ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ :
)- ಉಪದೇಶ ಕೊಡುವ ಧಾರಾಳತೆಗೆ ನಮ್ಮ ಜನತೆಯಲ್ಲಿ ಕೊರತೆಯೇ? ಮಾಡು ಇಲ್ಲವೇ ಉಪದೇಶ ಮಾಡು ಎಂಬುದೇ ನಮ್ಮ ತತ್ವ ಅಲ್ಲವೇ?
- ಆದರೆ ತಲೆ ಮಾತ್ರವೇ ಮನುಷ್ಯನಲ್ಲವಲ್ಲಾ? ಹೃದಯವೆಂಬುದೂ ಒಂದಿರುತ್ತದೆ ಸ್ವಾಮಿ!
- ಹೃದಯಕ್ಕೆ ತಲೆ ಇಲ್ಲ, ತಲೆಗೆ ಹೃದಯವಿಲ್ಲ, ಆದರೆ ಈ ಎರಡೂ ಮಾನವನಿಗಿರುತ್ತವೆ.
- ಅಧಿಕಾರವೆಂದರೇನು? ಅದೊಂದು ದೇವನ ಹೆಂಡ. ಅದರ ಅಮಲಿನಲ್ಲಿ ಎಲ್ಲವನ್ನೂ ಮರೆಯುತ್ತಾರೆ.
- ತಂದೆ ತಾಯಿಗಳು ಮಕ್ಕಳನ್ನು ಕೆಡಿಸುವುದಕ್ಕೆ ಎರಡು ಆಯುಧಗಳಿವೆ-ಒಂದು ಬೆತ್ತ, ಇನ್ನೊಂದು ಅತಿ ಪ್ರೀತಿ. ಈ ಎರಡನ್ನೂ ಸಮಯೋಚಿತವಾಗಿ ಉಪಯೋಗಿಸಿದರೆ ಮಕ್ಕಳು ಚೆನ್ನಾಗಿಯೇ ಆಗುತ್ತವೆ, ಒಳ್ಳೆಯ ಪ್ರಜೆಯಾಗಿ ಬಾಳುತ್ತವೆ ಕೂಡ.
- "ನಾನು ದೇವರನ್ನು ನಂಬುವುದಿಲ್ಲ. ಆದರೆ ದೈವೀ ಪ್ರತೀಕಾರವೆಂಬುದಂತೂ ಇದ್ದೇ ಇದೆಯಲ್ಲ!"
ಸುಭಾಷಿತ
ಅತಿಯಾದ ಬಳಕೆಯು ಬೆಲೆಯನು ಕಳೆವುದು
ಇದಕೊಂದು ಸಾಮತಿಯಿಹುದು.
ಮಲಯ ಪರ್ವತದಲ್ಲಿ ಚಂದನ ವೃಕ್ಷವು
ಭಿಲ್ಲರ ಒಲೆಯುರಿಸುವುದು.
**********
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ