೋಬರ್ 3, 2012

ಬೀchi ಯವರ `ಆಟೋ' ಕಾದಂಬರಿಯಿಂದ.....
(ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)

  • "ಬಳ್ಳಾರಿಯ ಬ್ರಾಹ್ಮಣರು ಬಾಳೆಯ ಎಲೆಯಲ್ಲಿ ಉಂಡಂತೆ" ಎಂದೊಂದು ಮಾತು ಚಲಾವಣೆಯಲ್ಲಿದೆ ಆ ಭಾಗದಲ್ಲಿ. ನಾಳೆಗೆ ಕೆಟ್ಟು ಹೋಗಬಹುದಾದ್ದನ್ನು ಅಂದರೆ ಸಾಕಷ್ಟು ಬಾಡಿದ ಎಲೆಯನ್ನೇ, ಇಂದು ಉಪಯೋಗಿಸುವುದು. ನಾಳೆಯೂ ಮತ್ತೆ ಇದೆ ಕತೆಯೇ! ಅಂತೂ ಒಳ್ಳೆಯ ಎಲೆಯಲ್ಲಿ ಉಂಣುವುದು ಇವರ ಹಣೆಯಲ್ಲಿಯೇ ಇಲ್ಲ. ನಾಳೆಗೆ ಕೆಡುವ ಮತ್ತು ಇಂದು ಬಾಡಿದ ಎಲೆ ತಪ್ಪಿದರಲ್ಲವೆ, ಆ ಪ್ರಾಣಿ ಎಂದಾದರೂ ಒಳ್ಳೆಯ ಹೊಚ್ಚ ಹಸಿರು ಎಲೆಯನ್ನು ಹಾಸಿ ಉಂಣಬೇಕು?
  • ಓರ್ವ ಜಾಣನ ಮುಖಕ್ಕೆ ಆರತಿ ಎತ್ತಲು ನೂರೆಂಟು ಬಡಪಾಯಿ ಬಕರಾಗಳು ಗುಂಪು ಕಟ್ಟಬೇಕು.
  • ಜೀವನದಲ್ಲಿ ಆಶಾಭಂಗವನ್ನು ತಪ್ಪಿಸಿಕೊಳ್ಳಲು ಒಂದೇ ಉಪಾಯ. ಯಾವುದನ್ನೂ ಆಶಿಸಲೇಬಾರದು?
  • ಲೋಕದ ರೀತಿಯೇ ಹೀಗೆ-ಕಾಲಿನಿಂದ ಒದೆಯುವವನನ್ನು ಕಂಡು ಕೈ ಮುಗಿಯುತ್ತದೆ, ಕೈ ಮುಗಿಯುವವನ ತಲೆಯ ಮೇಲೆ ಕಾಲಿಡುತ್ತಾ  ನಡೆಯುತ್ತದೆ.
ಇಲ್ಲಿಗೆ `ಆಟೋ'ದಿಂದ ಆಯ್ದದ್ದು ಆಯಿತು. ಇನ್ನು ಶುಕ್ರವಾರ. ಈಗ ನನ್ನದೊಂದು ಮುಕ್ತಕ.
ಸುಭಾಷಿತ 
ಅಕ್ಷರಗಳು ಸಮ ಸಮನಾಗಿ ಇರಬೇಕು 
ಉರುಟು ದೃಢತೆ ಬೇಕು ಮತ್ತೆ.
ಒಂದಕೊಂದಕೆ ಅವು ಮುಟ್ಟದಂತಿರಬೇಕು 
ತರುಣಿಯ ಕುಚಯುಗ್ಮದಂತೆ!
                                                       **********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ