ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ :
)- ನಗೆ ಯಾರಪ್ಪನ ಆಸ್ತಿಯೂ ಅಲ್ಲ. ಅದನ್ನಾವ ಲಕ್ಷ್ಮೀಪುತ್ರನೂ ಗುತ್ತಿಗೆ ಹಿಡಿದಿಲ್ಲ.
- ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿರುವವರಲ್ಲಿ ಆಳುವವರೇ ಹೆಚ್ಚು.
- ಸುಖ ಪಡುವುದರಲ್ಲಿ ಅಷ್ಟು ಸುಖವಿಲ್ಲ. ಕಷ್ಟದಲ್ಲಿರುವಾಗ ಆಗುವ ಸುಖದ ನೆನಪು ಹೆಚ್ಚಿನ ಸುಖ.
- ಇನ್ನೊಬ್ಬರ ಮನಸ್ಸನ್ನು ಓದಲು ಬರುವಂತಿದ್ದರೆ ಈ ಜಗತ್ತಿನ ಕಥೆಯೇ ಬೇರೆಯಾಗುತ್ತಿತ್ತು ಪ್ರಾಯಶಃ.
- ಜೇಲಿನಲ್ಲಿರುವವರೆಲ್ಲರೂ ಕಳ್ಳರು, ಆದರೆ ಹೊರಕ್ಕಿರುವವರೆಲ್ಲರೂ ಸುಸಂಪನ್ನರೆ? ಗರ್ಭಿಣಿಯಾದ ವಿಧವೆ ಮಾತ್ರವೇ ವ್ಯಭಿಚಾರಿಣಿ ಈ ಧೃತರಾಷ್ಟ್ರ ಸಮಾಜದ ಗಜುಗ ಕಂಣಲ್ಲಿ.
- ವ್ಯಕ್ತಿಗೆ ವ್ಯಕ್ತಿ ನಮಸ್ಕಾರ ಅನ್ನುವುದು ಒಂದು ಸುಸಂಸ್ಕೃತಿಯ ಕುರುಹು. ಸ್ಥಾನ, ಮಾನ ಇವೆಲ್ಲವೂ ಸಾಮಾನ್ಯ ದಡ್ಡರಿಗಷ್ಟೇ.
- ದೇವನ ಸಹಾಯವನ್ನೂ ಎಡಕಾಲಿನಿಂದ ಒದೆಯುವ ಮನೋದಾರ್ಡ್ಯ (ದೊಡ್ಡ ಡ ಎಂದು ಓದಿಕೊಳ್ಳಿ) ಉಳ್ಳವನೇ ನನ್ನ ದೃಷ್ಟಿಯಲ್ಲಿ ದೇವರು.
ನೀತಿ
ಅತಿಯಾಗಿ ಉರಿದರೆ ಅತಿ ಬೇಗ ಆರುವೆ
ಮದ್ಯಸಾರದ ಉರಿಯ ರೀತಿ.
ಮಿತಿಯಿಂದ ಇದ್ದರೆ ಬಹುಕಾಲ ಬಾಳುವೆ
ಹರಳೆಣ್ಣೆ ದೀಪದ ನೀತಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ